<p><strong>ಮೆದಾನ್, ಇಂಡೊನೇಷ್ಯಾ (ಪಿಟಿಐ):</strong> ಭಾರತದ ಉದಯೋನ್ಮುಖ ಆಟಗಾರ ಕಿರಣ್ ಜಾರ್ಜ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದರು.</p>.<p>ಭಾನುವಾರ ನಡೆದ ಫೈನಲ್ನಲ್ಲಿ 23 ವರ್ಷದ ಕಿರಣ್ 21–19, 22–20 ರಿಂದ ಜಪಾನ್ನ ಕೂ ತಕಹಶಿ ಅವರನ್ನು ಮಣಿಸಿದರು. ಈ ಪಂದ್ಯ 56 ನಿಮಿಷ ನಡೆಯಿತು.</p>.<p>ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ (ಪಿಪಿಬಿಎ) ತರಬೇತಿ ಪಡೆಯುತ್ತಿರುವ ಕಿರಣ್, ವೃತ್ತಿಜೀವನದಲ್ಲಿ ಪಡೆದ ಎರಡನೇ ಬಿಡಬ್ಲ್ಯುಎಫ್ ವಿಶ್ವ ಟೂರ್ ಸೂಪರ್ 100 ಪ್ರಶಸ್ತಿ ಇದಾಗಿದೆ.</p>.<p>‘ಇದು ಅತ್ಯುತ್ತಮ ಗೆಲುವು. ಕಿರಣ್ ತಮಗೆ ಲಭಿಸಿದ ಅವಕಾಶಗಳನ್ನು ಬಳಸಿಕೊಂಡು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡರು. ಈ ಸಾಧನೆ ನನಗೆ ಸಂತಸ ನೀಡಿದೆ’ ಎಂದು ಪಿಪಿಬಿಎ ನಿರ್ದೇಶಕ ವಿಮಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.</p>.<p>ಕೇರಳದ ಕೊಚ್ಚಿಯ ಕಿರಣ್, ಕಳೆದ ವರ್ಷ ಒಡಿಶಾ ಓಪನ್ ಗೆದ್ದು ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದರು.</p>.<p>ಮೊದಲ ಗೇಮ್ನಲ್ಲಿ 1–4 ರಿಂದ ಹಿನ್ನಡೆಯಲ್ಲಿದ್ದ ಅವರು, ಮರುಹೋರಾಟ ನಡೆಸಿ 8–8 ರಿಂದ ಸಮಬಲ ಸಾಧಿಸಿದರು. ಆ ಬಳಿಕ ತುರುಸಿನ ಪೈಪೋಟಿ ನಡೆಯಿತು. 15–18 ರಿಂದ ಹಿನ್ನಡೆಯಲ್ಲಿದ್ದ ತಕಹಶಿ ಕೆಲವೊಂದು ಉತ್ತಮ ಹೊಡೆತಗಳ ಮೂಲಕ ಅಂತರವನ್ನು 19–20ಕ್ಕೆ ತಗ್ಗಿಸಿದರು. ಒತ್ತಡವನ್ನು ಮೆಟ್ಟಿನಿಂತ ಕಿರಣ್ ಮೊದಲ ಗೇಮ್ ಗೆದ್ದುಕೊಂಡರು.</p>.<p>ಎರಡನೇ ಗೇಮ್ನಲ್ಲಿ ಕಿರಣ್ 16–11 ರಿಂದ ಮೇಲುಗೈ ಪಡೆದರು. ಜಪಾನ್ ಆಟಗಾರ ಮರುಹೋರಾಟ ನಡೆಸಿ 19–19 ರಿಂದ ಸಮಬಲ ಸಾಧಿಸಿದರು. ಆ ಬಳಿಕ ತಮಗೆ ಲಭಿಸಿದ ಎರಡನೇ ಗೇಮ್ ಪಾಯಿಂಟ್ಅನ್ನು ಜಯಿಸಿದ ಭಾರತದ ಆಟಗಾರ ಚಾಂಪಿಯನ್ ಆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೆದಾನ್, ಇಂಡೊನೇಷ್ಯಾ (ಪಿಟಿಐ):</strong> ಭಾರತದ ಉದಯೋನ್ಮುಖ ಆಟಗಾರ ಕಿರಣ್ ಜಾರ್ಜ್ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದರು.</p>.<p>ಭಾನುವಾರ ನಡೆದ ಫೈನಲ್ನಲ್ಲಿ 23 ವರ್ಷದ ಕಿರಣ್ 21–19, 22–20 ರಿಂದ ಜಪಾನ್ನ ಕೂ ತಕಹಶಿ ಅವರನ್ನು ಮಣಿಸಿದರು. ಈ ಪಂದ್ಯ 56 ನಿಮಿಷ ನಡೆಯಿತು.</p>.<p>ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ (ಪಿಪಿಬಿಎ) ತರಬೇತಿ ಪಡೆಯುತ್ತಿರುವ ಕಿರಣ್, ವೃತ್ತಿಜೀವನದಲ್ಲಿ ಪಡೆದ ಎರಡನೇ ಬಿಡಬ್ಲ್ಯುಎಫ್ ವಿಶ್ವ ಟೂರ್ ಸೂಪರ್ 100 ಪ್ರಶಸ್ತಿ ಇದಾಗಿದೆ.</p>.<p>‘ಇದು ಅತ್ಯುತ್ತಮ ಗೆಲುವು. ಕಿರಣ್ ತಮಗೆ ಲಭಿಸಿದ ಅವಕಾಶಗಳನ್ನು ಬಳಸಿಕೊಂಡು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡರು. ಈ ಸಾಧನೆ ನನಗೆ ಸಂತಸ ನೀಡಿದೆ’ ಎಂದು ಪಿಪಿಬಿಎ ನಿರ್ದೇಶಕ ವಿಮಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.</p>.<p>ಕೇರಳದ ಕೊಚ್ಚಿಯ ಕಿರಣ್, ಕಳೆದ ವರ್ಷ ಒಡಿಶಾ ಓಪನ್ ಗೆದ್ದು ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದರು.</p>.<p>ಮೊದಲ ಗೇಮ್ನಲ್ಲಿ 1–4 ರಿಂದ ಹಿನ್ನಡೆಯಲ್ಲಿದ್ದ ಅವರು, ಮರುಹೋರಾಟ ನಡೆಸಿ 8–8 ರಿಂದ ಸಮಬಲ ಸಾಧಿಸಿದರು. ಆ ಬಳಿಕ ತುರುಸಿನ ಪೈಪೋಟಿ ನಡೆಯಿತು. 15–18 ರಿಂದ ಹಿನ್ನಡೆಯಲ್ಲಿದ್ದ ತಕಹಶಿ ಕೆಲವೊಂದು ಉತ್ತಮ ಹೊಡೆತಗಳ ಮೂಲಕ ಅಂತರವನ್ನು 19–20ಕ್ಕೆ ತಗ್ಗಿಸಿದರು. ಒತ್ತಡವನ್ನು ಮೆಟ್ಟಿನಿಂತ ಕಿರಣ್ ಮೊದಲ ಗೇಮ್ ಗೆದ್ದುಕೊಂಡರು.</p>.<p>ಎರಡನೇ ಗೇಮ್ನಲ್ಲಿ ಕಿರಣ್ 16–11 ರಿಂದ ಮೇಲುಗೈ ಪಡೆದರು. ಜಪಾನ್ ಆಟಗಾರ ಮರುಹೋರಾಟ ನಡೆಸಿ 19–19 ರಿಂದ ಸಮಬಲ ಸಾಧಿಸಿದರು. ಆ ಬಳಿಕ ತಮಗೆ ಲಭಿಸಿದ ಎರಡನೇ ಗೇಮ್ ಪಾಯಿಂಟ್ಅನ್ನು ಜಯಿಸಿದ ಭಾರತದ ಆಟಗಾರ ಚಾಂಪಿಯನ್ ಆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>