<p><strong>ಕೋಲ್ಕತ್ತ:</strong>ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಲಗೇಜ್ಅನ್ನು ಮತ್ತೊಬ್ಬ ಪ್ರಯಾಣಿಕ ತೆಗೆದುಕೊಂಡು ಹೋಗಿರುವ ಘಟನೆ ಇಲ್ಲಿನನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.</p>.<p>ಧೋನಿ ಸೋಮವಾರ ನಗರಕ್ಕೆ ಬಂದರು. ದೆಹಲಿಯಿಂದ ಹೊರಡುವ ಸಂದರ್ಭದಲ್ಲಿ ಅವರು ಸರಕು ಸಾಗಾಣೆ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳುವಾಗ ಮತ್ತೊಬ್ಬರೂ ಅಲ್ಲಿದ್ದರು. ಆಗ ಧೋನಿ ಲಗೇಜ್ ಆ ಪ್ರಯಾಣಿಕನ ಹೆಸರಿನೊಂದಿಗೆ ನೋಂದಣಿಯಾಗಿದೆ. ಹೀಗಾಗಿ ಈ ಪ್ರಹಸನ ನಡೆದಿದೆ.ಆದರೆ, ಈ ವಿಚಾರ ಕೋಲ್ಕತ್ತಗೆ ಬಂದಿಳಿದ ಬಳಿಕ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಯಾವುದೇ ಹಾನಿಯಿಲ್ಲ:ವಿಮಾನಯಾನ ಸಂಸ್ಥೆ</strong><br />ಧೋನಿ ಅವರು ಕೋಲ್ಕತ್ತ ನಿಲ್ದಾಣದಿಂದ ಹೊರಡುವಾಗ ಆಕಸ್ಮಿಕವಾಗಿ ಲಗೇಜ್ ವಿನಿಮಯವಾಗಿದೆ ಎಂದು ಹೇಳಿರುವ ವಿಮಾನಯಾನ ಸಂಸ್ಥೆ ಲಗೇಜ್ಗೆ ಯಾವುದೇ ಹಾನಿಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.</p>.<p>ಸಿಬ್ಬಂದಿಯ ಕಣ್ತಪ್ಪಿನಿಂದಾಗಿ ಅಪರೂಪವೆಂಬಂತೆ ಈ ಘಟನೆ ನಡೆದಿರುವುದು ದುರದೃಷ್ಟಕರ. ಧೋನಿ ಅವರ ಲಗೇಜ್ ತೆಗೆದುಕೊಂಡು ಹೋಗಿರುವ ಪ್ರಯಾಣಿಕನಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರಿಂದ ಲಗೇಜ್ ಪಡೆದು, ಕ್ರಿಕೆಟಿಗ ಧೋನಿಗೆ ಇಂದು ಅದನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong>ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಲಗೇಜ್ಅನ್ನು ಮತ್ತೊಬ್ಬ ಪ್ರಯಾಣಿಕ ತೆಗೆದುಕೊಂಡು ಹೋಗಿರುವ ಘಟನೆ ಇಲ್ಲಿನನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.</p>.<p>ಧೋನಿ ಸೋಮವಾರ ನಗರಕ್ಕೆ ಬಂದರು. ದೆಹಲಿಯಿಂದ ಹೊರಡುವ ಸಂದರ್ಭದಲ್ಲಿ ಅವರು ಸರಕು ಸಾಗಾಣೆ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳುವಾಗ ಮತ್ತೊಬ್ಬರೂ ಅಲ್ಲಿದ್ದರು. ಆಗ ಧೋನಿ ಲಗೇಜ್ ಆ ಪ್ರಯಾಣಿಕನ ಹೆಸರಿನೊಂದಿಗೆ ನೋಂದಣಿಯಾಗಿದೆ. ಹೀಗಾಗಿ ಈ ಪ್ರಹಸನ ನಡೆದಿದೆ.ಆದರೆ, ಈ ವಿಚಾರ ಕೋಲ್ಕತ್ತಗೆ ಬಂದಿಳಿದ ಬಳಿಕ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p><strong>ಯಾವುದೇ ಹಾನಿಯಿಲ್ಲ:ವಿಮಾನಯಾನ ಸಂಸ್ಥೆ</strong><br />ಧೋನಿ ಅವರು ಕೋಲ್ಕತ್ತ ನಿಲ್ದಾಣದಿಂದ ಹೊರಡುವಾಗ ಆಕಸ್ಮಿಕವಾಗಿ ಲಗೇಜ್ ವಿನಿಮಯವಾಗಿದೆ ಎಂದು ಹೇಳಿರುವ ವಿಮಾನಯಾನ ಸಂಸ್ಥೆ ಲಗೇಜ್ಗೆ ಯಾವುದೇ ಹಾನಿಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.</p>.<p>ಸಿಬ್ಬಂದಿಯ ಕಣ್ತಪ್ಪಿನಿಂದಾಗಿ ಅಪರೂಪವೆಂಬಂತೆ ಈ ಘಟನೆ ನಡೆದಿರುವುದು ದುರದೃಷ್ಟಕರ. ಧೋನಿ ಅವರ ಲಗೇಜ್ ತೆಗೆದುಕೊಂಡು ಹೋಗಿರುವ ಪ್ರಯಾಣಿಕನಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರಿಂದ ಲಗೇಜ್ ಪಡೆದು, ಕ್ರಿಕೆಟಿಗ ಧೋನಿಗೆ ಇಂದು ಅದನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>