ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ನಾಯಕತ್ವದಲ್ಲಿ ಆಡಿದ್ದು, ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು: ಸುಂದರ್

Last Updated 15 ಅಕ್ಟೋಬರ್ 2020, 11:37 IST
ಅಕ್ಷರ ಗಾತ್ರ

ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡದಲ್ಲಿ ಎಂಎಸ್‌ ಧೋನಿ ಅವರ ನಾಯಕತ್ವದಲ್ಲಿ ಆಡಿದ್ದು, ನಾನು ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ ವಾಷಿಂಗ್ಟನ್‌ ಸುಂದರ್‌ ಹೇಳಿಕೊಂಡಿದ್ದಾರೆ.

ಇಂದು ಶಾರ್ಜಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ, ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ ಸೆಣಸಲಿದೆ. ಪಂದ್ಯಕ್ಕೂ ಮುನ್ನ ಮಾತನಾಡಿರುವ ಸುಂದರ್‌,‘ನಾನು ಮಾಹಿ ಅವರ ನೇತೃತ್ವದಲ್ಲಿ ಆರ್‌ಪಿಎಸ್‌ ತಂಡದಲ್ಲಿ ಆಡಿದ್ದು, ಕ್ರಿಕೆಟಿಗನಾಗಿ ಬೆಳೆಯಲು ನೆರವಾಯಿತು. ಆಗಿನಿಂದಲೂ ನಾನು ಬೌಲರ್‌ ಆಗಿ ಸಾಕಷ್ಟು ಕಲಿಯುತ್ತಿದ್ದು, ಹಂತಹಂತವಾಗಿ ಬೆಳೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿರುವ ಅವರು, ‘ವಿರಾಟ್‌ ನನ್ನ ಮೇಲೆ ಸಾಕಷ್ಟು ವಿಶ್ವಾಸ ಇರಿಸಿರುವುದಕ್ಕೆ ಸಂತೋಷವಾಗುತ್ತದೆ. ಪವರ್‌ ಪ್ಲೇ ಮತ್ತು ಇತರ ಪ್ರಮುಖ ಹಂತದಲ್ಲಿ ನನಗೆ ಚೆಂಡು ನೀಡುತ್ತಾರೆ. ನಾಯಕ ತನ್ನ ಮೇಲೆ ಹೊಂದಿರುವ ವಿಶ್ವಾಸವು ಸ್ಪಿನ್ನರ್‌ಗೆ ತುಂಬಾ ಮುಖ್ಯವಾಗುತ್ತದೆ’ ಎಂದು ಹೇಳಿದ್ದಾರೆ.

ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ 7 ಪಂದ್ಯಗಳನ್ನು ಆಡಿದ್ದು, 5 ರಲ್ಲಿ ಗೆದ್ದು 2 ಸೋಲು ಕಂಡಿದೆ. ಕೇವಲ 4.90 ಸರಾಸರಿಯಲ್ಲಿ ರನ್‌ ನೀಡಿ 5 ವಿಕೆಟ್‌ಗಳನ್ನು ಪಡೆದುಕೊಂಡಿರುವಸುಂದರ್,‌ ಈ ಟೂರ್ನಿಯಲ್ಲಿ ಆರ್‌ಸಿಬಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT