ಮಧ್ಯಮ ಕ್ರಮಾಂಕದ ಆಟಗಾರ ಸೂರ್ಯಕುಮಾರ್ ಯಾದವ್ ಆಕರ್ಷಕ 40 ರನ್ಗಳನ್ನು ಕಾಣಿಕೆ ನೀಡಿದರು. ರಾಹುಲ್ ಚಹಾರ್ ಮತ್ತು ನವದೀಪ್ ಸೈನಿ ಕ್ರೀಸ್ನಲ್ಲಿ ಸ್ವಲ್ಪ ಹೊತ್ತು ಉಳಿಯುವ ಮೂಲಕ ಟೀಮ್ ಇಂಡಿಯಾ 200ರ ಒಳಗೆ ಆಲೌಟ್ ಆಗುವುದನ್ನು ತಪ್ಪಿಸಿದರು. ಇಬ್ಬರು ಕ್ರಮವಾಗಿ13, 15 ರನ್ ಗಳಿಸಿದರು. ಅಖಿಲ ಧನಂಜಯ ದಾಳಿಗೆ ನಿತೀಶ್ ರಾಣಾ ಮತ್ತು ಕೃಷ್ಣಪ್ಪ ಗೌತಮ್ ಒಬ್ಬರಾದ ಮೇಲೊಬ್ಬರು ವಿಕೆಟ್ ಚೆಲ್ಲಿದ್ದು ಭಾರತದ ರನ್ಗತಿಗೆ ಕಡಿವಾಣ ಹಾಕಿತು.