ಆರು ಸುತ್ತುಗಳ ಅಂತ್ಯಕ್ಕೆ ಭಾರತ ಒಂಬತ್ತು ಮ್ಯಾಚ್ ಪಾಯಿಂಟ್ಸ್ (ಜಯ ಗಳಿಸಿದರೆ ಎರಡು ಹಾಗೂ ಡ್ರಾ ಸಾಧಿಸಿದರೆ ಒಂದು ಪಾಯಿಂಟ್ ನೀಡಲಾಗುತ್ತದೆ) ಕಲೆಹಾಕಿದೆ. ಟೂರ್ನಿಯಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಅಷ್ಟೇ ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಪ್ರಮುಖ ಆಟಗಾರರಾದ ವಿಶ್ವನಾಥನ್ ಆನಂದ್ ಹಾಗೂ ವಿದಿತ್ ಗುಜರಾಥಿ ಅವರು ಭಾರತ ತಂಡದಲ್ಲಿ ಇಲ್ಲ.