<p><strong>ಸಿಂಗಪುರ: ಹ</strong>ತ್ತು ಮಂದಿ ಆಟಗಾರರಿಗೆ ಸೀಮಿತಗೊಂಡ ಭಾರತ ತಂಡವು ಪಂದ್ಯ ಮುಗಿಯುವ ಹಂತದಲ್ಲಿದ್ದಾಗ ಸಿಂಗಪುರ ಆಟಗಾರನೊಬ್ಬನ ರಕ್ಷಣಾ ಲೋಪದಿಂದ ಗೋಲು ಗಳಿಸಿ ಸೋಲಿನಿಂದ ಬಚಾವಾಯಿತು. ಎಎಫ್ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಗುರುವಾರ ಸಿಂಗಪುರ ಎದುರು 1–1 ಡ್ರಾ ಮಾಡಿಕೊಳ್ಳುವಲ್ಲಿ ಈ ಗೋಲು ಆಸರೆಯಾಯಿತು.</p>.<p>ಈ ಡ್ರಾ ಕಾರಣ, ಏಷ್ಯನ್ ಕಪ್ ಪ್ರಧಾನ ಟೂರ್ನಿಗೆ ಅರ್ಹತೆ ಗಳಿಸುವ ಭಾರತ ತಂಡದ ಕ್ಷೀಣ ಆಸೆ ಜೀವಂತವಾಗಿದೆ.</p>.<p>‘ಸಿ’ ಗುಂಪಿನ ಈ ಪಂದ್ಯದ ಮೊದಲಾರ್ಧದ ಕೊನೆಯ ಕ್ಷಣದಲ್ಲಿ (‘ಸ್ಟಾಪೇಜ್ ಅವಧಿ’ಯ ಮೊದಲ ನಿಮಿಷ) ಇಖ್ಸಾನ್ ಫಂದಿ ಗಳಿಸಿದ ಗೋಲಿನಿಂದಾಗಿ ಸಿಂಗಪುರ ಮುನ್ನಡೆ ಗಳಿಸಿತು. ಆದರೆ 90ನೇ ನಿಮಿಷ ಸಿಂಗಪುರದ ಜೋರ್ಡನ್ ಎಮಾವಿವ್ ಎಸಗಿದ ಪ್ರಮಾದ ದುಬಾರಿಯಾಯಿತು. ರಹೀಮ್ ಅಲಿ ಹೊಡೆದ ಗೋಲಿನಿಂದ ಭಾರತ ನಿಟ್ಟುಸಿರುಬಿಟ್ಟಿತು.</p>.<p>ಆಟಗಾರರನ್ನು ಶಿಬಿರಕ್ಕೆ ಬಿಟ್ಟುಕೊಡಲು ಕ್ಲಬ್ಗಳಿಂದಾದ ವಿಳಂಬ, ಗೊಂದಲಗಳ ಪರಿಣಾಮ ಭಾರತ ತಂಡ ಕೇವಲ ಒಂದು ವಾರವಷ್ಟೇ ಒಟ್ಟಾಗಿ ತರಬೇತಿ ಪಡೆಯಲು ಸಾಧ್ಯವಾಗಿತ್ತು.</p>.<p>ಖಾಲಿದ್ ಜಮೀಲ್ ತರಬೇತಿಯ ತಂಡಕ್ಕೆ ಈ ಪಂದ್ಯದಲ್ಲಿ ವಿರಾಮದ ನಂತರ ಮತ್ತೊಂದು ಹಿನ್ನಡೆಯಾಯಿತು. ರಕ್ಷಣೆ ಆಟಗಾರ ಸಂದೇಶ್ ಜಿಂಗಾನ್ ಅವರು ಎರಡನೇ ‘ಹಳದಿ ಕಾರ್ಡ್’ ದರ್ಶನದಿಂದಾಗಿ 47ನೇ ನಿಮಿಷ ಹೊರನಡೆಯಬೇಕಾಯಿತು. ಹೀಗಾಗಿ ತಂಡ ಹತ್ತು ಆಟಗಾರರೊಂದಿಗೆ ಉಳಿದ ಆವಧಿ ಆಡಬೇಕಾಯಿತು.</p>.<p>ಭಾರತ ಮೂರು ಪಂದ್ಯಗಳಿಂದ ಎರಡು ಪಾಯಿಂಟ್ಸ್ ಗಳಿಸಿದೆ. ಈ ಮೊದಲು ಬಾಂಗ್ಲಾದೇಶ ವಿರುದ್ಧ ಗೋಲಿಲ್ಲದೇ ಡ್ರಾ ಸಾಧಿಸಿದ್ದ ಗುರ್ಪ್ರೀತ್ ಸಿಂಗ್ ಸಂಧು ಬಳಗವು, ಹಾಂಗ್ಕಾಂಗ್ ತಂಡಕ್ಕೆ 0–1 ಗೋಲಿನಿಂದ ಮಣಿದಿತ್ತು. ಹೀಗಾಗಿ 2027ರ ಪ್ರಧಾನ ಸುತ್ತಿಗೆ ತಲುಪುವ ಸವಾಲಿನ ಹಾದಿ ಕಠಿಣವಾಗಿದ್ದರೂ ಬತ್ತಿಹೋಗಿಲ್ಲ.</p>.<p>ಗುಂಪಿನಲ್ಲಿ ಮೊದಲ ಸ್ಥಾನ ಗಳಿಸುವ ತಂಡ ಮಾತ್ರ ಎಎಫ್ಸಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆಯಲಿದೆ. </p>.<p>ಗುಂಪು ಹಂತದಲ್ಲಿ ಪ್ರತಿಯೊಂದು ತಂಡವು ಆರು ಪಂದ್ಯಗಳನ್ನು ಆಡಬೇಕಾಗುತ್ತದೆ. ಸ್ವದೇಶದಲ್ಲಿ ಮತ್ತು ಎದುರಾಳಿ ತಂಡದ ದೇಶದಲ್ಲಿ ತಲಾ ಒಂದೊಂದು ಪಂದ್ಯಗಳನ್ನು ಆಡಬೇಕಾಗುತ್ತದೆ.</p>.<p>ಸಿಂಗಪುರ ತಂಡವು ಗುರುವಾರದ ‘ಡ್ರಾ’ ದಿಂದಾಗಿ ಒಟ್ಟು ಐದು ಪಾಯಿಂಟ್ಸ್ ಶೇಖರಿಸಿದಂತಾಗಿದೆ. ಕೊನೆಗಳಿಗೆಯಲ್ಲಿ ಭಾರತಕ್ಕೆ ಗೋಲು ಬಿಟ್ಟುಕೊಟ್ಟ ಕಾರಣ ತಂಡ ಅಮೂಲ್ಯ ಒಂದು ಪಾಯಿಂಟ್ ಕಳೆದುಕೊಂಡು ಕೈಕೈಹಿಸುಕಿಕೊಳ್ಳುವಂತಾಯಿತು.</p>.<p>ಭಾರತಕ್ಕೆ ಈ ಪಂದ್ಯದಲ್ಲಿ ಅತ್ಯುತ್ತಮ ಎನ್ನಬಹುದಾದ ಅವಕಾಶಗಳು ದೊರೆತಿರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಎಮಾವಿವ್ ಸೆಂಟರ್ಲೈನ್ನಿಂದ ದೂರದ ಬ್ಯಾಕ್ಪಾಸ್ ಕಳುಹಿಸದೇ ಹೋಗಿದ್ದಲ್ಲಿ ಸಿಂಗಪುರ ಪಂದ್ಯ ಗೆಲ್ಲುವುದರಲ್ಲಿ ಅನುಮಾನವಿರಲಿಲ್ಲ.</p>.<p>ಈ ಎರಡೂ ತಂಡಗಳು ಇದೇ 14ರಂದು ಮಡಗಾಂವ್ನಲ್ಲಿ ನಡೆಯುವ ‘ರಿಟರ್ನ್ ಲೆಗ್’ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಗಪುರ: ಹ</strong>ತ್ತು ಮಂದಿ ಆಟಗಾರರಿಗೆ ಸೀಮಿತಗೊಂಡ ಭಾರತ ತಂಡವು ಪಂದ್ಯ ಮುಗಿಯುವ ಹಂತದಲ್ಲಿದ್ದಾಗ ಸಿಂಗಪುರ ಆಟಗಾರನೊಬ್ಬನ ರಕ್ಷಣಾ ಲೋಪದಿಂದ ಗೋಲು ಗಳಿಸಿ ಸೋಲಿನಿಂದ ಬಚಾವಾಯಿತು. ಎಎಫ್ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಗುರುವಾರ ಸಿಂಗಪುರ ಎದುರು 1–1 ಡ್ರಾ ಮಾಡಿಕೊಳ್ಳುವಲ್ಲಿ ಈ ಗೋಲು ಆಸರೆಯಾಯಿತು.</p>.<p>ಈ ಡ್ರಾ ಕಾರಣ, ಏಷ್ಯನ್ ಕಪ್ ಪ್ರಧಾನ ಟೂರ್ನಿಗೆ ಅರ್ಹತೆ ಗಳಿಸುವ ಭಾರತ ತಂಡದ ಕ್ಷೀಣ ಆಸೆ ಜೀವಂತವಾಗಿದೆ.</p>.<p>‘ಸಿ’ ಗುಂಪಿನ ಈ ಪಂದ್ಯದ ಮೊದಲಾರ್ಧದ ಕೊನೆಯ ಕ್ಷಣದಲ್ಲಿ (‘ಸ್ಟಾಪೇಜ್ ಅವಧಿ’ಯ ಮೊದಲ ನಿಮಿಷ) ಇಖ್ಸಾನ್ ಫಂದಿ ಗಳಿಸಿದ ಗೋಲಿನಿಂದಾಗಿ ಸಿಂಗಪುರ ಮುನ್ನಡೆ ಗಳಿಸಿತು. ಆದರೆ 90ನೇ ನಿಮಿಷ ಸಿಂಗಪುರದ ಜೋರ್ಡನ್ ಎಮಾವಿವ್ ಎಸಗಿದ ಪ್ರಮಾದ ದುಬಾರಿಯಾಯಿತು. ರಹೀಮ್ ಅಲಿ ಹೊಡೆದ ಗೋಲಿನಿಂದ ಭಾರತ ನಿಟ್ಟುಸಿರುಬಿಟ್ಟಿತು.</p>.<p>ಆಟಗಾರರನ್ನು ಶಿಬಿರಕ್ಕೆ ಬಿಟ್ಟುಕೊಡಲು ಕ್ಲಬ್ಗಳಿಂದಾದ ವಿಳಂಬ, ಗೊಂದಲಗಳ ಪರಿಣಾಮ ಭಾರತ ತಂಡ ಕೇವಲ ಒಂದು ವಾರವಷ್ಟೇ ಒಟ್ಟಾಗಿ ತರಬೇತಿ ಪಡೆಯಲು ಸಾಧ್ಯವಾಗಿತ್ತು.</p>.<p>ಖಾಲಿದ್ ಜಮೀಲ್ ತರಬೇತಿಯ ತಂಡಕ್ಕೆ ಈ ಪಂದ್ಯದಲ್ಲಿ ವಿರಾಮದ ನಂತರ ಮತ್ತೊಂದು ಹಿನ್ನಡೆಯಾಯಿತು. ರಕ್ಷಣೆ ಆಟಗಾರ ಸಂದೇಶ್ ಜಿಂಗಾನ್ ಅವರು ಎರಡನೇ ‘ಹಳದಿ ಕಾರ್ಡ್’ ದರ್ಶನದಿಂದಾಗಿ 47ನೇ ನಿಮಿಷ ಹೊರನಡೆಯಬೇಕಾಯಿತು. ಹೀಗಾಗಿ ತಂಡ ಹತ್ತು ಆಟಗಾರರೊಂದಿಗೆ ಉಳಿದ ಆವಧಿ ಆಡಬೇಕಾಯಿತು.</p>.<p>ಭಾರತ ಮೂರು ಪಂದ್ಯಗಳಿಂದ ಎರಡು ಪಾಯಿಂಟ್ಸ್ ಗಳಿಸಿದೆ. ಈ ಮೊದಲು ಬಾಂಗ್ಲಾದೇಶ ವಿರುದ್ಧ ಗೋಲಿಲ್ಲದೇ ಡ್ರಾ ಸಾಧಿಸಿದ್ದ ಗುರ್ಪ್ರೀತ್ ಸಿಂಗ್ ಸಂಧು ಬಳಗವು, ಹಾಂಗ್ಕಾಂಗ್ ತಂಡಕ್ಕೆ 0–1 ಗೋಲಿನಿಂದ ಮಣಿದಿತ್ತು. ಹೀಗಾಗಿ 2027ರ ಪ್ರಧಾನ ಸುತ್ತಿಗೆ ತಲುಪುವ ಸವಾಲಿನ ಹಾದಿ ಕಠಿಣವಾಗಿದ್ದರೂ ಬತ್ತಿಹೋಗಿಲ್ಲ.</p>.<p>ಗುಂಪಿನಲ್ಲಿ ಮೊದಲ ಸ್ಥಾನ ಗಳಿಸುವ ತಂಡ ಮಾತ್ರ ಎಎಫ್ಸಿ ಏಷ್ಯನ್ ಕಪ್ ಟೂರ್ನಿಗೆ ಅರ್ಹತೆ ಪಡೆಯಲಿದೆ. </p>.<p>ಗುಂಪು ಹಂತದಲ್ಲಿ ಪ್ರತಿಯೊಂದು ತಂಡವು ಆರು ಪಂದ್ಯಗಳನ್ನು ಆಡಬೇಕಾಗುತ್ತದೆ. ಸ್ವದೇಶದಲ್ಲಿ ಮತ್ತು ಎದುರಾಳಿ ತಂಡದ ದೇಶದಲ್ಲಿ ತಲಾ ಒಂದೊಂದು ಪಂದ್ಯಗಳನ್ನು ಆಡಬೇಕಾಗುತ್ತದೆ.</p>.<p>ಸಿಂಗಪುರ ತಂಡವು ಗುರುವಾರದ ‘ಡ್ರಾ’ ದಿಂದಾಗಿ ಒಟ್ಟು ಐದು ಪಾಯಿಂಟ್ಸ್ ಶೇಖರಿಸಿದಂತಾಗಿದೆ. ಕೊನೆಗಳಿಗೆಯಲ್ಲಿ ಭಾರತಕ್ಕೆ ಗೋಲು ಬಿಟ್ಟುಕೊಟ್ಟ ಕಾರಣ ತಂಡ ಅಮೂಲ್ಯ ಒಂದು ಪಾಯಿಂಟ್ ಕಳೆದುಕೊಂಡು ಕೈಕೈಹಿಸುಕಿಕೊಳ್ಳುವಂತಾಯಿತು.</p>.<p>ಭಾರತಕ್ಕೆ ಈ ಪಂದ್ಯದಲ್ಲಿ ಅತ್ಯುತ್ತಮ ಎನ್ನಬಹುದಾದ ಅವಕಾಶಗಳು ದೊರೆತಿರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಎಮಾವಿವ್ ಸೆಂಟರ್ಲೈನ್ನಿಂದ ದೂರದ ಬ್ಯಾಕ್ಪಾಸ್ ಕಳುಹಿಸದೇ ಹೋಗಿದ್ದಲ್ಲಿ ಸಿಂಗಪುರ ಪಂದ್ಯ ಗೆಲ್ಲುವುದರಲ್ಲಿ ಅನುಮಾನವಿರಲಿಲ್ಲ.</p>.<p>ಈ ಎರಡೂ ತಂಡಗಳು ಇದೇ 14ರಂದು ಮಡಗಾಂವ್ನಲ್ಲಿ ನಡೆಯುವ ‘ರಿಟರ್ನ್ ಲೆಗ್’ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>