'ನಾನು ನಿಮ್ಮಲ್ಲಿ ಸುಳ್ಳು ಹೇಳುವುದಿಲ್ಲ. ಕೆಲವೊಮ್ಮೆ ಆಟಗಾರರ ಬುದ್ಧಿಶಕ್ತಿಯು ಹೊರಬರುತ್ತದೆ. ಉಮ್ರಾನ್ ಮಲಿಕ್ ಈಗ ಯಾರ್ಕರ್ ಎಸೆಯಲಿದ್ದಾರೆ ಎಂದು ಮುತ್ತಯ್ಯ ಮುರಳೀಧರನ್ ಹೇಳಿದರು. ಕೋಚ್ ಟಾಮ್ ಮೂಡಿ ಹಾಗೂ ನಾನು ಅವರತ್ತ ತಿರುಗಿ, ಇಲ್ಲ ಈಗ ಅವರು (ಉಮ್ರಾನ್) ಯಾರ್ಕರ್ ಎಸೆದರೆ ಬ್ಯಾಟರ್ ಬೌಂಡರಿ ಬಾರಿಸುತ್ತಾರೆ ಎಂದು ಹೇಳಿದ್ದೆ. ಆದರೆ ರನಪ್ಗಾಗಿ ಓಡೋಡಿ ಬಂದ ಉಮ್ರಾನ್ ಯಾರ್ಕರ್ ಮೂಲಕ ಶ್ರೇಯಸ್ ಅಯ್ಯರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದುವೇ ನಮ್ಮ ಸಂಭ್ರಮಕ್ಕೆ ಕಾರಣ' ಎಂದು ಹೇಳಿದ್ದಾರೆ.