ಗುವಾಹಟಿ:ಜನಪ್ರಿಯ ವ್ಯಕ್ತಿಗಳು ಟ್ರೋಲಿಗರ ಕಾಟದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಚೂರು ಎಚ್ಚರ ತಪ್ಪಿದರೂಟ್ರೋಲ್ಗಳಿಗೆ ಆಹಾರವಾಗುವುದು ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ತಪ್ಪು ಮಾಡದಿದ್ದರೂ, ಫೋಟೊಶಾಪ್ ಕರಾಮತ್ತಿಗೆ ಸಿಲುಕಿ ಹಾಸ್ಯಕ್ಕೊಳಗಾಗುವುದುಂಟು. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇದಕ್ಕೊಂದು ತಾಜಾ ಉದಾಹರಣೆ.
ಮಳೆ ಹಾಗೂ ಪಿಚ್ನಲ್ಲಿನ ತೇವದಿಂದಾಗಿ ಮೊನ್ನೆ ಗುವಾಹಟಿಯ ಬರ್ಸಾಪುರ ಮೈದಾನದಲ್ಲಿ ನಡೆಯಬೇಕಿದ್ದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯ ರದ್ದಾಗಿತ್ತು. ಒಂದೂ ಎಸೆತ ಕಾಣದ ಪಂದ್ಯವನ್ನು ರದ್ದು ಪಡಿಸುವ ಮೊದಲು ಶ್ರೇಯಸ್ ಅಯ್ಯರ್ ಜೊತೆಗೆ ಮೈದಾನಕ್ಕೆ ಬಂದ ವಿರಾಟ್, ಪಿಚ್ ಮೇಲೆ ಮಂಡಿಯೂರಿ ಕುಳಿತು ನೆಲ ಮುಟ್ಟಿ ತಪಾಸಣೆ ನಡೆಸಿದ್ದರು.
ಈ ವೇಳೆ ತೆಗೆಯಲಾದ ಚಿತ್ರವನ್ನು ಬಳಸಿಕೊಂಡಿರುವ ಟ್ರೋಲಿಗರು, ಪಿಚ್ ಮೇಲೆ ಕೊಹ್ಲಿ ರಂಗೋಲಿ ಬಿಡಿಸುತ್ತಿರುವಂತೆ, ಬಟ್ಟೆ ಇಸ್ತ್ರಿ ಮಾಡುತ್ತಿರುವಂತೆ, ಗಿಡ ನೆಡುತ್ತಿರುವಂತೆ ಎಡಿಟ್ ಮಾಡಿದ್ದಾರೆ. ಮಾತ್ರವಲ್ಲದೆ ಹೆಂಡತಿ ಅನುಷ್ಕಾ ಶರ್ಮಾ, ಕೊಹ್ಲಿಯನ್ನತೇ ನೋಡುತ್ತಾ ಕುಳಿತಿರುವಂತೆಯೂ ಚಿತ್ರಸಲಾಗಿದೆ.ಈ ಚಿತ್ರಗಳು ಟ್ವಿಟರ್ನಲ್ಲಿ ಸಾಕಷ್ಟು ವೈರಲ್ ಆಗಿವೆ.
Waiting for the pitch to dry like :#INDvSL #INDvsSL pic.twitter.com/uKpJFFcwsu
— OM Rajpurohit (@omrajguru) January 5, 2020
#INDvsSL #ViratKohli
— N I T I N (@theNitinWalke) January 5, 2020
Girls before marriage : I would get married in a family where they would let me be independent and also let me be myself.
Girls After Marriage : pic.twitter.com/AeAFlHHCmR
— Anpadh educated (@PRINCE3758458) January 6, 2020
Let's grow some crops till Guwahati gets another international match. #INDvsSL pic.twitter.com/KwiZBOHtj3
— Mrutyunjay Mohanty (@MartianTapu) January 5, 2020
No one:
— 🇮🇳 sir-kid (@ooobhaishab) January 5, 2020
HR department: #INDvsSL pic.twitter.com/1GX3gP9RAt
ಭಾರತ ಹಾಗು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯವು ಇಂದು ರಾತ್ರಿಇಂದೋರ್ನ ಹೋಳ್ಕರ್ ಮೈದಾನದಲ್ಲಿ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.