ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಶುಕ್ರವಾರ ಉದ್ಯಾನನಗರಿಗೆ ಬಂದಿಳಿದರು.
ಇಲ್ಲಿಯ ಪಂಚತಾರಾ ಹೋಟೆಲ್ನಲ್ಲಿ ಒಂದು ವಾರದ ಪ್ರತ್ಯೇಕವಾಸಕ್ಕೆ ಒಳಗಾಗಿದ್ದಾರೆ. ಮಧ್ಯಾಹ್ನದೊಳಗೆ ಮಧ್ಯಮವೇಗಿ ನವದೀಪ್ ಸೈನಿ, ಉಮೇಶ್ ಯಾದವ್ ಮತ್ತು ವಿಕೆಟ್ಕೀಪರ್ ಪಾರ್ಥಿವ್ ಪಟೇಲ್ ಅವರು ಬಂದಿದ್ದಾರೆ. ಆರ್ಸಿಬಿಯು ತನ್ನ ಟ್ವಿಟರ್ ಖಾತೆಯಲ್ಲಿ ಅವರ ಚಿತ್ರಗಳನ್ನು ಪೋಸ್ಟ್ ಮಾಡಿದೆ.
ಆದರೆ, ನಾಯಕ ವಿರಾಟ್ ಕೊಹ್ಲಿ ಮತ್ತಿತರ ಆಟಗಾರರು ಬಂದಿರುವುದರ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಆರ್ಸಿಬಿಯು ಇದೇ 21ರಂದು ಯುಎಇಗೆ ಪ್ರಯಾಣ ಮಾಡಲಿದೆ.
ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಆರ್ಸಿಬಿಯು ಆಡಲಿದೆ.