<p><strong>ಚಂಡೀಗಡ: </strong>ಭಾರತದ ರಶೀದ್ ಖಾನ್ ಅವರು ಇಲ್ಲಿನ ಚಂಡೀಗಡ ಗಾಲ್ಫ್ ಕ್ಲಬ್ನಲ್ಲಿ ನಡೆದ ಟಾಟಾ ಸ್ಟೀಲ್ ಪಿಜಿಟಿಐ ಪ್ಲೇಯರ್ಸ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.</p>.<p>ಮೊದಲ ಮೂರು ದಿನ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲವಾಗಿದ್ದ ದೆಹಲಿಯ ರಶೀದ್, ಅಂತಿಮ ದಿನವಾದ ಶುಕ್ರವಾರ ಅಮೋಘ ಕೌಶಲ ತೋರಿದರು. ಈ ಮೂಲಕ ಒಟ್ಟು 275 ಸ್ಕೋರ್ ಗಳಿಸಿ ಚಾಂಪಿಯನ್ ಆದರು.</p>.<p>ಏಷ್ಯನ್ ಟೂರ್ನಲ್ಲಿ ಎರಡು ಸಲ ಕಿರೀಟ ಮುಡಿಗೇರಿಸಿಕೊಂಡಿರುವ 28 ವರ್ಷದ ರಶೀದ್, ವೃತ್ತಿಬದುಕಿನಲ್ಲಿ ಗೆದ್ದ ಒಟ್ಟಾರೆ 12ನೇ ಪ್ರಶಸ್ತಿ ಇದಾಗಿದೆ.</p>.<p>ನೋಯ್ಡಾದ ಗೌರವ್ ಪ್ರತಾಪ್ ಸಿಂಗ್ ಮತ್ತು ಕೋಲ್ಕತ್ತದ ಶಂಕರ್ ದಾಸ್ ಅವರು ಜಂಟಿಯಾಗಿ ರನ್ನರ್ ಅಪ್ ಆದರು. ಇವರು ತಲಾ 277 ಸ್ಕೋರ್ ಸಂಗ್ರಹಿಸಿದರು.</p>.<p>ಸ್ಥಳೀಯ ಗಾಲ್ಫರ್ಗಳಾದ ಆದಿಲ್ ಬೇಡಿ, ಕರಣ್ದೀಪ್ ಕೊಚ್ಚಾರ್ ಮತ್ತು ಹರೇಂದ್ರ ಗುಪ್ತಾ ಅವರು ಜಂಟಿ ಎಂಟನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಇವರು ತಲಾ 281 ಸ್ಕೋರ್ ಗಳಿಸಿದರು.</p>.<p>‘ಈ ಋತುವಿನಲ್ಲಿ ಎರಡನೇ ಟ್ರೋಫಿ ಜಯಿಸಿದ್ದು ಖುಷಿ ನೀಡಿದೆ. ಮೊದಲ ಮೂರು ದಿನ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಿರಲಿಲ್ಲ. ಹೀಗಾಗಿ ಅಂತಿಮ ದಿನ ಗುಣಮಟ್ಟದ ಸಾಮರ್ಥ್ಯ ತೋರಲೇಬೇಕೆಂದು ನಿರ್ಧರಿಸಿದ್ದೆ. ಎಲ್ಲವೂ ಯೋಜನೆಯಂತೆಯೇ ನಡೆದಿದ್ದರಿಂದ ಪ್ರಶಸ್ತಿ ಒಲಿಯಿತು’ ಎಂದು ರಶೀದ್ ಖುಷಿ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಂಡೀಗಡ: </strong>ಭಾರತದ ರಶೀದ್ ಖಾನ್ ಅವರು ಇಲ್ಲಿನ ಚಂಡೀಗಡ ಗಾಲ್ಫ್ ಕ್ಲಬ್ನಲ್ಲಿ ನಡೆದ ಟಾಟಾ ಸ್ಟೀಲ್ ಪಿಜಿಟಿಐ ಪ್ಲೇಯರ್ಸ್ ಗಾಲ್ಫ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.</p>.<p>ಮೊದಲ ಮೂರು ದಿನ ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲವಾಗಿದ್ದ ದೆಹಲಿಯ ರಶೀದ್, ಅಂತಿಮ ದಿನವಾದ ಶುಕ್ರವಾರ ಅಮೋಘ ಕೌಶಲ ತೋರಿದರು. ಈ ಮೂಲಕ ಒಟ್ಟು 275 ಸ್ಕೋರ್ ಗಳಿಸಿ ಚಾಂಪಿಯನ್ ಆದರು.</p>.<p>ಏಷ್ಯನ್ ಟೂರ್ನಲ್ಲಿ ಎರಡು ಸಲ ಕಿರೀಟ ಮುಡಿಗೇರಿಸಿಕೊಂಡಿರುವ 28 ವರ್ಷದ ರಶೀದ್, ವೃತ್ತಿಬದುಕಿನಲ್ಲಿ ಗೆದ್ದ ಒಟ್ಟಾರೆ 12ನೇ ಪ್ರಶಸ್ತಿ ಇದಾಗಿದೆ.</p>.<p>ನೋಯ್ಡಾದ ಗೌರವ್ ಪ್ರತಾಪ್ ಸಿಂಗ್ ಮತ್ತು ಕೋಲ್ಕತ್ತದ ಶಂಕರ್ ದಾಸ್ ಅವರು ಜಂಟಿಯಾಗಿ ರನ್ನರ್ ಅಪ್ ಆದರು. ಇವರು ತಲಾ 277 ಸ್ಕೋರ್ ಸಂಗ್ರಹಿಸಿದರು.</p>.<p>ಸ್ಥಳೀಯ ಗಾಲ್ಫರ್ಗಳಾದ ಆದಿಲ್ ಬೇಡಿ, ಕರಣ್ದೀಪ್ ಕೊಚ್ಚಾರ್ ಮತ್ತು ಹರೇಂದ್ರ ಗುಪ್ತಾ ಅವರು ಜಂಟಿ ಎಂಟನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಇವರು ತಲಾ 281 ಸ್ಕೋರ್ ಗಳಿಸಿದರು.</p>.<p>‘ಈ ಋತುವಿನಲ್ಲಿ ಎರಡನೇ ಟ್ರೋಫಿ ಜಯಿಸಿದ್ದು ಖುಷಿ ನೀಡಿದೆ. ಮೊದಲ ಮೂರು ದಿನ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಿರಲಿಲ್ಲ. ಹೀಗಾಗಿ ಅಂತಿಮ ದಿನ ಗುಣಮಟ್ಟದ ಸಾಮರ್ಥ್ಯ ತೋರಲೇಬೇಕೆಂದು ನಿರ್ಧರಿಸಿದ್ದೆ. ಎಲ್ಲವೂ ಯೋಜನೆಯಂತೆಯೇ ನಡೆದಿದ್ದರಿಂದ ಪ್ರಶಸ್ತಿ ಒಲಿಯಿತು’ ಎಂದು ರಶೀದ್ ಖುಷಿ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>