ಈ ಟೂರ್ನಿಯಲ್ಲಿ ನಾಲ್ಕು ತಂಡಗಳಾದ ನರ್ಮದಾ, ಸಿಂಧು, ಕಾವೇರಿ ಮತ್ತು ಯಮುನಾ ಸ್ಪರ್ಧಿಸಲಿವೆ. ಅಂತರರಾಷ್ಟ್ರೀಯ ಆಟಗಾರ್ತಿ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ್, ದಿವ್ಯಾ ಜ್ಞಾನಾನಂದ್ ಮತ್ತು ಕೆ. ರಕ್ಷಿತಾ ಅವರು ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.