ದೇವದತ್ತ ಅಲ್ಲದೇ ಮನೀಷ್ ಪಾಂಡೆ, ನಿಕಿನ್ ಜೋಸ್ ಕೂಡ ರನ್ ಗಳಿಸುತ್ತಿದ್ದಾರೆ. ಆದರೆ, ಸಮರ್ಥ್ ಮತ್ತು ಮಯಂಕ್ ಅಗರವಾಲ್ ಅವರು ದೊಡ್ಡ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದರೆ ತಂಡದ ಬಲ ಹೆಚ್ಚಲಿದೆ. ಬೌಲಿಂಗ್ನಲ್ಲಿ ವಿದ್ವತ್ ಜೊತೆಗೆ ವೇಗಿ ವೈಶಾಖ ಮತ್ತು ಶಿಸ್ತಿನ ಬೌಲರ್ ಕೌಶಿಕ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಸ್ಪಿನ್ನರ್ ಕೆ. ಗೌತಮ್ ಕೂಡ ಪಂದ್ಯಕ್ಕೆ ತಿರುವು ನೀಡಬಲ್ಲ ಸಮರ್ಥ ಬೌಲರ್ ಆಗಿದ್ದಾರೆ.