<p><strong>ನವದೆಹಲಿ</strong>: ವಿಶೇಷ ಚೇತನರ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡೆಗಳಲ್ಲಿ 33 ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ಮೂಡಿಸಿದ ಭಾರತ ತಂಡದ ಸ್ಪರ್ಧಿಗಳನ್ನು ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ಕ್ರೀಡಾ ಸಚಿವಾಲಯವು ಸನ್ಮಾನಿಸಿತು.</p>.<p>ಇಟಲಿಯ ಟ್ಯೂರಿನ್ನಲ್ಲಿ ಮಾರ್ಚ್ನಲ್ಲಿ ನಡೆದ ಈ ಕೂಟದಲ್ಲಿ ಭಾರತದ ಸ್ಪರ್ಧಿಗಳು ಎಂಟು ಚಿನ್ನ, 18 ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.</p>.<p>‘ಈ ವಿಶೇಷ ಒಲಿಂಪಿಕ್ಸ್ ಬರೇ ಕ್ರೀಡಾಕೂಟ ಮಾತ್ರವಲ್ಲ, ಇದು ಒಳ್ಳಗೊಳ್ಳುವಿಕೆ ಮತ್ತು ಸಬಲೀಕರಣದ ನಿಟ್ಟಿನಲ್ಲಿ ನಡೆದ ಆಂದೋಲನ’ ಎಂದು ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಅವರು ಅಥ್ಲೀಟುಗಳನ್ನು ಉದ್ದೇಶಿಸಿ ಮಾತನಾಡಿದರು.</p>.<p>ವಿಶೇಷ ಒಲಿಂಪಿಕ್ಸ್ ಭಾರತ್ನ ಅಧ್ಯಕ್ಷ ಮಲ್ಲಿಕಾ ನಡ್ಡಾ ಅವರು ಅಥ್ಲೀಟುಗಳಿಗೆ ನೀಡಲಾಗುವ ನಗದು ಬಹುಮಾನ ಹೆಚ್ಚಿಸಲು ಪ್ರಯತ್ನ ನಡೆಸಿದ ರಕ್ಷಾ ಅವರಿಗೆ ಧನ್ಯವಾದ ಹೇಳಿದರು.</p>.<p>ಪರಿಷ್ಕೃತ ನಿಯಮದಂತೆ, ಚಿನ್ನ ಗೆಲ್ಲುವ ಅಥ್ಲೀಟುಗಳಿಗೆ ₹20ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹14 ಲಕ್ಷ ಮತ್ತು ಕಂಚಿನ ಪದಕ ವಿಜೇತರಿಗೆ ₹8 ಲಕ್ಷ ನೀಡಲಾಗುತ್ತಿದೆ. ಈ ಹಿಂದೆ ಪ್ಯಾರಾ ಅಥ್ಲೀಟುಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನ ಇದೀಗ ಬಹಳಷ್ಟು ಏರಿಕೆ ಕಂಡಿದೆ.</p>.<p>ವಿಶೇಷ ಚೇತನರ ಒಲಿಂಪಿಕ್ಸ್ ಅಥ್ಲೀಟುಗಳನ್ನು ಉತ್ತೇಜಿಸಲು ಕ್ರೀಡಾ ಸಚಿವಾಲಯ 11 ಕ್ರೀಡೆಗಳಲ್ಲಿ ರಾಷ್ಟ್ರೀಯ ಶಿಬಿರ ನಡೆಸುತ್ತಿದೆ. ಪರಿಕರಗಳ ಖರೀದಿಗೆ ನೆರವು ನೀಡುತ್ತಿದೆ. ಪ್ರಯಾಣ ವೆಚ್ಚ, ವಾಸ್ತವ್ಯ ಮತ್ತು ಊಟದ ವೆಚ್ಚ ಭರಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ವಿಶೇಷ ಚೇತನರ ಒಲಿಂಪಿಕ್ಸ್ ವಿಶ್ವ ಚಳಿಗಾಲದ ಕ್ರೀಡೆಗಳಲ್ಲಿ 33 ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ಮೂಡಿಸಿದ ಭಾರತ ತಂಡದ ಸ್ಪರ್ಧಿಗಳನ್ನು ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ಕ್ರೀಡಾ ಸಚಿವಾಲಯವು ಸನ್ಮಾನಿಸಿತು.</p>.<p>ಇಟಲಿಯ ಟ್ಯೂರಿನ್ನಲ್ಲಿ ಮಾರ್ಚ್ನಲ್ಲಿ ನಡೆದ ಈ ಕೂಟದಲ್ಲಿ ಭಾರತದ ಸ್ಪರ್ಧಿಗಳು ಎಂಟು ಚಿನ್ನ, 18 ಬೆಳ್ಳಿ ಮತ್ತು ಏಳು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದರು.</p>.<p>‘ಈ ವಿಶೇಷ ಒಲಿಂಪಿಕ್ಸ್ ಬರೇ ಕ್ರೀಡಾಕೂಟ ಮಾತ್ರವಲ್ಲ, ಇದು ಒಳ್ಳಗೊಳ್ಳುವಿಕೆ ಮತ್ತು ಸಬಲೀಕರಣದ ನಿಟ್ಟಿನಲ್ಲಿ ನಡೆದ ಆಂದೋಲನ’ ಎಂದು ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಅವರು ಅಥ್ಲೀಟುಗಳನ್ನು ಉದ್ದೇಶಿಸಿ ಮಾತನಾಡಿದರು.</p>.<p>ವಿಶೇಷ ಒಲಿಂಪಿಕ್ಸ್ ಭಾರತ್ನ ಅಧ್ಯಕ್ಷ ಮಲ್ಲಿಕಾ ನಡ್ಡಾ ಅವರು ಅಥ್ಲೀಟುಗಳಿಗೆ ನೀಡಲಾಗುವ ನಗದು ಬಹುಮಾನ ಹೆಚ್ಚಿಸಲು ಪ್ರಯತ್ನ ನಡೆಸಿದ ರಕ್ಷಾ ಅವರಿಗೆ ಧನ್ಯವಾದ ಹೇಳಿದರು.</p>.<p>ಪರಿಷ್ಕೃತ ನಿಯಮದಂತೆ, ಚಿನ್ನ ಗೆಲ್ಲುವ ಅಥ್ಲೀಟುಗಳಿಗೆ ₹20ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹14 ಲಕ್ಷ ಮತ್ತು ಕಂಚಿನ ಪದಕ ವಿಜೇತರಿಗೆ ₹8 ಲಕ್ಷ ನೀಡಲಾಗುತ್ತಿದೆ. ಈ ಹಿಂದೆ ಪ್ಯಾರಾ ಅಥ್ಲೀಟುಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನ ಇದೀಗ ಬಹಳಷ್ಟು ಏರಿಕೆ ಕಂಡಿದೆ.</p>.<p>ವಿಶೇಷ ಚೇತನರ ಒಲಿಂಪಿಕ್ಸ್ ಅಥ್ಲೀಟುಗಳನ್ನು ಉತ್ತೇಜಿಸಲು ಕ್ರೀಡಾ ಸಚಿವಾಲಯ 11 ಕ್ರೀಡೆಗಳಲ್ಲಿ ರಾಷ್ಟ್ರೀಯ ಶಿಬಿರ ನಡೆಸುತ್ತಿದೆ. ಪರಿಕರಗಳ ಖರೀದಿಗೆ ನೆರವು ನೀಡುತ್ತಿದೆ. ಪ್ರಯಾಣ ವೆಚ್ಚ, ವಾಸ್ತವ್ಯ ಮತ್ತು ಊಟದ ವೆಚ್ಚ ಭರಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>