<p><strong>ಬೆಂಗಳೂರು:</strong> ಮುಂಬೈ ತಂಡವು ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ನಲ್ಲಿ ರನ್ಗಳ ರಾಶಿ ಪೇರಿಸಿತ್ತು.ಆದರೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಫೈನಲ್ನಲ್ಲಿ ಮಧ್ಯಪ್ರದೇಶದಬೌಲರ್ಗಳು ಮುಂಬೈ ‘ಓಟ’ಕ್ಕೆ ತಡೆಯೊಡ್ಡಿದರು.</p>.<p>ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಮೊದಲ ದಿನದಾಟದ ಮುಕ್ತಾಯಕ್ಕೆ 90 ಓವರ್ಗಳಲ್ಲಿ 5 ವಿಕೆಟ್ಗಳಿಗೆ 248 ರನ್ ಗಳಿಸಿತು. ಈ ಋತುವಿನಲ್ಲಿ 800ಕ್ಕೂ ಹೆಚ್ಚು ರನ್ ಗಳಿಸಿರುವ ಸರ್ಫರಾಜ್ ಖಾನ್ (ಬ್ಯಾಟಿಂಗ್ 40; 125 ಎಸೆತ) ಮತ್ತು ಆಲ್ರೌಂಡರ್ ಶಮ್ಸ್ ಮಲಾನಿ (ಬ್ಯಾಟಿಂಗ್ 12, 43ಎಸೆತ) ಕ್ರೀಸ್ನಲ್ಲಿದ್ದಾರೆ. ಮುಂಬೈ ಇನಿಂಗ್ಸ್ಗೆ ಉತ್ತಮ ಆರಂಭ ನೀಡಿದ ನಾಯಕ ಪೃಥ್ವಿ ಶಾ (47; 79ಎ, 4X5, 6X1) ಮತ್ತು ಯಶಸ್ವಿ ಜೈಸ್ವಾಲ್ (78; 163ಎ) ಅವರ ವಿಕೆಟ್ಗಳನ್ನು ಗಳಿಸಿದ ಬಲಗೈ ಮಧ್ಯಮವೇಗಿ ಅನುಭವ್ ಅಗರವಾಲ್ ಮುಂಬೈ ತಂಡದ ಬೃಹತ್ ಮೊತ್ತದ ಗುರಿಗೆ ಅಡ್ಡಿಯಾದರು.</p>.<p>ಯಶಸ್ವಿ ಕಳೆದ ಮೂರು ಇನಿಂಗ್ಸ್ಗಳಲ್ಲಿಯೂ ಶತಕ ದಾಖಲಿಸಿದ್ದರು. ಇಲ್ಲಿಯೂ ಕೂಡ ಅವರು ಶತಕದತ್ತ ಹೆಜ್ಜೆ ಇಟ್ಟಿದ್ದರು. ಆದರೆ ಊಟದ ನಂತರದ ಅವಧಿಯಲ್ಲಿ ಯಶ್ ದುಬೆ ಪಡೆದ ಕ್ಯಾಚ್ಗೆ ನಿರ್ಗಮಿಸಿದರು.</p>.<p>ಅವರಿಗೆ ಉತ್ತಮ ಜೊತೆ ನೀಡಿದ ಆಫ್ಸ್ಪಿನ್ನರ್ ಸಾರಾಂಶ್ ಜೈನ್ (31ಕ್ಕೆ2) ಅರ್ಮಾನ್ ಜಾಫರ್ ಮತ್ತು ಹಾರ್ದಿಕ್ ತಮೊರೆ ವಿಕೆಟ್ಗಳನ್ನು ಕಬಳಿಸಿ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಸೆಮಿಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಹಾರ್ದಿಕ್ ಮತ್ತು ಎರಡನೇಯದ್ದರಲ್ಲಿ ಜಾಫರ್ ಶತಕ ಗಳಿಸಿದ್ದರು.</p>.<p>ದೇಶಿ ಕ್ರಿಕೆಟ್ನಲ್ಲಿ 'ಚಾಂಪಿಯನ್ ಕೋಚ್’ ಎಂದೇ ಹೆಸರು ಗಳಿಸಿರುವ ಚಂದ್ರಕಾಂತ್ ಪಂಡಿತ್ ಮಾರ್ಗದರ್ಶನದ ಮಧ್ಯಪ್ರದೇಶ ತಂಡದ ಬೌಲರ್ಗಳು ಶಿಸ್ತಿನ ದಾಳಿ ನಡೆಸಿದರು. ಇದರಿಂದಾಗಿ ಮುಂಬೈ ಬ್ಯಾಟರ್ಗಳು ಸರಾಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ.</p>.<p>ಮುಂಬೈ 42ನೇ ರಣಜಿ ಟ್ರೋಫಿ ಜಯದತ್ತ ಕಣ್ಣು ನೆಟ್ಟಿದೆ. ಮಧ್ಯಪ್ರದೇಶ ತಂಡವು ಚೊಚ್ಚಲ ಪ್ರಶಸ್ತಿ ಗೆಲುವಿನ ಛಲದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮುಂಬೈ ತಂಡವು ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ನಲ್ಲಿ ರನ್ಗಳ ರಾಶಿ ಪೇರಿಸಿತ್ತು.ಆದರೆ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಫೈನಲ್ನಲ್ಲಿ ಮಧ್ಯಪ್ರದೇಶದಬೌಲರ್ಗಳು ಮುಂಬೈ ‘ಓಟ’ಕ್ಕೆ ತಡೆಯೊಡ್ಡಿದರು.</p>.<p>ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಮೊದಲ ದಿನದಾಟದ ಮುಕ್ತಾಯಕ್ಕೆ 90 ಓವರ್ಗಳಲ್ಲಿ 5 ವಿಕೆಟ್ಗಳಿಗೆ 248 ರನ್ ಗಳಿಸಿತು. ಈ ಋತುವಿನಲ್ಲಿ 800ಕ್ಕೂ ಹೆಚ್ಚು ರನ್ ಗಳಿಸಿರುವ ಸರ್ಫರಾಜ್ ಖಾನ್ (ಬ್ಯಾಟಿಂಗ್ 40; 125 ಎಸೆತ) ಮತ್ತು ಆಲ್ರೌಂಡರ್ ಶಮ್ಸ್ ಮಲಾನಿ (ಬ್ಯಾಟಿಂಗ್ 12, 43ಎಸೆತ) ಕ್ರೀಸ್ನಲ್ಲಿದ್ದಾರೆ. ಮುಂಬೈ ಇನಿಂಗ್ಸ್ಗೆ ಉತ್ತಮ ಆರಂಭ ನೀಡಿದ ನಾಯಕ ಪೃಥ್ವಿ ಶಾ (47; 79ಎ, 4X5, 6X1) ಮತ್ತು ಯಶಸ್ವಿ ಜೈಸ್ವಾಲ್ (78; 163ಎ) ಅವರ ವಿಕೆಟ್ಗಳನ್ನು ಗಳಿಸಿದ ಬಲಗೈ ಮಧ್ಯಮವೇಗಿ ಅನುಭವ್ ಅಗರವಾಲ್ ಮುಂಬೈ ತಂಡದ ಬೃಹತ್ ಮೊತ್ತದ ಗುರಿಗೆ ಅಡ್ಡಿಯಾದರು.</p>.<p>ಯಶಸ್ವಿ ಕಳೆದ ಮೂರು ಇನಿಂಗ್ಸ್ಗಳಲ್ಲಿಯೂ ಶತಕ ದಾಖಲಿಸಿದ್ದರು. ಇಲ್ಲಿಯೂ ಕೂಡ ಅವರು ಶತಕದತ್ತ ಹೆಜ್ಜೆ ಇಟ್ಟಿದ್ದರು. ಆದರೆ ಊಟದ ನಂತರದ ಅವಧಿಯಲ್ಲಿ ಯಶ್ ದುಬೆ ಪಡೆದ ಕ್ಯಾಚ್ಗೆ ನಿರ್ಗಮಿಸಿದರು.</p>.<p>ಅವರಿಗೆ ಉತ್ತಮ ಜೊತೆ ನೀಡಿದ ಆಫ್ಸ್ಪಿನ್ನರ್ ಸಾರಾಂಶ್ ಜೈನ್ (31ಕ್ಕೆ2) ಅರ್ಮಾನ್ ಜಾಫರ್ ಮತ್ತು ಹಾರ್ದಿಕ್ ತಮೊರೆ ವಿಕೆಟ್ಗಳನ್ನು ಕಬಳಿಸಿ ಮಧ್ಯಮ ಕ್ರಮಾಂಕಕ್ಕೆ ಪೆಟ್ಟುಕೊಟ್ಟರು. ಸೆಮಿಫೈನಲ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಹಾರ್ದಿಕ್ ಮತ್ತು ಎರಡನೇಯದ್ದರಲ್ಲಿ ಜಾಫರ್ ಶತಕ ಗಳಿಸಿದ್ದರು.</p>.<p>ದೇಶಿ ಕ್ರಿಕೆಟ್ನಲ್ಲಿ 'ಚಾಂಪಿಯನ್ ಕೋಚ್’ ಎಂದೇ ಹೆಸರು ಗಳಿಸಿರುವ ಚಂದ್ರಕಾಂತ್ ಪಂಡಿತ್ ಮಾರ್ಗದರ್ಶನದ ಮಧ್ಯಪ್ರದೇಶ ತಂಡದ ಬೌಲರ್ಗಳು ಶಿಸ್ತಿನ ದಾಳಿ ನಡೆಸಿದರು. ಇದರಿಂದಾಗಿ ಮುಂಬೈ ಬ್ಯಾಟರ್ಗಳು ಸರಾಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ.</p>.<p>ಮುಂಬೈ 42ನೇ ರಣಜಿ ಟ್ರೋಫಿ ಜಯದತ್ತ ಕಣ್ಣು ನೆಟ್ಟಿದೆ. ಮಧ್ಯಪ್ರದೇಶ ತಂಡವು ಚೊಚ್ಚಲ ಪ್ರಶಸ್ತಿ ಗೆಲುವಿನ ಛಲದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>