<p><strong>ಬೆಂಗಳೂರು</strong>: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ಪಂದ್ಯದ ಟಿಕೆಟ್ಗಳಿಗೆ ಈಗ ಶುಕ್ರದೆಸೆ. ಕಾಳಸಂತೆಕೋರರಿಗೆ ಸುಗ್ಗಿ. ಕಡಿಮೆ ಮುಖಬೆಲೆಯ ಟಿಕೆಟ್ಗಳು ಮೂರ್ನಾಲ್ಕು ಪಟ್ಟು ಬೆಲೆಗೆ ಬಿಕರಿಯಾಗಿವೆ.</p>.<p>ವಾರದ ರಜೆ ದಿನವಾದ ಭಾನುವಾರ ರಾತ್ರಿ ನಡೆಯಲಿರುವುದರಿಂದ ಟಿಕೆಟ್ಗಳಿಗೆ ಭಾರಿ ಬೇಡಿಕೆ ಕುದುರಿದೆ. ವಿಶೇಷವಾಗಿ ₹ 750 ಮತ್ತು ₹ 2000 ಬೆಲೆಯ ಟಿಕೆಟ್ಗಳು ನಾಲ್ಕರಿಂದ ಐದು ಸಾವಿರದವರೆಗೆ ಬಿಕರಿಯಾಗಿವೆ. ಐದು ಪಂದ್ಯಗಳ ಸರಣಿಯ ಕೊನೆಯ ಹಣಾಹಣಿ ಇದಾಗಿದೆ. ಸರಣಿಯಲ್ಲಿ ಉಭಯ ತಂಡಗಳು 2–2ರಿಂದ ಸಮಬಲ ಸಾಧಿಸಿವೆ. ಅಲ್ಲದೇ ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆಯುತ್ತಿರುವುದರಿಂದ ಜನಾಕರ್ಷಣೆ ಅಪಾರವಾಗಿದೆ.</p>.<p>‘ನಾವು ಮೂರು ಮಂದಿ ಸ್ನೇಹಿತರು ನಿನ್ನೆ (ಶನಿವಾರ) ಬೆಳಿಗ್ಗೆಯೇ 750ರ ಟಿಕೆಟ್ಗಳನ್ನು ತಲಾ ₹ 2500ರಂತೆಎ ಕೊಂಡುಕೊಂಡಿದ್ದೇವೆ. ಈಗ ಮತ್ತೊಬ್ಬರು ಬರುವುದಾಗಿ ಹೇಳಿರುವುದರಿಂದ ವಿಚಾರಿಸಿದರೆ ಅದೇ ಮುಖಬೆಲೆ ಟಿಕೆಟ್ ನಾಲ್ಕು ಸಾವಿರವೆಂದು ಹೇಳುತ್ತಿದ್ದಾರೆ. ಕಬ್ಬನ್ ಪಾರ್ಕ್ನೊಳಗೆ, ಮೆಟ್ರೊ ನಿಲ್ದಾಣದ ಹಿಂಭಾಗಗಳಲ್ಲಿ ಕೆಲವರು ಬ್ಲ್ಯಾಕ್ನಲ್ಲಿ ಮಾರುತ್ತಿದ್ದಾರೆ. ಕೊಳ್ಳುವವರೂ ಮುಗಿಬೀಳುತ್ತಿದ್ದಾರೆ’ ಎಂದು ಟಿಕೆಟ್ ಖರೀದಿಗಾಗಿ ಎಡತಾಕುತ್ತಿದ್ದ ಪ್ರವೀಣ್ ಹೇಳಿದರು.</p>.<p>ಪಂದ್ಯ ಶುರುವಾಗುವ ಅರ್ಧಗಂಟೆ ಮೊದಲಿಗೆ ಕೈಗೆ ಬಂದ ಬೆಲೆಗೆ ಕೊಟ್ಟುಹೋಗುತ್ತಾರೆಂಬ ನಿರೀಕ್ಷೆಯಲ್ಲಿಯೂ ಕೆಲವರು ಕಾಯುತ್ತಿದ್ದ ದೃಶ್ಯಗಳು ಮೈದಾನದ ಸುತ್ತಮುತ್ತ ಕಂಡುಬಂದವು.</p>.<p>ಭದ್ರತೆ ಮತ್ತು ಪೊಲೀಸ್ ಸಿಬ್ಬಂದಿಯು ಜನಜಂಗುಳಿಯನ್ನು ನಿಯಂತ್ರಿಸಲು, ಗೇಟ್ಗಳ ಮಾಹಿತಿ ನೀಡುವಲ್ಲಿ ನಿರತರಾಗಿದ್ದರು.</p>.<p>‘ಕಳ್ಳ ಸಂತೆಯಲ್ಲಿ ಟಿಕೆಟ್ ಮಾರಾಟದ ಬಗ್ಗೆ ಮಾಹಿತಿ ಇಲ್ಲ. ಮೈದಾನ ಸುತ್ತಮುತ್ತ ನಿಗಾ ವಹಿಸಿ, ಟಿಕೆಟ್ ಮಾರುವವರನ್ನು ಪತ್ತೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>ಈಚೆಗೆ ಐಪಿಎಲ್ನಲ್ಲಿ ಮಿಂಚಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ಅವರ ಆಟ ನೋಡಲು ಬಹಳಷ್ಟು ಜನರು ಮೈದಾನಕ್ಕೆ ಧಾವಿಸುತ್ತಿದ್ದಾರೆ. ಅವರು ಆರ್ಸಿಬಿ ಸೇರ್ಪಡೆಯಾದ ನಂತರ ಬೆಂಗಳೂರಿನಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.</p>.<p>2019ರ ನಂತರ ಇಲ್ಲಿ ಐಪಿಎಲ್ ಪಂದ್ಯಗಳು ನಡೆದಿಲ್ಲ. ಕಳೆದ ಮಾರ್ಚ್ನಲ್ಲಿ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ಪಂದ್ಯದ ಟಿಕೆಟ್ಗಳಿಗೆ ಈಗ ಶುಕ್ರದೆಸೆ. ಕಾಳಸಂತೆಕೋರರಿಗೆ ಸುಗ್ಗಿ. ಕಡಿಮೆ ಮುಖಬೆಲೆಯ ಟಿಕೆಟ್ಗಳು ಮೂರ್ನಾಲ್ಕು ಪಟ್ಟು ಬೆಲೆಗೆ ಬಿಕರಿಯಾಗಿವೆ.</p>.<p>ವಾರದ ರಜೆ ದಿನವಾದ ಭಾನುವಾರ ರಾತ್ರಿ ನಡೆಯಲಿರುವುದರಿಂದ ಟಿಕೆಟ್ಗಳಿಗೆ ಭಾರಿ ಬೇಡಿಕೆ ಕುದುರಿದೆ. ವಿಶೇಷವಾಗಿ ₹ 750 ಮತ್ತು ₹ 2000 ಬೆಲೆಯ ಟಿಕೆಟ್ಗಳು ನಾಲ್ಕರಿಂದ ಐದು ಸಾವಿರದವರೆಗೆ ಬಿಕರಿಯಾಗಿವೆ. ಐದು ಪಂದ್ಯಗಳ ಸರಣಿಯ ಕೊನೆಯ ಹಣಾಹಣಿ ಇದಾಗಿದೆ. ಸರಣಿಯಲ್ಲಿ ಉಭಯ ತಂಡಗಳು 2–2ರಿಂದ ಸಮಬಲ ಸಾಧಿಸಿವೆ. ಅಲ್ಲದೇ ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಟಿ20 ಪಂದ್ಯ ನಡೆಯುತ್ತಿರುವುದರಿಂದ ಜನಾಕರ್ಷಣೆ ಅಪಾರವಾಗಿದೆ.</p>.<p>‘ನಾವು ಮೂರು ಮಂದಿ ಸ್ನೇಹಿತರು ನಿನ್ನೆ (ಶನಿವಾರ) ಬೆಳಿಗ್ಗೆಯೇ 750ರ ಟಿಕೆಟ್ಗಳನ್ನು ತಲಾ ₹ 2500ರಂತೆಎ ಕೊಂಡುಕೊಂಡಿದ್ದೇವೆ. ಈಗ ಮತ್ತೊಬ್ಬರು ಬರುವುದಾಗಿ ಹೇಳಿರುವುದರಿಂದ ವಿಚಾರಿಸಿದರೆ ಅದೇ ಮುಖಬೆಲೆ ಟಿಕೆಟ್ ನಾಲ್ಕು ಸಾವಿರವೆಂದು ಹೇಳುತ್ತಿದ್ದಾರೆ. ಕಬ್ಬನ್ ಪಾರ್ಕ್ನೊಳಗೆ, ಮೆಟ್ರೊ ನಿಲ್ದಾಣದ ಹಿಂಭಾಗಗಳಲ್ಲಿ ಕೆಲವರು ಬ್ಲ್ಯಾಕ್ನಲ್ಲಿ ಮಾರುತ್ತಿದ್ದಾರೆ. ಕೊಳ್ಳುವವರೂ ಮುಗಿಬೀಳುತ್ತಿದ್ದಾರೆ’ ಎಂದು ಟಿಕೆಟ್ ಖರೀದಿಗಾಗಿ ಎಡತಾಕುತ್ತಿದ್ದ ಪ್ರವೀಣ್ ಹೇಳಿದರು.</p>.<p>ಪಂದ್ಯ ಶುರುವಾಗುವ ಅರ್ಧಗಂಟೆ ಮೊದಲಿಗೆ ಕೈಗೆ ಬಂದ ಬೆಲೆಗೆ ಕೊಟ್ಟುಹೋಗುತ್ತಾರೆಂಬ ನಿರೀಕ್ಷೆಯಲ್ಲಿಯೂ ಕೆಲವರು ಕಾಯುತ್ತಿದ್ದ ದೃಶ್ಯಗಳು ಮೈದಾನದ ಸುತ್ತಮುತ್ತ ಕಂಡುಬಂದವು.</p>.<p>ಭದ್ರತೆ ಮತ್ತು ಪೊಲೀಸ್ ಸಿಬ್ಬಂದಿಯು ಜನಜಂಗುಳಿಯನ್ನು ನಿಯಂತ್ರಿಸಲು, ಗೇಟ್ಗಳ ಮಾಹಿತಿ ನೀಡುವಲ್ಲಿ ನಿರತರಾಗಿದ್ದರು.</p>.<p>‘ಕಳ್ಳ ಸಂತೆಯಲ್ಲಿ ಟಿಕೆಟ್ ಮಾರಾಟದ ಬಗ್ಗೆ ಮಾಹಿತಿ ಇಲ್ಲ. ಮೈದಾನ ಸುತ್ತಮುತ್ತ ನಿಗಾ ವಹಿಸಿ, ಟಿಕೆಟ್ ಮಾರುವವರನ್ನು ಪತ್ತೆ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<p>ಈಚೆಗೆ ಐಪಿಎಲ್ನಲ್ಲಿ ಮಿಂಚಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದಿನೇಶ್ ಕಾರ್ತಿಕ್ ಅವರ ಆಟ ನೋಡಲು ಬಹಳಷ್ಟು ಜನರು ಮೈದಾನಕ್ಕೆ ಧಾವಿಸುತ್ತಿದ್ದಾರೆ. ಅವರು ಆರ್ಸಿಬಿ ಸೇರ್ಪಡೆಯಾದ ನಂತರ ಬೆಂಗಳೂರಿನಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.</p>.<p>2019ರ ನಂತರ ಇಲ್ಲಿ ಐಪಿಎಲ್ ಪಂದ್ಯಗಳು ನಡೆದಿಲ್ಲ. ಕಳೆದ ಮಾರ್ಚ್ನಲ್ಲಿ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>