<p><strong>ನವದೆಹಲಿ:</strong> ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕರ ಸಾಲಿನಲ್ಲಿ ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಗುರುತಿಸಿಕೊಂಡಿದ್ದಾರೆ. ಈ ಮಾಜಿ ನಾಯಕರು ಭಾರತೀಯ ಕ್ರಿಕೆಟ್ಗೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ.</p>.<p>ಆದರೆ ಈ ಮಾಜಿ ಆಟಗಾರರ ಪೈಕಿ ಯಾರು ಶ್ರೇಷ್ಠ ನಾಯಕ ಎಂಬುದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಪಂಡಿತರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಈ ನಡುವೆ ಗಂಗೂಲಿ ಹಾಗೂ ಧೋನಿ ನಾಯಕತ್ವದಡಿಯಲ್ಲಿ ಆಡಿರುವ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ.</p>.<p>'ಅವರಿಬ್ಬರೂ ಅತ್ಯುತ್ತಮ ನಾಯಕರು. ಆದರೆ ನನ್ನ ಪ್ರಕಾರ ಸೌರವ್ ಗಂಗೂಲಿ ಶ್ರೇಷ್ಠ ಕಪ್ತಾನ. ಯಾಕೆಂದರೆ ಗಂಗೂಲಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ತಂಡವನ್ನು ಕಟ್ಟಿದ್ದರು' ಎಂದು ವೀರು ವಿವರಿಸಿದ್ದಾರೆ.</p>.<p>'ವಿದೇಶದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಹೇಗೆ ಎಂಬುದನ್ನು ದಾದಾ ಕಲಿಸಿಕೊಟ್ಟರು ' ಎಂದು ಯೂಟ್ಯೂಬ್ ಶೋದಲ್ಲಿ ಸೆಹ್ವಾಗ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ವರದಿ ಮಾಡಿದೆ.</p>.<p>'ಗಂಗೂಲಿ ಯುವ ಹಾಗೂ ಪ್ರತಿಭಾವಂತ ತಂಡವನ್ನು ಕಟ್ಟಿದರು. ಅಲ್ಲಿಂದ ಭಾರತ ಹೊಸ ಯುಗದತ್ತ ಚಲಿಸಿತ್ತು. ಆ ಉತ್ತಮ ಕೆಲಸವನ್ನು ಧೋನಿ ಮುಂದುವರಿಸಿದರು' ಎಂದು ವೀರು ತಿಳಿಸಿದ್ದಾರೆ.</p>.<p>'ಎಂ.ಎಸ್. ಧೋನಿ ಆಗಲೇ ಸದೃಢ ತಂಡವನ್ನು ಮುನ್ನಡೆಸುವ ಪ್ರಯೋಜನವನ್ನು ಹೊಂದಿದ್ದರು. ಅವರು ನಾಯಕರಾದಾಗ ತಂಡ ಕಟ್ಟುವುದು ಕಷ್ಟಕರವಾಗಿರಲಿಲ್ಲ. ಇಬ್ಬರು ಅತ್ಯುತ್ತಮ ನಾಯಕರು. ಆದರೂ ನನ್ನ ಪ್ರಕಾರ ಗಂಗೂಲಿ ಶ್ರೇಷ್ಠ' ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕರ ಸಾಲಿನಲ್ಲಿ ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಗುರುತಿಸಿಕೊಂಡಿದ್ದಾರೆ. ಈ ಮಾಜಿ ನಾಯಕರು ಭಾರತೀಯ ಕ್ರಿಕೆಟ್ಗೆ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ.</p>.<p>ಆದರೆ ಈ ಮಾಜಿ ಆಟಗಾರರ ಪೈಕಿ ಯಾರು ಶ್ರೇಷ್ಠ ನಾಯಕ ಎಂಬುದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಪಂಡಿತರಲ್ಲಿ ಭಿನ್ನ ಅಭಿಪ್ರಾಯಗಳಿವೆ. ಈ ನಡುವೆ ಗಂಗೂಲಿ ಹಾಗೂ ಧೋನಿ ನಾಯಕತ್ವದಡಿಯಲ್ಲಿ ಆಡಿರುವ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಉತ್ತರಿಸಿದ್ದಾರೆ.</p>.<p>'ಅವರಿಬ್ಬರೂ ಅತ್ಯುತ್ತಮ ನಾಯಕರು. ಆದರೆ ನನ್ನ ಪ್ರಕಾರ ಸೌರವ್ ಗಂಗೂಲಿ ಶ್ರೇಷ್ಠ ಕಪ್ತಾನ. ಯಾಕೆಂದರೆ ಗಂಗೂಲಿ ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ತಂಡವನ್ನು ಕಟ್ಟಿದ್ದರು' ಎಂದು ವೀರು ವಿವರಿಸಿದ್ದಾರೆ.</p>.<p>'ವಿದೇಶದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಹೇಗೆ ಎಂಬುದನ್ನು ದಾದಾ ಕಲಿಸಿಕೊಟ್ಟರು ' ಎಂದು ಯೂಟ್ಯೂಬ್ ಶೋದಲ್ಲಿ ಸೆಹ್ವಾಗ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ವರದಿ ಮಾಡಿದೆ.</p>.<p>'ಗಂಗೂಲಿ ಯುವ ಹಾಗೂ ಪ್ರತಿಭಾವಂತ ತಂಡವನ್ನು ಕಟ್ಟಿದರು. ಅಲ್ಲಿಂದ ಭಾರತ ಹೊಸ ಯುಗದತ್ತ ಚಲಿಸಿತ್ತು. ಆ ಉತ್ತಮ ಕೆಲಸವನ್ನು ಧೋನಿ ಮುಂದುವರಿಸಿದರು' ಎಂದು ವೀರು ತಿಳಿಸಿದ್ದಾರೆ.</p>.<p>'ಎಂ.ಎಸ್. ಧೋನಿ ಆಗಲೇ ಸದೃಢ ತಂಡವನ್ನು ಮುನ್ನಡೆಸುವ ಪ್ರಯೋಜನವನ್ನು ಹೊಂದಿದ್ದರು. ಅವರು ನಾಯಕರಾದಾಗ ತಂಡ ಕಟ್ಟುವುದು ಕಷ್ಟಕರವಾಗಿರಲಿಲ್ಲ. ಇಬ್ಬರು ಅತ್ಯುತ್ತಮ ನಾಯಕರು. ಆದರೂ ನನ್ನ ಪ್ರಕಾರ ಗಂಗೂಲಿ ಶ್ರೇಷ್ಠ' ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>