<p><strong>ಮುಂಬೈ:</strong> ತನ್ನ ತವರಿನಂಗಳದಲ್ಲಿ ಆಡಿದ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಮುಂಬೈ ರಣಜಿ ತಂಡದ ಆಟಗಾರರೊಂದಿಗೆ ಮಂಗಳವಾರ ಭಾರತ ತಂಡದ ಆಟಗಾರ ರೋಹಿತ್ ಶರ್ಮಾ ಚರ್ಚೆ ನಡೆಸಿದರು.</p>.<p>ಮುಂಬೈ ತಂಡವು ಈಚೆಗೆ ರೈಲ್ವೆಸ್ ವಿರುದ್ಧ 10 ವಿಕೆಟ್ಗಳಿಂದ ಮತ್ತು ಕರ್ನಾಟಕದ ಎದುರು ಐದು ವಿಕೆಟ್ಗಳಿಂದ ಸೋತಿತ್ತು.</p>.<p>‘ಸೋಲುಗಳಿಂದಾಗಿ ಹತಾಶರಾಗಿರುವ ಆಟಗಾರರ ಮನೋಬಲ ಹೆಚ್ಚಿಸುವಂತಹ ಮಾತುಗಳನ್ನು ರೋಹಿತ್ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಕೂಡ ಚರ್ಚಿಸಿದರು’ ಎಂದು ತಂಡದ ಮೂಲಗಳು ತಿಳಿಸಿವೆ.</p>.<p>ಈ ಸಂದರ್ಭದಲ್ಲಿ ಮುಂಬೈ ತಂಡದ ಕೋಚ್ ವಿನಾಯಕ ಸಾಮಂತ್, ಬೌಲಿಂಗ್ ಕೋಚ್ ಪ್ರದೀಪ್ ಸುಂದರಂ ಮತ್ತು ಮ್ಯಾನೇಜರ್ ಅಜಿಂಕ್ಯ ನಾಯಕ್ ಹಾಜರಿದ್ದರು.</p>.<p>ಭಾರತ ಮತ್ತು ಶ್ರೀಲಂಕಾ ನಡುವಣದ ಟ್ವೆಂಟಿ–20 ಕ್ರಿಕೆಟ್ ಸರಣಿಯಿಂದ ರೋಹಿತ್ ವಿಶ್ರಾಂತಿ ಪಡೆದಿದ್ದಾರೆ. ಅವರು ಶನಿವಾರ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದಿದ್ದ ಮುಂಬೈ ಮತ್ತು ಕರ್ನಾಟಕ ಪಂದ್ಯದ ದಿನದಾಟವನ್ನು ನೋಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ತನ್ನ ತವರಿನಂಗಳದಲ್ಲಿ ಆಡಿದ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಮುಂಬೈ ರಣಜಿ ತಂಡದ ಆಟಗಾರರೊಂದಿಗೆ ಮಂಗಳವಾರ ಭಾರತ ತಂಡದ ಆಟಗಾರ ರೋಹಿತ್ ಶರ್ಮಾ ಚರ್ಚೆ ನಡೆಸಿದರು.</p>.<p>ಮುಂಬೈ ತಂಡವು ಈಚೆಗೆ ರೈಲ್ವೆಸ್ ವಿರುದ್ಧ 10 ವಿಕೆಟ್ಗಳಿಂದ ಮತ್ತು ಕರ್ನಾಟಕದ ಎದುರು ಐದು ವಿಕೆಟ್ಗಳಿಂದ ಸೋತಿತ್ತು.</p>.<p>‘ಸೋಲುಗಳಿಂದಾಗಿ ಹತಾಶರಾಗಿರುವ ಆಟಗಾರರ ಮನೋಬಲ ಹೆಚ್ಚಿಸುವಂತಹ ಮಾತುಗಳನ್ನು ರೋಹಿತ್ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಕೂಡ ಚರ್ಚಿಸಿದರು’ ಎಂದು ತಂಡದ ಮೂಲಗಳು ತಿಳಿಸಿವೆ.</p>.<p>ಈ ಸಂದರ್ಭದಲ್ಲಿ ಮುಂಬೈ ತಂಡದ ಕೋಚ್ ವಿನಾಯಕ ಸಾಮಂತ್, ಬೌಲಿಂಗ್ ಕೋಚ್ ಪ್ರದೀಪ್ ಸುಂದರಂ ಮತ್ತು ಮ್ಯಾನೇಜರ್ ಅಜಿಂಕ್ಯ ನಾಯಕ್ ಹಾಜರಿದ್ದರು.</p>.<p>ಭಾರತ ಮತ್ತು ಶ್ರೀಲಂಕಾ ನಡುವಣದ ಟ್ವೆಂಟಿ–20 ಕ್ರಿಕೆಟ್ ಸರಣಿಯಿಂದ ರೋಹಿತ್ ವಿಶ್ರಾಂತಿ ಪಡೆದಿದ್ದಾರೆ. ಅವರು ಶನಿವಾರ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದಿದ್ದ ಮುಂಬೈ ಮತ್ತು ಕರ್ನಾಟಕ ಪಂದ್ಯದ ದಿನದಾಟವನ್ನು ನೋಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>