<p><strong>ಫ್ಲಾರಿಡಾ:</strong> ಪೂರ್ಣಾವಧಿಗೆ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಲು ಸಿದ್ಧ ಎಂದು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.</p>.<p>ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 88 ರನ್ಗಳ ಜಯ ಸಾಧಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.</p>.<p>ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ತಂಡವು ಸರಣಿಯನ್ನು 4–1 ಅಂತರದಿಂದ ಗೆದ್ದುಕೊಂಡಿದೆ.</p>.<p><a href="https://www.prajavani.net/sports/cricket/india-vs-west-indies-5th-t20i-india-beat-west-indies-by-88-runs-clinch-five-match-series-4-1-961429.html" itemprop="url">IND vs WI ಟಿ20 ಸರಣಿ: ಮತ್ತೆ ಮುಗ್ಗರಿಸಿದ ವಿಂಡೀಸ್, ಭಾರತಕ್ಕೆ 4–1 ಅಂತರದ ಜಯ </a></p>.<p>ಭಾರತ ತಂಡದ ನಾಯಕನಾಗುವುದು ವಿಶೇಷ ಅನುಭವ ನೀಡುತ್ತದೆ ಎಂದು ಪಾಂಡ್ಯ ಹೇಳಿದ್ದಾರೆ. ಇದೇ ವೇಳೆ, ಭವಿಷ್ಯದಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ವಹಿಸಲು ಉತ್ಸುಕರಾಗಿದ್ದೀರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು, ಖಂಡಿತವಾಗಿಯೂ ಸಿದ್ಧನಿದ್ದೇನೆ ಎಂದು ಉತ್ತರಿಸಿದ್ದಾರೆ.</p>.<p>‘ಅವಕಾಶ ನೀಡಿದರೆ, ಅದನ್ನು ಸಂತಸದಿಂದ ನಿರ್ವಹಿಸಬಲ್ಲೆ. ಆದರೆ ಸದ್ಯಕ್ಕೆ ವಿಶ್ವಕಪ್ ಸಮೀಪಿಸುತ್ತಿದ್ದು, ಅದಕ್ಕೆ ತಂಡವನ್ನು ಉತ್ತಮವಾಗಿ ಸಿದ್ಧಪಡಿಸಿಕೊಳ್ಳಬೇಕಿದೆ’ ಎಂದು ಪಾಂಡ್ಯ ಹೇಳಿದ್ದಾರೆ.</p>.<p>ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ನಾಯಕತ್ವ ವಹಿಸಿದ ಅನುಭವ ಪಾಂಡ್ಯ ಅವರಿಗಿದೆ. ಜೂನ್ನಲ್ಲಿ ಐರ್ಲೆಂಡ್ ವಿರುದ್ಧ ನಡೆದಿದ್ದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.</p>.<p><a href="https://www.prajavani.net/sports/cricket/commonwealth-games-2022-ind-w-vs-aus-w-final-australia-beats-india-by-nine-runs-in-thriller-wins-961426.html" itemprop="url">Commonwealth Games ಮಹಿಳಾ ಟಿ20: ಫೈನಲ್ನಲ್ಲಿ ಸೋಲು ಕಂಡ ಭಾರತಕ್ಕೆ ಬೆಳ್ಳಿ </a></p>.<p>ಭಾರತವು ಕಳೆದ ಒಂದು ವರ್ಷದಿಂದ ಮೂರು ಮಾದರಿಯ ಕ್ರಿಕೆಟ್ನಲ್ಲಿ ಏಳು ಮಂದಿಗೆ ನಾಯಕತ್ವದ ಜವಾಬ್ದಾರಿ ವಹಿಸಿತ್ತು. ಇದರಿಂದ ತಂಡಕ್ಕೆ ಉತ್ತೇಜನ ದೊರೆಯಲಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.</p>.<p>‘ತಂಡದ ಸುತ್ತಲೂ ಹಲವು ನಾಯಕರನ್ನು ರೂಪಿಸುವುದು ಉತ್ತೇಜನಕಾರಿ. ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲ ಹಾಗೂ ತಂಡದೊಳಗೆ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿರುವ ಹುಡುಗರು ಒತ್ತಡವನ್ನು ನಿಭಾಯಿಸಬೇಕು ಎಂದು ನೀವು ಬಯಸುವುದು ಸಹಜ’ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫ್ಲಾರಿಡಾ:</strong> ಪೂರ್ಣಾವಧಿಗೆ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಲು ಸಿದ್ಧ ಎಂದು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.</p>.<p>ವೆಸ್ಟ್ ಇಂಡೀಸ್ ವಿರುದ್ಧದ ಐದನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 88 ರನ್ಗಳ ಜಯ ಸಾಧಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.</p>.<p>ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ತಂಡವು ಸರಣಿಯನ್ನು 4–1 ಅಂತರದಿಂದ ಗೆದ್ದುಕೊಂಡಿದೆ.</p>.<p><a href="https://www.prajavani.net/sports/cricket/india-vs-west-indies-5th-t20i-india-beat-west-indies-by-88-runs-clinch-five-match-series-4-1-961429.html" itemprop="url">IND vs WI ಟಿ20 ಸರಣಿ: ಮತ್ತೆ ಮುಗ್ಗರಿಸಿದ ವಿಂಡೀಸ್, ಭಾರತಕ್ಕೆ 4–1 ಅಂತರದ ಜಯ </a></p>.<p>ಭಾರತ ತಂಡದ ನಾಯಕನಾಗುವುದು ವಿಶೇಷ ಅನುಭವ ನೀಡುತ್ತದೆ ಎಂದು ಪಾಂಡ್ಯ ಹೇಳಿದ್ದಾರೆ. ಇದೇ ವೇಳೆ, ಭವಿಷ್ಯದಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ವಹಿಸಲು ಉತ್ಸುಕರಾಗಿದ್ದೀರಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು, ಖಂಡಿತವಾಗಿಯೂ ಸಿದ್ಧನಿದ್ದೇನೆ ಎಂದು ಉತ್ತರಿಸಿದ್ದಾರೆ.</p>.<p>‘ಅವಕಾಶ ನೀಡಿದರೆ, ಅದನ್ನು ಸಂತಸದಿಂದ ನಿರ್ವಹಿಸಬಲ್ಲೆ. ಆದರೆ ಸದ್ಯಕ್ಕೆ ವಿಶ್ವಕಪ್ ಸಮೀಪಿಸುತ್ತಿದ್ದು, ಅದಕ್ಕೆ ತಂಡವನ್ನು ಉತ್ತಮವಾಗಿ ಸಿದ್ಧಪಡಿಸಿಕೊಳ್ಳಬೇಕಿದೆ’ ಎಂದು ಪಾಂಡ್ಯ ಹೇಳಿದ್ದಾರೆ.</p>.<p>ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ನಾಯಕತ್ವ ವಹಿಸಿದ ಅನುಭವ ಪಾಂಡ್ಯ ಅವರಿಗಿದೆ. ಜೂನ್ನಲ್ಲಿ ಐರ್ಲೆಂಡ್ ವಿರುದ್ಧ ನಡೆದಿದ್ದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.</p>.<p><a href="https://www.prajavani.net/sports/cricket/commonwealth-games-2022-ind-w-vs-aus-w-final-australia-beats-india-by-nine-runs-in-thriller-wins-961426.html" itemprop="url">Commonwealth Games ಮಹಿಳಾ ಟಿ20: ಫೈನಲ್ನಲ್ಲಿ ಸೋಲು ಕಂಡ ಭಾರತಕ್ಕೆ ಬೆಳ್ಳಿ </a></p>.<p>ಭಾರತವು ಕಳೆದ ಒಂದು ವರ್ಷದಿಂದ ಮೂರು ಮಾದರಿಯ ಕ್ರಿಕೆಟ್ನಲ್ಲಿ ಏಳು ಮಂದಿಗೆ ನಾಯಕತ್ವದ ಜವಾಬ್ದಾರಿ ವಹಿಸಿತ್ತು. ಇದರಿಂದ ತಂಡಕ್ಕೆ ಉತ್ತೇಜನ ದೊರೆಯಲಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.</p>.<p>‘ತಂಡದ ಸುತ್ತಲೂ ಹಲವು ನಾಯಕರನ್ನು ರೂಪಿಸುವುದು ಉತ್ತೇಜನಕಾರಿ. ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲ ಹಾಗೂ ತಂಡದೊಳಗೆ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿರುವ ಹುಡುಗರು ಒತ್ತಡವನ್ನು ನಿಭಾಯಿಸಬೇಕು ಎಂದು ನೀವು ಬಯಸುವುದು ಸಹಜ’ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>