ಉತ್ತೇಜಕ ಪದಾರ್ಥ ಸೇವನೆ ಮಾಡುತ್ತಿರುವುದರ ಬಗ್ಗೆ ಮಾಹಿತಿ ಇಲ್ಲ. ಇಂಥ ಪದಾರ್ಥಗಳನ್ನು ಬಳಸುತ್ತಿರುವುದು ನಿಜವಾಗಿದ್ದಲ್ಲಿ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು.
–ಬಿ.ಸಿ.ಸುರೇಶ್ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ
ಯಾವುದೇ ಕ್ರೀಡೆ ಇರಲಿ ಅದರಲ್ಲಿ ಸಾಧನೆಗೆ ಕಳ್ಳದಾರಿ ಹಿಡಿಯುವುದು ಸರಿಯಲ್ಲ. ಯುವಪೀಳಿಗೆ ರಾಜ್ಯದ ಆಸ್ತಿಯಾಗಿದ್ದು ಉತ್ತೇಜಕ ಮದ್ದಿಗೆ ಮರುಳಾಗಿ ಅವರು ಜೀವನ ಹಾಳುಮಾಡಿಕೊಳ್ಳಬಾರದು.
–ಸಿ.ಹೊನ್ನಪ್ಪಗೌಡ ಮಾಜಿ ಅಂತರರಾಷ್ಟ್ರೀಯ ಆಟಗಾರ
ಕಬಡ್ಡಿ ಸಹಜವಾಗಿ ಆಡಬೇಕಾದ ಆಟ. ಈಗ ಹೆಚ್ಚಿನ ಕ್ರೀಡೆಗಳಲ್ಲಿ ಹಾದಿತಪ್ಪಿಸುವ ಕೆಲಸ ಆಗುತ್ತಿದೆ. ನಾವೆಲ್ಲ ನೈಸರ್ಗಿಕ ಆಹಾರ ಸೇವಿಸಿ ಕಬಡ್ಡಿ ಆಡಿ ಬೆಳೆದವರು. ಸಾಧನೆಗೆ ಉತ್ತೇಜಕ ಔಷಧಿ ಅಗತ್ಯವೇ ಇಲ್ಲ.