<p><strong>ಮೈಸೂರು:</strong> ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ಬಿರುಸಿನ ಶತಕ ಗಳಿಸಿದ ಸ್ಟಾಲಿನ್ ಹೂವರ್ (ಅಜೇಯ 108, 50 ಎಸೆತ, 11 ಬೌಂ, 6 ಸಿ) ಅವರು ಬೆಳಗಾವಿ ಪ್ಯಾಂಥರ್ಸ್ಗೆ ಭರ್ಜರಿ ಜಯ ತಂದುಕೊಟ್ಟರು.</p>.<p>ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಪ್ಯಾಂಥರ್ಸ್ ತಂಡ 9 ವಿಕೆಟ್ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಎರಡನೇ ಗೆದ್ದ ಪ್ಯಾಂಥರ್ಸ್ ತಂಡ ಐದು ಪಾಯಿಂಟ್ಗಳನ್ನು ಹೊಂದಿದ್ದು, ಪ್ಲೇ ಆಫ್ ಪ್ರವೇಶದ ಸಾಧ್ಯತೆ ಜೀವಂತವಾಗಿರಿಸಿಕೊಂಡಿತು.</p>.<p>ಮೊದಲು ಬ್ಯಾಟ್ ಮಾಡಿದ ಲಯನ್ಸ್ ತಂಡ ಅರ್ಜುನ್ ಹೊಯ್ಸಳ (77, 58 ಎಸೆತ, 3 ಬೌಂ, 4 ಸಿ) ಮತ್ತು ಪವನ್ ದೇಶಪಾಂಡೆ (59, 35 ಎಸೆತ, 3 ಬೌಂ, 3 ಸಿ) ಅವರ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ಗೆ 175 ರನ್ ಕಲೆಹಾಕಿತು.</p>.<p>ಸ್ಟಾಲಿನ್ ಅಬ್ಬರದ ಎದುರು ಈ ಸ್ಕೋರ್ ಅಲ್ಪ ಮೊತ್ತದಂತೆ ಕಂಡಿತು. ಪ್ಯಾಂಥರ್ಸ್ 14.4 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಜಯ ಸಾಧಿಸಿತು.</p>.<p>ಆರ್.ಸಮರ್ಥ್ (14) ಜತೆ ಇನಿಂಗ್ಸ್ ಆರಂಭಿಸಿದ ಸ್ಟಾಲಿನ್ ಅವರು ಮೊದಲ ವಿಕೆಟ್ಗೆ 4 ಓವರ್ಗಳಲ್ಲಿ 44 ರನ್ ಸೇರಿಸಿದರು. ಎರಡನೇ ವಿಕೆಟ್ಗೆ ಜತೆಯಾದ ನಾಯಕ ಮನೀಷ್ ಪಾಂಡೆ ಮತ್ತು ಸ್ಟಾಲಿನ್ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎದುರಾಳಿ ತಂಡದ ಎಲ್ಲ ಬೌಲರ್ಗಳ ಬೆಂಡೆತ್ತಿದ ಸ್ಟಾಲಿನ್ ನೆರೆದ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು.</p>.<p>22 ಎಸೆತಗಳಲ್ಲಿ 50 ರನ್ ಪೂರೈಸಿದ ಅವರು 44 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಮತ್ತೊಂದೆಡೆ ಪಾಂಡೆ (ಅಜೇಯ 53, 26 ಎಸೆತ, 4 ಬೌಂ, 4ಸಿ) ಕೂಡಾ ಬಿರುಸಿನ ಆಟವಾಡಿದರು. ಇವರು ಎರಡನೇ ವಿಕೆಟ್ಗೆ 64 ಎಸೆತಗಳಲ್ಲಿ 135 ರನ್ ಸೇರಿಸಿದರು.</p>.<p>ಮೊದಲು ಬ್ಯಾಟ್ ಮಾಡಿದ ಲಯನ್ಸ್ ತಂಡಕ್ಕೆ ಅರ್ಜುನ್ ಮತ್ತು ಪವನ್ ಆಸರೆಯಾದರು. ಇವರು ಮೂರನೇ ವಿಕೆಟ್ಗೆ 69 ಎಸೆತಗಳಲ್ಲಿ 106 ರನ್ ಕಲೆಹಾಕಿದ್ದರಿಂದ ತಂಡ ಸವಾಲಿನ ಮೊತ್ತ ಪೇರಿಸಿತು.</p>.<p class="Subhead">ಸಂಕ್ಷಿಪ್ತ ಸ್ಕೋರು: <strong>ಶಿವಮೊಗ್ಗ ಲಯನ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 175 (ಅರ್ಜುನ್ ಹೊಯ್ಸಳ 77, ಅಭಿಮನ್ಯು ಮಿಥುನ್ 22, ಪವನ್ ದೇಶಪಾಂಡೆ 59, ಡಿ.ಅವಿನಾಶ್ 32ಕ್ಕೆ 3).</strong></p>.<p><strong>ಬೆಳಗಾವಿ ಪ್ಯಾಂಥರ್ಸ್:</strong> 14.4 ಓವರ್ಗಳಲ್ಲಿ 1 ವಿಕೆಟ್ಗೆ 180 (ಆರ್.ಸಮರ್ಥ್ 14, ಸ್ಟಾಲಿನ್ ಹೂವರ್ ಅಜೇಯ 108, ಮನೀಷ್ ಪಾಂಡೆ ಅಜೇಯ 53)</p>.<p><strong>ಫಲಿತಾಂಶ:</strong> ಬೆಳಗಾವಿ ಪ್ಯಾಂಥರ್ಸ್ಗೆ 9 ವಿಕೆಟ್ ಗೆಲುವು</p>.<p><strong>ಮೈಸೂರಿಗೆ ಮೊದಲ ಜಯ<br />ಮೈಸೂರು:</strong> ವಿನಯ್ ಸಾಗರ್ (51, 37 ಎಸೆತ) ಮತ್ತು ಅನಿರುದ್ಧ ಜೋಶಿ (ಅಜೇಯ 46, 17 ಎಸೆತ) ಅವರ ಆಕರ್ಷಕ ಆಟದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು.</p>.<p>ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ವಾರಿಯರ್ಸ್ 9 ವಿಕೆಟ್ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿತು.</p>.<p><strong>ಸಂಕ್ಷಿಪ್ತ ಸ್ಕೋರು: </strong>ಹುಬ್ಬಳ್ಳಿ ಟೈಗರ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 151 (ಲವನೀತ್ ಸಿಸೋಡಿಯಾ 29, ಪ್ರವೀಣ್ ದುಬೆ 52, ರಾಮ್ ಸಾರಿಖ್ ಯಾದವ್ 26ಕ್ಕೆ 2, ವೈಶಾಖ್ ವಿಜಯಕುಮಾರ್ 30ಕ್ಕೆ 2 )</p>.<p><strong>ಮೈಸೂರು ವಾರಿಯರ್ಸ್:</strong> 16 ಓವರ್ಗಳಲ್ಲಿ 1 ವಿಕೆಟ್ಗೆ 154 (ವಿನಯ್ ಸಾಗರ್ 51, ಕೆ.ವಿ.ಸಿದ್ಧಾರ್ಥ್ ಅಜೇಯ 48, ಅನಿರುದ್ಧ್ ಜೋಶಿ ಅಜೇಯ 46)</p>.<p><strong>ಪಂದ್ಯಶ್ರೇಷ್ಠ: ಅನಿರುದ್ಧ ಜೋಶಿ</strong></p>.<p><strong>ಫಲಿತಾಂಶ: </strong>ಮೈಸೂರು ವಾರಿಯರ್ಸ್ಗೆ ಒಂಬತ್ತು ವಿಕೆಟ್ಗಳ ಗೆಲುವು</p>.<p>***<br /><strong>ಇಂದಿನ ಪಂದ್ಯಗಳು</strong><br />ಬೆಳಗಾವಿ ಪ್ಯಾಂಥರ್ಸ್– ಬಿಜಾಪುರ ಬುಲ್ಸ್<br />ಮಧ್ಯಾಹ್ನ 3</p>.<p>**<br />ಮೈಸೂರು ವಾರಿಯರ್ಸ್– ಬಳ್ಳಾರಿ ಟಸ್ಕರ್ಸ್<br />ಸಂಜೆ 7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ಬಿರುಸಿನ ಶತಕ ಗಳಿಸಿದ ಸ್ಟಾಲಿನ್ ಹೂವರ್ (ಅಜೇಯ 108, 50 ಎಸೆತ, 11 ಬೌಂ, 6 ಸಿ) ಅವರು ಬೆಳಗಾವಿ ಪ್ಯಾಂಥರ್ಸ್ಗೆ ಭರ್ಜರಿ ಜಯ ತಂದುಕೊಟ್ಟರು.</p>.<p>ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಪ್ಯಾಂಥರ್ಸ್ ತಂಡ 9 ವಿಕೆಟ್ಗಳಿಂದ ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಎರಡನೇ ಗೆದ್ದ ಪ್ಯಾಂಥರ್ಸ್ ತಂಡ ಐದು ಪಾಯಿಂಟ್ಗಳನ್ನು ಹೊಂದಿದ್ದು, ಪ್ಲೇ ಆಫ್ ಪ್ರವೇಶದ ಸಾಧ್ಯತೆ ಜೀವಂತವಾಗಿರಿಸಿಕೊಂಡಿತು.</p>.<p>ಮೊದಲು ಬ್ಯಾಟ್ ಮಾಡಿದ ಲಯನ್ಸ್ ತಂಡ ಅರ್ಜುನ್ ಹೊಯ್ಸಳ (77, 58 ಎಸೆತ, 3 ಬೌಂ, 4 ಸಿ) ಮತ್ತು ಪವನ್ ದೇಶಪಾಂಡೆ (59, 35 ಎಸೆತ, 3 ಬೌಂ, 3 ಸಿ) ಅವರ ಜವಾಬ್ದಾರಿಯುತ ಆಟದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ಗೆ 175 ರನ್ ಕಲೆಹಾಕಿತು.</p>.<p>ಸ್ಟಾಲಿನ್ ಅಬ್ಬರದ ಎದುರು ಈ ಸ್ಕೋರ್ ಅಲ್ಪ ಮೊತ್ತದಂತೆ ಕಂಡಿತು. ಪ್ಯಾಂಥರ್ಸ್ 14.4 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 180 ರನ್ ಗಳಿಸಿ ಜಯ ಸಾಧಿಸಿತು.</p>.<p>ಆರ್.ಸಮರ್ಥ್ (14) ಜತೆ ಇನಿಂಗ್ಸ್ ಆರಂಭಿಸಿದ ಸ್ಟಾಲಿನ್ ಅವರು ಮೊದಲ ವಿಕೆಟ್ಗೆ 4 ಓವರ್ಗಳಲ್ಲಿ 44 ರನ್ ಸೇರಿಸಿದರು. ಎರಡನೇ ವಿಕೆಟ್ಗೆ ಜತೆಯಾದ ನಾಯಕ ಮನೀಷ್ ಪಾಂಡೆ ಮತ್ತು ಸ್ಟಾಲಿನ್ ಅವರು ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಎದುರಾಳಿ ತಂಡದ ಎಲ್ಲ ಬೌಲರ್ಗಳ ಬೆಂಡೆತ್ತಿದ ಸ್ಟಾಲಿನ್ ನೆರೆದ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿದರು.</p>.<p>22 ಎಸೆತಗಳಲ್ಲಿ 50 ರನ್ ಪೂರೈಸಿದ ಅವರು 44 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಮತ್ತೊಂದೆಡೆ ಪಾಂಡೆ (ಅಜೇಯ 53, 26 ಎಸೆತ, 4 ಬೌಂ, 4ಸಿ) ಕೂಡಾ ಬಿರುಸಿನ ಆಟವಾಡಿದರು. ಇವರು ಎರಡನೇ ವಿಕೆಟ್ಗೆ 64 ಎಸೆತಗಳಲ್ಲಿ 135 ರನ್ ಸೇರಿಸಿದರು.</p>.<p>ಮೊದಲು ಬ್ಯಾಟ್ ಮಾಡಿದ ಲಯನ್ಸ್ ತಂಡಕ್ಕೆ ಅರ್ಜುನ್ ಮತ್ತು ಪವನ್ ಆಸರೆಯಾದರು. ಇವರು ಮೂರನೇ ವಿಕೆಟ್ಗೆ 69 ಎಸೆತಗಳಲ್ಲಿ 106 ರನ್ ಕಲೆಹಾಕಿದ್ದರಿಂದ ತಂಡ ಸವಾಲಿನ ಮೊತ್ತ ಪೇರಿಸಿತು.</p>.<p class="Subhead">ಸಂಕ್ಷಿಪ್ತ ಸ್ಕೋರು: <strong>ಶಿವಮೊಗ್ಗ ಲಯನ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 175 (ಅರ್ಜುನ್ ಹೊಯ್ಸಳ 77, ಅಭಿಮನ್ಯು ಮಿಥುನ್ 22, ಪವನ್ ದೇಶಪಾಂಡೆ 59, ಡಿ.ಅವಿನಾಶ್ 32ಕ್ಕೆ 3).</strong></p>.<p><strong>ಬೆಳಗಾವಿ ಪ್ಯಾಂಥರ್ಸ್:</strong> 14.4 ಓವರ್ಗಳಲ್ಲಿ 1 ವಿಕೆಟ್ಗೆ 180 (ಆರ್.ಸಮರ್ಥ್ 14, ಸ್ಟಾಲಿನ್ ಹೂವರ್ ಅಜೇಯ 108, ಮನೀಷ್ ಪಾಂಡೆ ಅಜೇಯ 53)</p>.<p><strong>ಫಲಿತಾಂಶ:</strong> ಬೆಳಗಾವಿ ಪ್ಯಾಂಥರ್ಸ್ಗೆ 9 ವಿಕೆಟ್ ಗೆಲುವು</p>.<p><strong>ಮೈಸೂರಿಗೆ ಮೊದಲ ಜಯ<br />ಮೈಸೂರು:</strong> ವಿನಯ್ ಸಾಗರ್ (51, 37 ಎಸೆತ) ಮತ್ತು ಅನಿರುದ್ಧ ಜೋಶಿ (ಅಜೇಯ 46, 17 ಎಸೆತ) ಅವರ ಆಕರ್ಷಕ ಆಟದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡ ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿತು.</p>.<p>ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ವಾರಿಯರ್ಸ್ 9 ವಿಕೆಟ್ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿತು.</p>.<p><strong>ಸಂಕ್ಷಿಪ್ತ ಸ್ಕೋರು: </strong>ಹುಬ್ಬಳ್ಳಿ ಟೈಗರ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 151 (ಲವನೀತ್ ಸಿಸೋಡಿಯಾ 29, ಪ್ರವೀಣ್ ದುಬೆ 52, ರಾಮ್ ಸಾರಿಖ್ ಯಾದವ್ 26ಕ್ಕೆ 2, ವೈಶಾಖ್ ವಿಜಯಕುಮಾರ್ 30ಕ್ಕೆ 2 )</p>.<p><strong>ಮೈಸೂರು ವಾರಿಯರ್ಸ್:</strong> 16 ಓವರ್ಗಳಲ್ಲಿ 1 ವಿಕೆಟ್ಗೆ 154 (ವಿನಯ್ ಸಾಗರ್ 51, ಕೆ.ವಿ.ಸಿದ್ಧಾರ್ಥ್ ಅಜೇಯ 48, ಅನಿರುದ್ಧ್ ಜೋಶಿ ಅಜೇಯ 46)</p>.<p><strong>ಪಂದ್ಯಶ್ರೇಷ್ಠ: ಅನಿರುದ್ಧ ಜೋಶಿ</strong></p>.<p><strong>ಫಲಿತಾಂಶ: </strong>ಮೈಸೂರು ವಾರಿಯರ್ಸ್ಗೆ ಒಂಬತ್ತು ವಿಕೆಟ್ಗಳ ಗೆಲುವು</p>.<p>***<br /><strong>ಇಂದಿನ ಪಂದ್ಯಗಳು</strong><br />ಬೆಳಗಾವಿ ಪ್ಯಾಂಥರ್ಸ್– ಬಿಜಾಪುರ ಬುಲ್ಸ್<br />ಮಧ್ಯಾಹ್ನ 3</p>.<p>**<br />ಮೈಸೂರು ವಾರಿಯರ್ಸ್– ಬಳ್ಳಾರಿ ಟಸ್ಕರ್ಸ್<br />ಸಂಜೆ 7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>