<p><strong>ದುಬೈ:</strong> ಹೈದರಾಬಾದ್ನಲ್ಲಿ ಮೊದಲ ಟೆಸ್ಟ್ ವೇಳೆ, ಇಂಗ್ಲೆಂಡ್ನ ಬ್ಯಾಟರ್ ಒಲಿ ಪೋಪ್ ರನ್ ಓಡುವಾಗ ‘ತಕ್ಕುದಲ್ಲದ ರೀತಿ ಅಡ್ಡಬಂದಿದ್ದಕ್ಕೆ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರಿಗೆ ಐಸಿಸಿ ಸೋಮವಾರ ವಾಗ್ದಂಡನೆ ವಿಧಿಸಿದೆ. ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಸಹ ಹೇರಿದೆ.</p>.<p>ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನೀತಿಸಂಹಿತೆಯ ಲೆವೆಲ್ 1 ನಡಿ ಬೂಮ್ರಾ ತಪ್ಪೆಸಗಿದ್ದಾರೆ. ಇಂಗ್ಲೆಂಡ್ ತಂಡದ ಎರಡನೇ ಇನಿಂಗ್ಸ್ ವೇಳೆ (81ನೇ ಓವರ್) ಈ ಪ್ರಸಂಗ ನಡೆದಿತ್ತು. ತಾವು ಬೌಲಿಂಗ್ ಮಾಡಿದ ನಂತರ ಪೋಪ್ ರನ್ನಿಗೆ ಓಡುವ ವೇಳೆ ಬೂಮ್ರಾ ಅಡ್ಡಬಂದು ದೈಹಿಕವಾಗಿ ತಡೆಯಲು ಯತ್ನಿಸಿದ್ದರೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.</p>.<p>ಕ್ರೀಡಾಂಗಣದಲ್ಲಿದ್ದ ಅಂಪೈರ್ಗಳಾದ ಪಾಲ್ ರೈಫೆಲ್ ಮತ್ತು ಕ್ರಿಸ್ ಗಫಾನಿ, ಮೂರನೇ ಅಂಪೈರ್ ಮರೈಸ್ ಎರಾಸ್ಮಸ್ ಮತ್ತು ನಾಲ್ಕನೇ ಅಂಪೈರ್ ರೋಹನ್ ಪಂಡಿತ್ ಅವರು ಬೂಮ್ರಾ ವಿರುದ್ಧ ದೂರು ಸಲ್ಲಿಸಿದ್ದರು.</p>.<p>ವಾಗ್ದಂಡನೆ ಜೊತೆ, ಇದು 24 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ತಪ್ಪು ಆದ ಕಾರಣ ಅವರ ‘ಶಿಸ್ತಿನ ದಾಖಲೆ’ಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಬೂಮ್ರಾ ತಪ್ಪು ಒಪ್ಪಿಕೊಂಡಿದ್ದು, ಕ್ರಮಕ್ಕೆ ಸಮ್ಮತಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ:</strong> ಹೈದರಾಬಾದ್ನಲ್ಲಿ ಮೊದಲ ಟೆಸ್ಟ್ ವೇಳೆ, ಇಂಗ್ಲೆಂಡ್ನ ಬ್ಯಾಟರ್ ಒಲಿ ಪೋಪ್ ರನ್ ಓಡುವಾಗ ‘ತಕ್ಕುದಲ್ಲದ ರೀತಿ ಅಡ್ಡಬಂದಿದ್ದಕ್ಕೆ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರಿಗೆ ಐಸಿಸಿ ಸೋಮವಾರ ವಾಗ್ದಂಡನೆ ವಿಧಿಸಿದೆ. ಜೊತೆಗೆ ಒಂದು ಡಿಮೆರಿಟ್ ಪಾಯಿಂಟ್ ಸಹ ಹೇರಿದೆ.</p>.<p>ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನೀತಿಸಂಹಿತೆಯ ಲೆವೆಲ್ 1 ನಡಿ ಬೂಮ್ರಾ ತಪ್ಪೆಸಗಿದ್ದಾರೆ. ಇಂಗ್ಲೆಂಡ್ ತಂಡದ ಎರಡನೇ ಇನಿಂಗ್ಸ್ ವೇಳೆ (81ನೇ ಓವರ್) ಈ ಪ್ರಸಂಗ ನಡೆದಿತ್ತು. ತಾವು ಬೌಲಿಂಗ್ ಮಾಡಿದ ನಂತರ ಪೋಪ್ ರನ್ನಿಗೆ ಓಡುವ ವೇಳೆ ಬೂಮ್ರಾ ಅಡ್ಡಬಂದು ದೈಹಿಕವಾಗಿ ತಡೆಯಲು ಯತ್ನಿಸಿದ್ದರೆಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.</p>.<p>ಕ್ರೀಡಾಂಗಣದಲ್ಲಿದ್ದ ಅಂಪೈರ್ಗಳಾದ ಪಾಲ್ ರೈಫೆಲ್ ಮತ್ತು ಕ್ರಿಸ್ ಗಫಾನಿ, ಮೂರನೇ ಅಂಪೈರ್ ಮರೈಸ್ ಎರಾಸ್ಮಸ್ ಮತ್ತು ನಾಲ್ಕನೇ ಅಂಪೈರ್ ರೋಹನ್ ಪಂಡಿತ್ ಅವರು ಬೂಮ್ರಾ ವಿರುದ್ಧ ದೂರು ಸಲ್ಲಿಸಿದ್ದರು.</p>.<p>ವಾಗ್ದಂಡನೆ ಜೊತೆ, ಇದು 24 ತಿಂಗಳ ಅವಧಿಯಲ್ಲಿ ಇದು ಅವರ ಮೊದಲ ತಪ್ಪು ಆದ ಕಾರಣ ಅವರ ‘ಶಿಸ್ತಿನ ದಾಖಲೆ’ಗೆ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಬೂಮ್ರಾ ತಪ್ಪು ಒಪ್ಪಿಕೊಂಡಿದ್ದು, ಕ್ರಮಕ್ಕೆ ಸಮ್ಮತಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>