ಸಂಸದ ಬಾಬುಲ್ ಸುಪ್ರಿಯೊ, ಹನುಮ ವಿಹಾರಿ ಕುರಿತು ಟ್ವೀಟ್ ಮಾಡಿದ್ದು, ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಗೆಲುವಿನ ಅವಕಾಶವಿದ್ದರೂ, ಅದನ್ನು ಮಾಡದೇ, ಹನುಮ ವಿಹಾರಿ ಕ್ರಿಕೆಟ್ನ ಕೊಲೆ ಮಾಡಿದ್ದಾರೆ. 109 ಎಸೆತ ಎದುರಿಸಿ ಕೇವಲ 7 ರನ್ ಗಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಕೊನೆಯ ಸಾಲಿನಲ್ಲಿ, ನನಗೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿಲ್ಲ ಎಂದು ನನಗೆ ತಿಳಿದಿದೆ ಎಂದೂ ಟ್ವೀಟ್ ಮಾಡಿದ್ದಾರೆ.