ಸಂದೀಪ್ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಿಶಿರ್ ರಜ್ ಧಾಕಲ್ ಅವರ ಏಕಸದಸ್ಯ ನ್ಯಾಯಪೀಠವು ನಡೆಸಿತು. ಕಳೆದ ಭಾನುವಾರದಿಂದಲೇ ವಿಚಾರಣೆಗಳು ನಡೆದಿದ್ದವು. ಶುಕ್ರವಾರದಂದು ನ್ಯಾಯಾಧೀಶರು, ಸಂದೀಪ್ ಅವರು ತಪ್ಪೆಸಗಿದ್ದಾರೆಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಕಠ್ಮಂಡು ಪೋಸ್ಟ್ ಪತ್ರಿಕೆಯು ವರದಿ ಮಾಡಿದೆ.