‘ಭುವಿ‘ ಅವರಿಗೆ ಯಾರ್ಕರ್ ತಜ್ಞ ಟಿ.ನಟರಾಜನ್ ಬೆಂಬಲ ನೀಡಲಿದ್ದಾರೆ. ಇವರೊಂದಿಗೆ ಅಫ್ಗಾನಿಸ್ತಾನದ ರಶೀದ್ ಖಾನ್ ಅವರ ಸ್ಪಿನ್ ಕೂಡ ಜೊತೆಯಾಗಲಿದ್ದು, ಬೌಲಿಂಗ್ ವಿಭಾಗ ಸಮತೋಲನದಿಂದ ಕೂಡಿದಂತಿದೆ. ಬ್ಯಾಟಿಂಗ್ನಲ್ಲಿ ನಾಯಕ ವಾರ್ನರ್, ಅದ್ಭುತ ಲಯದಲ್ಲಿರುವ ಜಾನಿ ಬೆಸ್ಟೊ ತಂಡದ ಭರವಸೆಯಾಗಿದ್ದು, ಕೇನ್ ವಿಲಿಯಮ್ಸನ್, ಕನ್ನಡಿಗ ಮನೀಷ್ ಪಾಂಡೆ ಮಿನುಗುವ ನಿರೀಕ್ಷೆಯಿದೆ.