<p><strong>ಬೆಂಗಳೂರು/ ಚೆನ್ನೈ:</strong> ಪ್ರಯಾಣ ನಿರ್ಬಂಧದ ಕಾರಣ ಮೂರು ತಿಂಗಳು ಜರ್ಮನಿಯಲ್ಲೇ ಅನಿವಾರ್ಯವಾಗಿ ತಂಗಿದ್ದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಕೊನೆಗೂಶನಿವಾರ ಮಧ್ಯಾಹ್ನ ಭಾರತಕ್ಕೆ ವಾಪಸಾಗಿದ್ದಾರೆ.</p>.<p>ಫ್ರಾಂಕ್ಫರ್ಟ್ನಿಂದ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿ ಮೂಲಕ ಅವರು ಮಧ್ಯಾಹ್ನ 1.15ಕ್ಕೆ ಬೆಂಗಳೂರಿಗೆ ಬಂದಿಳಿದರು. ಶುಕ್ರವಾರ ರಾತ್ರಿ ಈ ವಿಮಾನ ಯಾನವನ್ನು ಆರಂಭಿಸಿತ್ತು.</p>.<p>ಬಂಡೆಸ್ಲಿಗಾ ಚೆಸ್ ಲೀಗ್ನಲ್ಲಿ ಆಡಲು ಚೆನ್ನೈನ ಆನಂದ್ ಫೆಬ್ರುವರಿಯಲ್ಲಿ ಜರ್ಮನಿಗೆ ಹೋಗಿದ್ದರು. ಮಾರ್ಚ್ನಲ್ಲಿ ತವರಿಗೆ ಮರಳಬೇಕಿತ್ತು. ಆದರೆ ಅಷ್ಟರೊಳಗೆ ಕೊರೊನಾ ವೈರಾಣು ಎಲ್ಲೆಡೆ ಕಬಂಧಬಾಹು ಚಾಚಿದ್ದ ಕಾರಣ ಪ್ರಯಾಣ ನಿರ್ಬಂಧ ಹೇರಲಾಗಿತ್ತು.</p>.<p>‘ಆನಂದ್ ಭಾರತಕ್ಕೆ ಬಂದಿದ್ದಾರೆ. ಅವರು ಕ್ಷೇಮವಾಗಿದ್ದಾರೆ. ಕ್ವಾರಂಟೈನ್ಗೆ ಒಳಪಟ್ಟ ನಂತರ ಅವರು ಚೆನ್ನೈಗೆ ಮರಳಲಿದ್ದಾರೆ’ ಎಂದು ಆನಂದ್ ಪತ್ನಿ ಅರುಣಾ ಚೆನ್ನೈನಿಂದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಏಳು ದಿನಗಳನ್ನು ಪೂರೈಸಬೇಕಿದೆ. ನೆಗೆಟಿವ್ ವರದಿ ಬಂದ ನಂತರ 14 ದಿನಗಳ ಕಾಲ ‘ಗೃಹಬಂಧನ’ದಲ್ಲಿ ಇರಬೇಕಾಗುತ್ತದೆ.</p>.<p>ಜರ್ಮನಿಯಲ್ಲಿ ಲೀಗ್ ಆಡಿದ ನಂತರ ಫ್ರಾಂಕ್ಫರ್ಟ್ ಸಮೀಪ ವಾಸ್ತವ್ಯ ಮಾಡಿದ್ದ ಆನಂದ್, ಅಲ್ಲಿಂದಲೇ ರಷ್ಯಾದಲ್ಲಿ ನಡೆಯುತ್ತಿದ್ದ ಕ್ಯಾಂಡಿಡೇಟ್ಸ್ ಟೂರ್ನಿಯ ಆನ್ಲೈನ್ ಕಮೆಂಟರಿ ಮಾಡಿದ್ದರು. ಆದರೆ ಆ ಟೂರ್ನಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ನಂತರ ಅವರು ನೇಷನ್ ಕಪ್ ಆನ್ಲೈನ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು/ ಚೆನ್ನೈ:</strong> ಪ್ರಯಾಣ ನಿರ್ಬಂಧದ ಕಾರಣ ಮೂರು ತಿಂಗಳು ಜರ್ಮನಿಯಲ್ಲೇ ಅನಿವಾರ್ಯವಾಗಿ ತಂಗಿದ್ದ ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಕೊನೆಗೂಶನಿವಾರ ಮಧ್ಯಾಹ್ನ ಭಾರತಕ್ಕೆ ವಾಪಸಾಗಿದ್ದಾರೆ.</p>.<p>ಫ್ರಾಂಕ್ಫರ್ಟ್ನಿಂದ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿ ಮೂಲಕ ಅವರು ಮಧ್ಯಾಹ್ನ 1.15ಕ್ಕೆ ಬೆಂಗಳೂರಿಗೆ ಬಂದಿಳಿದರು. ಶುಕ್ರವಾರ ರಾತ್ರಿ ಈ ವಿಮಾನ ಯಾನವನ್ನು ಆರಂಭಿಸಿತ್ತು.</p>.<p>ಬಂಡೆಸ್ಲಿಗಾ ಚೆಸ್ ಲೀಗ್ನಲ್ಲಿ ಆಡಲು ಚೆನ್ನೈನ ಆನಂದ್ ಫೆಬ್ರುವರಿಯಲ್ಲಿ ಜರ್ಮನಿಗೆ ಹೋಗಿದ್ದರು. ಮಾರ್ಚ್ನಲ್ಲಿ ತವರಿಗೆ ಮರಳಬೇಕಿತ್ತು. ಆದರೆ ಅಷ್ಟರೊಳಗೆ ಕೊರೊನಾ ವೈರಾಣು ಎಲ್ಲೆಡೆ ಕಬಂಧಬಾಹು ಚಾಚಿದ್ದ ಕಾರಣ ಪ್ರಯಾಣ ನಿರ್ಬಂಧ ಹೇರಲಾಗಿತ್ತು.</p>.<p>‘ಆನಂದ್ ಭಾರತಕ್ಕೆ ಬಂದಿದ್ದಾರೆ. ಅವರು ಕ್ಷೇಮವಾಗಿದ್ದಾರೆ. ಕ್ವಾರಂಟೈನ್ಗೆ ಒಳಪಟ್ಟ ನಂತರ ಅವರು ಚೆನ್ನೈಗೆ ಮರಳಲಿದ್ದಾರೆ’ ಎಂದು ಆನಂದ್ ಪತ್ನಿ ಅರುಣಾ ಚೆನ್ನೈನಿಂದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.</p>.<p>ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಏಳು ದಿನಗಳನ್ನು ಪೂರೈಸಬೇಕಿದೆ. ನೆಗೆಟಿವ್ ವರದಿ ಬಂದ ನಂತರ 14 ದಿನಗಳ ಕಾಲ ‘ಗೃಹಬಂಧನ’ದಲ್ಲಿ ಇರಬೇಕಾಗುತ್ತದೆ.</p>.<p>ಜರ್ಮನಿಯಲ್ಲಿ ಲೀಗ್ ಆಡಿದ ನಂತರ ಫ್ರಾಂಕ್ಫರ್ಟ್ ಸಮೀಪ ವಾಸ್ತವ್ಯ ಮಾಡಿದ್ದ ಆನಂದ್, ಅಲ್ಲಿಂದಲೇ ರಷ್ಯಾದಲ್ಲಿ ನಡೆಯುತ್ತಿದ್ದ ಕ್ಯಾಂಡಿಡೇಟ್ಸ್ ಟೂರ್ನಿಯ ಆನ್ಲೈನ್ ಕಮೆಂಟರಿ ಮಾಡಿದ್ದರು. ಆದರೆ ಆ ಟೂರ್ನಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ನಂತರ ಅವರು ನೇಷನ್ ಕಪ್ ಆನ್ಲೈನ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>