ಕ್ರೈಸ್ಟ್ ಚರ್ಚ್: ಇಲ್ಲಿ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮಳೆಯಿಂದ ರದ್ದಾದ 2ನೇ ಏಕದಿನ ಪಂದ್ಯದಲ್ಲಿ ಇದ್ದ ತಂಡವನ್ನೇ ಭಾರತ ತಂಡ ಉಳಿಸಿಕೊಂಡಿದೆ. ನ್ಯೂಜಿಲೆಂಡ್ ತಂಡದಲ್ಲಿ ಮೈಕಲ್ ಬ್ರೇಸ್ವೆಲ್ ಬದಲಿಗೆ ಆಡಂ ಮಿಲ್ನೆ ಅವರಿಗೆ ಅವಕಾಶ ನೀಡಲಾಗಿದೆ.
ತುಂತುರು ಮಳೆ ಇದ್ದುದರಿಂದ ಪಂದ್ಯ ಕೊಂಚ ವಿಳಂಬವಾಯಿತು. ಆದರೆ, ಯಾವುದೇ ಓವರ್ಗಳ ಕಡಿತ ಮಾಡಲಾಗಿಲ್ಲ.
ಹ್ಯಾಮಿಲ್ಟನ್ನ 2ನೇ ಪಂದ್ಯ ಮಳೆಯಲ್ಲಿ ಕೊಚ್ಚಿಹೋಗಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 1–0 ಮುನ್ನಡೆಯಲ್ಲಿದೆ. ನವೆಂಬರ್ 25ರಲ್ಲಿ ನಡೆದ ಮೊದಲ ಪಂದ್ಯವನ್ನು 7 ವಿಕೆಟ್ಗಳಿಂದ ನ್ಯೂಜಿಲೆಂಡ್ ಗೆದ್ದುಕೊಂಡಿತ್ತು.
ಭಾರತ ತಂಡ: ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಉಮ್ರಾನ್ ಮಲಿಕ್, ಆರ್ಶ್ದೀಪ್ ಸಿಂಗ್ ಮತ್ತು ಯಜ್ವೇಂದ್ರ ಚಾಹಲ್