<p><strong>ಬೆಂಗಳೂರು: </strong>ಶುಭಾಂಗ್ ಹೆಗ್ಡೆ (37ಕ್ಕೆ 3 ವಿಕೆಟ್, ಔಟಾಗದೆ 44 ರನ್) ಅವರ ಆಲ್ರೌಂಡ್ ಆಟದ ನೆರವಿನಿಂದ ಕರ್ನಾಟಕ ತಂಡವು 25 ವರ್ಷದೊಳಗಿನವರ ಬಿಸಿಸಿಐ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಜಯ ಗಳಿಸಿತು. ಒಡಿಶಾ ತಂಡವನ್ನು ನಾಲ್ಕು ವಿಕೆಟ್ಗಳಿಂದ ಮಣಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸಿತು.</p>.<p>ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಒಡಿಶಾ 8 ವಿಕೆಟ್ ಕಳೆದುಕೊಂಡು 244 ರನ್ ಗಳಿಸಿತು. ಶುಭಂಕರ್ ಬಿಸ್ವಾಸ್ ಗಳಿಸಿದ ಶತಕದ (ಔಟಾಗದೆ 102, 122ಎ, 4X13) ನೆರವಿನಿಂದ ತಂಡವು ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು.</p>.<p>ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಒಂದು ಓವರ್ ಬಾಕಿ ಇರುವಂತೆಯೇ ಆರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಕಿಶನ್ ಎಸ್. ಬೆದಾರೆ ಅರ್ಧಶತಕ (54) ಶಿವಕುಮಾರ್ ಬಿ.ಯು. (49) ಮತ್ತು ಶುಭಾಂಗ್ ಅವರ ಭರ್ಜರಿ ಬ್ಯಾಟಿಂಗ್ ತಂಡದ ಗೆಲುವಿಗೆ ಕಾರಣವಾದವು.</p>.<p>ಕರ್ನಾಟಕ ತಂಡವು ಡಿಸೆಂಬರ್ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಎದುರಿಸಲಿದೆ.</p>.<p class="Subhead">ಸಂಕ್ಷಿಪ್ತ ಸ್ಕೋರು: ಒಡಿಶಾ:50 ಓವರ್ಗಳಲ್ಲಿ 8 ವಿಕೆಟ್ಗೆ 244 (ಸಂದೀಪ್ ಪಟ್ನಾಯಿಕ್ 28, ಶುಭಂ ಕರ್ ಬಿಸ್ವಾಸ್ ಔಟಾಗದೆ 102, ರಂಜಿತ್ ಪೈಕರಾಯ್ 28; ಅಭಿಲಾಷ್ ಶೆಟ್ಟಿ 48ಕ್ಕೆ 2, ಆದಿತ್ಯ ಗೋಯಲ್ 50ಕ್ಕೆ 2, ಶುಭಾಂಗ್ ಹೆಗ್ಡೆ 37ಕ್ಕೆ 3). ಕರ್ನಾಟಕ: 49 ಓವರ್ಗಳಲ್ಲಿ 6 ವಿಕೆಟ್ಗೆ 247 (ಶಿವಕುಮಾರ್ ಬಿ.ಯು. 49, ಲೋಚನ್ ಅಪ್ಪಣ್ಣ 35, ಕಿಶನ್ ಎಸ್. ಬೆದಾರೆ 54, ಶುಭಾಂಗ್ ಹೆಗ್ಡೆ ಔಟಾಗದೆ 44; ತರಣಿ ಎಸ್.ಎ. 51ಕ್ಕೆ 3, ಹರ್ಷಿತ್ ರಾಥೋಡ್ 42ಕ್ಕೆ 2).</p>.<p class="Subhead">ಫಲಿತಾಂಶ: ಕರ್ನಾಟಕ ತಂಡಕ್ಕೆ 4 ವಿಕೆಟ್ಗಳ ಜಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಶುಭಾಂಗ್ ಹೆಗ್ಡೆ (37ಕ್ಕೆ 3 ವಿಕೆಟ್, ಔಟಾಗದೆ 44 ರನ್) ಅವರ ಆಲ್ರೌಂಡ್ ಆಟದ ನೆರವಿನಿಂದ ಕರ್ನಾಟಕ ತಂಡವು 25 ವರ್ಷದೊಳಗಿನವರ ಬಿಸಿಸಿಐ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಜಯ ಗಳಿಸಿತು. ಒಡಿಶಾ ತಂಡವನ್ನು ನಾಲ್ಕು ವಿಕೆಟ್ಗಳಿಂದ ಮಣಿಸಿ ನಾಕೌಟ್ ಹಂತಕ್ಕೆ ಪ್ರವೇಶಿಸಿತು.</p>.<p>ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಒಡಿಶಾ 8 ವಿಕೆಟ್ ಕಳೆದುಕೊಂಡು 244 ರನ್ ಗಳಿಸಿತು. ಶುಭಂಕರ್ ಬಿಸ್ವಾಸ್ ಗಳಿಸಿದ ಶತಕದ (ಔಟಾಗದೆ 102, 122ಎ, 4X13) ನೆರವಿನಿಂದ ತಂಡವು ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು.</p>.<p>ಗುರಿ ಬೆನ್ನತ್ತಿದ ಕರ್ನಾಟಕ ತಂಡವು ಒಂದು ಓವರ್ ಬಾಕಿ ಇರುವಂತೆಯೇ ಆರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಕಿಶನ್ ಎಸ್. ಬೆದಾರೆ ಅರ್ಧಶತಕ (54) ಶಿವಕುಮಾರ್ ಬಿ.ಯು. (49) ಮತ್ತು ಶುಭಾಂಗ್ ಅವರ ಭರ್ಜರಿ ಬ್ಯಾಟಿಂಗ್ ತಂಡದ ಗೆಲುವಿಗೆ ಕಾರಣವಾದವು.</p>.<p>ಕರ್ನಾಟಕ ತಂಡವು ಡಿಸೆಂಬರ್ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ಎದುರಿಸಲಿದೆ.</p>.<p class="Subhead">ಸಂಕ್ಷಿಪ್ತ ಸ್ಕೋರು: ಒಡಿಶಾ:50 ಓವರ್ಗಳಲ್ಲಿ 8 ವಿಕೆಟ್ಗೆ 244 (ಸಂದೀಪ್ ಪಟ್ನಾಯಿಕ್ 28, ಶುಭಂ ಕರ್ ಬಿಸ್ವಾಸ್ ಔಟಾಗದೆ 102, ರಂಜಿತ್ ಪೈಕರಾಯ್ 28; ಅಭಿಲಾಷ್ ಶೆಟ್ಟಿ 48ಕ್ಕೆ 2, ಆದಿತ್ಯ ಗೋಯಲ್ 50ಕ್ಕೆ 2, ಶುಭಾಂಗ್ ಹೆಗ್ಡೆ 37ಕ್ಕೆ 3). ಕರ್ನಾಟಕ: 49 ಓವರ್ಗಳಲ್ಲಿ 6 ವಿಕೆಟ್ಗೆ 247 (ಶಿವಕುಮಾರ್ ಬಿ.ಯು. 49, ಲೋಚನ್ ಅಪ್ಪಣ್ಣ 35, ಕಿಶನ್ ಎಸ್. ಬೆದಾರೆ 54, ಶುಭಾಂಗ್ ಹೆಗ್ಡೆ ಔಟಾಗದೆ 44; ತರಣಿ ಎಸ್.ಎ. 51ಕ್ಕೆ 3, ಹರ್ಷಿತ್ ರಾಥೋಡ್ 42ಕ್ಕೆ 2).</p>.<p class="Subhead">ಫಲಿತಾಂಶ: ಕರ್ನಾಟಕ ತಂಡಕ್ಕೆ 4 ವಿಕೆಟ್ಗಳ ಜಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>