ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಭರ್ಜರಿಯಾಗಿ ಆರಂಭಿಸಿದ್ದ ಭಾರತ ತಂಡವು, ಫೈನಲ್ನಲ್ಲಿ ಸೋಲುವ ಮೂಲಕ ನಿರಾಸೆಯಿಂದ ಅಭಿಯಾನ ಮುಗಿಸಿದೆ. ಕಾಂಗರೂ ಪಡೆಗಳಿಗೆ ಶರಣಾಗುವ ಮೂಲಕ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿಯುವ ಭಾರತದ ಆಸೆ ಭಗ್ನಗೊಂಡಿದೆ.
ದೇಶದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕುಳಿತು 1.30 ಲಕ್ಷ ಮಂದಿ ಫೈನಲ್ ಪಂದ್ಯವನ್ನು ಕಣ್ತುಂಬಿಕೊಂಡರೆ, ಕೋಟ್ಯಂತರ ಮಂದಿ ಟಿ.ವಿ ಹಾಗೂ ಒ.ಟಿ.ಟಿ ಮೂಲಕ ವೀಕ್ಷಿಸಿದರು.