<p><strong>ನವದೆಹಲಿ:</strong> ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ 1000 ಖೇಲೊ ಇಂಡಿಯಾ ಕೇಂದ್ರಗಳನ್ನು (ಕೆಐಸಿ) ಆರಂಭಿಸಲು ಕೇಂದ್ರ ಕ್ರೀಡಾ ಸಚಿವಾಲಯ ಸಜ್ಜಾಗಿದೆ. ಈ ಕಾರ್ಯಕ್ಕೆ ಕ್ರೀಡಾ ಚಾಂಪಿಯನ್ಗಳ ನೆರವು ಪಡೆದು ಅವರಿಗೆ ಸಂಭಾವನೆ ನೀಡಲು ಇಲಾಖೆ ಚಿಂತನೆ ನಡೆಸಿದೆ.</p>.<p>ಈ ಹಿಂದೆ ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಆದ ಪಟುಗಳು ಈ ಕೇಂದ್ರಗಳನ್ನು ಮುನ್ನಡೆಸಲಿದ್ದಾರೆ ಅಥವಾ ಅವರನ್ನು ಕೋಚ್ ಆಗಿಯೂ ನೇಮಿಸಿಕೊಳ್ಳಲಾಗುತ್ತದೆ.</p>.<p>‘ಭಾರತವನ್ನು ಒಂದು ಕ್ರೀಡಾ ಶಕ್ತಿಯಾಗಿ ರೂಪಿಸಲು ನಾವು ಶ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಯುವಕರಿಗೆ ಕ್ರೀಡೆಯು ವೃತ್ತಿಜೀವನದ ಕಾರ್ಯಸಾಧುಆಯ್ಕೆಯಾಗಿದೆ ಎಂಬುದನ್ನು ಖಚಿತಪಡಿಸಬೇಕಿದೆ’ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.</p>.<p>‘ಅಥ್ಲೀಟ್ಗಳು ಸ್ಪರ್ಧಾತ್ಮಕ ಕ್ರೀಡೆಯಿಂದ ನಿವೃತ್ತರಾದ ಬಳಿಕವೂ, ಕ್ರೀಡೆಯು ಅವರಿಗೆ ನಿರಂತರ ಜೀವನೋಪಾಯ ಒದಗಿಸಲು ಸಾಧ್ಯವಾಗಬೇಕು. ಹಾಗಾದಾಗ ಪೋಷಕರು ಕ್ರೀಡೆಯನ್ನು ಒಂದು ಗಂಭೀರ ವೃತ್ತಿಯನ್ನಾಗಿ ಆಯ್ದುಕೊಳ್ಳಲು ಮಕ್ಕಳನ್ನು ಪ್ರೇರೇಪಿಸುತ್ತಾರೆ. ಶ್ರೇಷ್ಠ ಪ್ರತಿಭೆಗಳನ್ನು ಹೊರತರಲು ಇದೊಂದೇ ಮಾರ್ಗ. ನಾವು ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದೇವೆ’ ಎಂದು ರಿಜಿಜು ವಿವರಿಸಿದರು.</p>.<p>ಕಿರುಪಟ್ಟಿ ಯಾಂತ್ರಿಕ ವ್ಯವಸ್ಥೆ: ತಮ್ಮದೇ ಆದ ಅಕಾಡೆಮಿಯನ್ನು ಸ್ಥಾಪಿಸಲು ಅಥವಾ ಕೆಐಸಿಯಲ್ಲಿ ತರಬೇತುದಾರರಾಗಿ ಕೆಲಸ ಮಾಡಲು ಅರ್ಹರಾಗಿರುವ ಹಿರಿಯ ಚಾಂಪಿಯನ್ಗಳನ್ನು ಗುರುತಿಸಲು ಕಿರು-ಪಟ್ಟಿ ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮೊದಲ ಆದ್ಯತೆಯಾಗಿ, ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್ಎಸ್ಎಫ್) ಅಥವಾ ಅಸೋಸಿಯೇಷನ್ ಅಡಿಯಲ್ಲಿ ಅಂಗೀಕೃತ ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದವರನ್ನು ಪರಿಗಣಿಸಲಾಗುವುದು.</p>.<p>ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಅಥವಾ ಮಾನ್ಯತೆ ಪಡೆದ ಎನ್ಎಸ್ಎಫ್ ಆಯೋಜಿಸಿದ್ದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್ಷಿಪ್ನಲ್ಲಿಪದಕ ವಿಜೇತರನ್ನು ಎರಡನೇ ವರ್ಗದಲ್ಲಿ ಪರಿಗಣಿಸಲಾಗುವುದು.</p>.<p>ಮೂರನೇ ವರ್ಗದಲ್ಲಿ, ರಾಷ್ಟ್ರೀಯ ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರನ್ನು ಆಯ್ಕೆಗೆ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಸೀನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಅಥವಾ ಖೇಲೊ ಇಂಡಿಯಾ ಕೂಟದಲ್ಲಿ ಭಾಗವಹಿಸಿದವರನ್ನು ನಾಲ್ಕನೇ ವರ್ಗದಲ್ಲಿ ಪರಿಗಣಿಸಲಾಗುತ್ತದೆ.</p>.<p>ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶಗಳು ಮತ್ತು ಲಡಾಕ್ ಪ್ರದೇಶಗಳ ಅಥ್ಲೀಟುಗಳಿಗೆ ಈ ನಿಯಮದಿಂದ ಅಲ್ಪ ವಿನಾಯಿತಿ ಇದೆ. ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್ಐಎಸ್)ಯಿಂದ ತರಬೇತಿ ಪ್ರಮಾಣಪತ್ರ ಪಡೆದ ಈ ಈ ಪ್ರದೇಶಗಳಿಗೆ ಸೇರಿದ ಕೋಚ್ಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.</p>.<p>ದೇಶದಾದ್ಯಂತ ಕೆಐಸಿ ಜಾಲ ನಿರ್ಮಿಸಲು, ಅಸ್ತಿತ್ವದಲ್ಲಿರುವ ಸಾಯ್ ವಿಸ್ತರಣಾ ಕೇಂದ್ರಗಳಿಗೆ, ಕೆಐಸಿಯಾಗಿ ಪರಿವರ್ತನೆ ಮತ್ತು ಯೋಜನೆಯಡಿ ಚಾಂಪಿಯನ್ಗಳನ್ನು ನೇಮಿಸಿಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ.</p>.<p>ಕನಿಷ್ಠ ಐದು ವರ್ಷಗಳಿಂದ ಕ್ರೀಡೆಗಳನ್ನು ಉತ್ತೇಜಿಸುತ್ತಿರುವ ಸಂಸ್ಥೆಗಳೂ ಕೆಐಸಿಯನ್ನು ಸ್ಥಾಪಿಸಲು ಅರ್ಹರಾಗಿರುತ್ತವೆ.</p>.<p><strong>14 ಕ್ರೀಡೆಗಳಲ್ಲಿ ತರಬೇತಿ:</strong> ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಫೆನ್ಸಿಂಗ್, ಹಾಕಿ, ಜೂಡೊ, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್, ವೇಟ್ಲಿಫ್ಟಿಂಗ್ ಹಾಗೂ ಕುಸ್ತಿ ಸೇರಿದಂತೆ 14 ಕ್ರೀಡೆಗಳಿಗೆ ಈ ಯೋಜನೆಯಡಿ ತರಬೇತಿ ನೀಡಲಾಗುತ್ತದೆ. ಫುಟ್ಬಾಲ್ ಹಾಗೂ ಸಾಂಪ್ರದಾಯಿಕ ಕ್ರೀಡೆಗಳೂ ಇದರಲ್ಲಿವೆ.</p>.<p>ಹೊಸ ಕೆಐಸಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಇಲಾಖೆಗಳು ನೋಡಿಕೊಳ್ಳುತ್ತವೆ. ಜಿಲ್ಲಾಧಿಕಾರಿಗಳು ಈ ಕಾರ್ಯಕ್ಕೆ ನೆರವು ನೀಡಲಿದ್ದಾರೆ. ಕೆಐಸಿಗಾಗಿ ಸಲ್ಲಿಸಿದ ಪ್ರಸ್ತಾವವನ್ನು ಹೆಚ್ಚಿನ ಪರಿಶೀಲನೆಗಾಗಿ ಸಾಯ್ನ ವಲಯ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದಾದ್ಯಂತ ಜಿಲ್ಲಾ ಮಟ್ಟದಲ್ಲಿ 1000 ಖೇಲೊ ಇಂಡಿಯಾ ಕೇಂದ್ರಗಳನ್ನು (ಕೆಐಸಿ) ಆರಂಭಿಸಲು ಕೇಂದ್ರ ಕ್ರೀಡಾ ಸಚಿವಾಲಯ ಸಜ್ಜಾಗಿದೆ. ಈ ಕಾರ್ಯಕ್ಕೆ ಕ್ರೀಡಾ ಚಾಂಪಿಯನ್ಗಳ ನೆರವು ಪಡೆದು ಅವರಿಗೆ ಸಂಭಾವನೆ ನೀಡಲು ಇಲಾಖೆ ಚಿಂತನೆ ನಡೆಸಿದೆ.</p>.<p>ಈ ಹಿಂದೆ ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಆದ ಪಟುಗಳು ಈ ಕೇಂದ್ರಗಳನ್ನು ಮುನ್ನಡೆಸಲಿದ್ದಾರೆ ಅಥವಾ ಅವರನ್ನು ಕೋಚ್ ಆಗಿಯೂ ನೇಮಿಸಿಕೊಳ್ಳಲಾಗುತ್ತದೆ.</p>.<p>‘ಭಾರತವನ್ನು ಒಂದು ಕ್ರೀಡಾ ಶಕ್ತಿಯಾಗಿ ರೂಪಿಸಲು ನಾವು ಶ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಯುವಕರಿಗೆ ಕ್ರೀಡೆಯು ವೃತ್ತಿಜೀವನದ ಕಾರ್ಯಸಾಧುಆಯ್ಕೆಯಾಗಿದೆ ಎಂಬುದನ್ನು ಖಚಿತಪಡಿಸಬೇಕಿದೆ’ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.</p>.<p>‘ಅಥ್ಲೀಟ್ಗಳು ಸ್ಪರ್ಧಾತ್ಮಕ ಕ್ರೀಡೆಯಿಂದ ನಿವೃತ್ತರಾದ ಬಳಿಕವೂ, ಕ್ರೀಡೆಯು ಅವರಿಗೆ ನಿರಂತರ ಜೀವನೋಪಾಯ ಒದಗಿಸಲು ಸಾಧ್ಯವಾಗಬೇಕು. ಹಾಗಾದಾಗ ಪೋಷಕರು ಕ್ರೀಡೆಯನ್ನು ಒಂದು ಗಂಭೀರ ವೃತ್ತಿಯನ್ನಾಗಿ ಆಯ್ದುಕೊಳ್ಳಲು ಮಕ್ಕಳನ್ನು ಪ್ರೇರೇಪಿಸುತ್ತಾರೆ. ಶ್ರೇಷ್ಠ ಪ್ರತಿಭೆಗಳನ್ನು ಹೊರತರಲು ಇದೊಂದೇ ಮಾರ್ಗ. ನಾವು ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದ್ದೇವೆ’ ಎಂದು ರಿಜಿಜು ವಿವರಿಸಿದರು.</p>.<p>ಕಿರುಪಟ್ಟಿ ಯಾಂತ್ರಿಕ ವ್ಯವಸ್ಥೆ: ತಮ್ಮದೇ ಆದ ಅಕಾಡೆಮಿಯನ್ನು ಸ್ಥಾಪಿಸಲು ಅಥವಾ ಕೆಐಸಿಯಲ್ಲಿ ತರಬೇತುದಾರರಾಗಿ ಕೆಲಸ ಮಾಡಲು ಅರ್ಹರಾಗಿರುವ ಹಿರಿಯ ಚಾಂಪಿಯನ್ಗಳನ್ನು ಗುರುತಿಸಲು ಕಿರು-ಪಟ್ಟಿ ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಲಾಗಿದೆ. ಮೊದಲ ಆದ್ಯತೆಯಾಗಿ, ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಫೆಡರೇಷನ್ (ಎನ್ಎಸ್ಎಫ್) ಅಥವಾ ಅಸೋಸಿಯೇಷನ್ ಅಡಿಯಲ್ಲಿ ಅಂಗೀಕೃತ ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದವರನ್ನು ಪರಿಗಣಿಸಲಾಗುವುದು.</p>.<p>ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಅಥವಾ ಮಾನ್ಯತೆ ಪಡೆದ ಎನ್ಎಸ್ಎಫ್ ಆಯೋಜಿಸಿದ್ದ ರಾಷ್ಟ್ರೀಯ ಸೀನಿಯರ್ ಚಾಂಪಿಯನ್ಷಿಪ್ನಲ್ಲಿಪದಕ ವಿಜೇತರನ್ನು ಎರಡನೇ ವರ್ಗದಲ್ಲಿ ಪರಿಗಣಿಸಲಾಗುವುದು.</p>.<p>ಮೂರನೇ ವರ್ಗದಲ್ಲಿ, ರಾಷ್ಟ್ರೀಯ ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರನ್ನು ಆಯ್ಕೆಗೆ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಸೀನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಅಥವಾ ಖೇಲೊ ಇಂಡಿಯಾ ಕೂಟದಲ್ಲಿ ಭಾಗವಹಿಸಿದವರನ್ನು ನಾಲ್ಕನೇ ವರ್ಗದಲ್ಲಿ ಪರಿಗಣಿಸಲಾಗುತ್ತದೆ.</p>.<p>ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶಗಳು ಮತ್ತು ಲಡಾಕ್ ಪ್ರದೇಶಗಳ ಅಥ್ಲೀಟುಗಳಿಗೆ ಈ ನಿಯಮದಿಂದ ಅಲ್ಪ ವಿನಾಯಿತಿ ಇದೆ. ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್ಐಎಸ್)ಯಿಂದ ತರಬೇತಿ ಪ್ರಮಾಣಪತ್ರ ಪಡೆದ ಈ ಈ ಪ್ರದೇಶಗಳಿಗೆ ಸೇರಿದ ಕೋಚ್ಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.</p>.<p>ದೇಶದಾದ್ಯಂತ ಕೆಐಸಿ ಜಾಲ ನಿರ್ಮಿಸಲು, ಅಸ್ತಿತ್ವದಲ್ಲಿರುವ ಸಾಯ್ ವಿಸ್ತರಣಾ ಕೇಂದ್ರಗಳಿಗೆ, ಕೆಐಸಿಯಾಗಿ ಪರಿವರ್ತನೆ ಮತ್ತು ಯೋಜನೆಯಡಿ ಚಾಂಪಿಯನ್ಗಳನ್ನು ನೇಮಿಸಿಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ.</p>.<p>ಕನಿಷ್ಠ ಐದು ವರ್ಷಗಳಿಂದ ಕ್ರೀಡೆಗಳನ್ನು ಉತ್ತೇಜಿಸುತ್ತಿರುವ ಸಂಸ್ಥೆಗಳೂ ಕೆಐಸಿಯನ್ನು ಸ್ಥಾಪಿಸಲು ಅರ್ಹರಾಗಿರುತ್ತವೆ.</p>.<p><strong>14 ಕ್ರೀಡೆಗಳಲ್ಲಿ ತರಬೇತಿ:</strong> ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಸೈಕ್ಲಿಂಗ್, ಫೆನ್ಸಿಂಗ್, ಹಾಕಿ, ಜೂಡೊ, ರೋಯಿಂಗ್, ಶೂಟಿಂಗ್, ಈಜು, ಟೇಬಲ್ ಟೆನಿಸ್, ವೇಟ್ಲಿಫ್ಟಿಂಗ್ ಹಾಗೂ ಕುಸ್ತಿ ಸೇರಿದಂತೆ 14 ಕ್ರೀಡೆಗಳಿಗೆ ಈ ಯೋಜನೆಯಡಿ ತರಬೇತಿ ನೀಡಲಾಗುತ್ತದೆ. ಫುಟ್ಬಾಲ್ ಹಾಗೂ ಸಾಂಪ್ರದಾಯಿಕ ಕ್ರೀಡೆಗಳೂ ಇದರಲ್ಲಿವೆ.</p>.<p>ಹೊಸ ಕೆಐಸಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾ ಇಲಾಖೆಗಳು ನೋಡಿಕೊಳ್ಳುತ್ತವೆ. ಜಿಲ್ಲಾಧಿಕಾರಿಗಳು ಈ ಕಾರ್ಯಕ್ಕೆ ನೆರವು ನೀಡಲಿದ್ದಾರೆ. ಕೆಐಸಿಗಾಗಿ ಸಲ್ಲಿಸಿದ ಪ್ರಸ್ತಾವವನ್ನು ಹೆಚ್ಚಿನ ಪರಿಶೀಲನೆಗಾಗಿ ಸಾಯ್ನ ವಲಯ ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>