<p><strong>ಮೈಸೂರು:</strong> ಐಪಿಎಲ್–2025ರ ಚಾಂಪಿಯನ್ ಕಪ್ ಹಿಡಿದ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಆಟಗಾರರ ಸವಾರಿ ಮೈಸೂರಿನ ‘ಅಂಬಾರಿ’ ಮೇಲೆ ನಡೆಯಲಿದೆ. </p><p>ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರ ಮೆರವಣಿಗೆಯು ಬುಧವಾರ ಸಂಜೆ ನಡೆಯಲಿದ್ದು, ಮೈಸೂರಿನ ದಸರಾ ಆಕರ್ಷಣೆಯಾದ ‘ಅಂಬಾರಿ’ ಬಸ್ ಬಳಕೆಯಾಗಲಿದೆ. </p>.IPL 2025 | ಬೆಂಗಳೂರಿನಲ್ಲಿ ಆರ್ಸಿಬಿ ವಿಕ್ಟರಿ ಪರೇಡ್: ಮಾಹಿತಿ ಇಲ್ಲಿದೆ.<p>ಆರ್ಸಿಬಿ ತಂಡದ ವ್ಯವಸ್ಥಾಪಕರು ಪ್ರವಾಸೋದ್ಯಮ ಇಲಾಖೆಯ ‘ಅಂಬಾರಿ’ ಬಸ್ ಅನ್ನು ಕೇಳಿದ್ದು, ಮಂಗಳವಾರ ಬೆಂಗಳೂರು ತಲುಪಿದೆ. ಸಂಭ್ರಮ ಮುಗಿಲು ಮುಟ್ಟಿರುವಾಗಲೇ, ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಇಲಾಖೆಯು ಆರಂಭಿಸಿದ ತೆರೆದ ಬಸ್ನಲ್ಲಿ ನೆಚ್ಚಿನ ಆಟಗಾರರು ಕಾಣಿಸಿಕೊಳ್ಳಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಪುಳಕ ಉಂಟುಮಾಡಲಿದೆ. </p><p>ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ಮೈಸೂರಿಗೆ 2021ರಲ್ಲಿ 3 ಡಬಲ್ ಡೆಕ್ಕರ್ ಬಸ್ ‘ಅಂಬಾರಿ'ಯನ್ನು ನೀಡಿತ್ತು. ಪ್ರವಾಸಿಗರು ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ದಸರೆ ವೇಳೆ ಈ ಬಸ್ಗೆ ಭಾರಿ ಬೇಡಿಕೆಯೂ ಇದೆ.</p>.IPL 2025 FINAL |RCB v PBKS: ಈ ಸಲ ಕಪ್ ಆರ್ಸಿಬಿಗೆ; ಐಪಿಎಲ್ಗೆ ಹೊಸ ‘ಕಿಂಗ್’.IPL 2025: ಫೈನಲ್ ಗೆದ್ದ RCB; ಯಾರಿಗೆ ಯಾವ ಪ್ರಶಸ್ತಿ? ಬಹುಮಾನದ ಮೊತ್ತ ಎಷ್ಟು?.IPL 2025 FINAL |RCB vs PBKS: ಯುವಜನತೆಯ ಸಂಭ್ರಮ ಇಮ್ಮಡಿಸಿದ ಬೆಂಗಳೂರು ಗೆಲುವು.RCB vs PBKS: ಆರ್ಸಿಬಿಗೆ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಹಾರೈಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಐಪಿಎಲ್–2025ರ ಚಾಂಪಿಯನ್ ಕಪ್ ಹಿಡಿದ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡದ ಆಟಗಾರರ ಸವಾರಿ ಮೈಸೂರಿನ ‘ಅಂಬಾರಿ’ ಮೇಲೆ ನಡೆಯಲಿದೆ. </p><p>ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ರಜತ್ ಪಾಟೀದಾರ್, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಆಟಗಾರರ ಮೆರವಣಿಗೆಯು ಬುಧವಾರ ಸಂಜೆ ನಡೆಯಲಿದ್ದು, ಮೈಸೂರಿನ ದಸರಾ ಆಕರ್ಷಣೆಯಾದ ‘ಅಂಬಾರಿ’ ಬಸ್ ಬಳಕೆಯಾಗಲಿದೆ. </p>.IPL 2025 | ಬೆಂಗಳೂರಿನಲ್ಲಿ ಆರ್ಸಿಬಿ ವಿಕ್ಟರಿ ಪರೇಡ್: ಮಾಹಿತಿ ಇಲ್ಲಿದೆ.<p>ಆರ್ಸಿಬಿ ತಂಡದ ವ್ಯವಸ್ಥಾಪಕರು ಪ್ರವಾಸೋದ್ಯಮ ಇಲಾಖೆಯ ‘ಅಂಬಾರಿ’ ಬಸ್ ಅನ್ನು ಕೇಳಿದ್ದು, ಮಂಗಳವಾರ ಬೆಂಗಳೂರು ತಲುಪಿದೆ. ಸಂಭ್ರಮ ಮುಗಿಲು ಮುಟ್ಟಿರುವಾಗಲೇ, ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಇಲಾಖೆಯು ಆರಂಭಿಸಿದ ತೆರೆದ ಬಸ್ನಲ್ಲಿ ನೆಚ್ಚಿನ ಆಟಗಾರರು ಕಾಣಿಸಿಕೊಳ್ಳಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಪುಳಕ ಉಂಟುಮಾಡಲಿದೆ. </p><p>ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (ಕೆಎಸ್ಟಿಡಿಸಿ) ಮೈಸೂರಿಗೆ 2021ರಲ್ಲಿ 3 ಡಬಲ್ ಡೆಕ್ಕರ್ ಬಸ್ ‘ಅಂಬಾರಿ'ಯನ್ನು ನೀಡಿತ್ತು. ಪ್ರವಾಸಿಗರು ಸಾಂಸ್ಕೃತಿಕ ನಗರಿಯನ್ನು ಕಣ್ತುಂಬಿಕೊಳ್ಳುತ್ತಿದ್ದರು. ದಸರೆ ವೇಳೆ ಈ ಬಸ್ಗೆ ಭಾರಿ ಬೇಡಿಕೆಯೂ ಇದೆ.</p>.IPL 2025 FINAL |RCB v PBKS: ಈ ಸಲ ಕಪ್ ಆರ್ಸಿಬಿಗೆ; ಐಪಿಎಲ್ಗೆ ಹೊಸ ‘ಕಿಂಗ್’.IPL 2025: ಫೈನಲ್ ಗೆದ್ದ RCB; ಯಾರಿಗೆ ಯಾವ ಪ್ರಶಸ್ತಿ? ಬಹುಮಾನದ ಮೊತ್ತ ಎಷ್ಟು?.IPL 2025 FINAL |RCB vs PBKS: ಯುವಜನತೆಯ ಸಂಭ್ರಮ ಇಮ್ಮಡಿಸಿದ ಬೆಂಗಳೂರು ಗೆಲುವು.RCB vs PBKS: ಆರ್ಸಿಬಿಗೆ ಅಭಿಮಾನಿಗಳಿಂದ ಸಾಮಾಜಿಕ ಮಾಧ್ಯಮಗಳ ಮೂಲಕ ಶುಭ ಹಾರೈಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>