ವಿಶ್ವಕಪ್ಗೆ ವಿರಾಟ್ ಕೊಹ್ಲಿ ಪಡೆಯ ಆರಂಭಿಕ ಜೋಡಿ ಕುರಿತು,ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಮಾತನಾಡಿದ್ದಾರೆ. ಖಾಸಗಿ ವಾಹಿಯೊಂದಿಗೆ ಮಾತನಾಡಿರುವ ಅವರು, ‘ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಗಳಿಸುವ ರನ್ ಲೆಕ್ಕಕ್ಕೆ ಬರುವುದಿಲ್ಲ. ನಾನು ಆಯ್ಕೆ ಸಮಿತಿ ಮುಖ್ಯಸ್ಥನಾಗಿದ್ದರೆ ಧವನ್ರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುತ್ತಲೇ ಇರಲಿಲ್ಲ. ಇಲ್ಲಿ ರಾಹುಲ್ ಮತ್ತು ಧವನ್ ನಡುವೆ ಪೈಪೋಟಿಯೇ ಇಲ್ಲ. ಇಲ್ಲಿರುವುದು ಒಬ್ಬನೇ ಜಯಶಾಲಿ’ ಎಂದಿದ್ದಾರೆ.