ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್‌: ದೇವಾಂಗ ಯೂನಿಯನ್‌ಗೆ ಜಯ

Last Updated 17 ಸೆಪ್ಟೆಂಬರ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ದೇವಾಂಗ ಯೂನಿಯನ್‌ ಮತ್ತು ಮೈಸೂರು ಬಿಸಿ ತಂಡಗಳು ಎಸ್‌.ರಂಗರಾಜನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿದವು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯಗಳಲ್ಲಿ ದೇವಾಂಗ ಯೂನಿಯನ್‌ 73–32ರಿಂದ ಸ್ಪಾರ್ಟನ್ ಬಿಸಿ ನಂಜನಗೂಡು ಎದುರು ಗೆದ್ದಿತು. ಮೈಸೂರು ಬಿಸಿ ತಂಡವು 77–35ರಿಂದ ಮಿರಾಕಲ್ ಹುಬ್ಬಳ್ಳಿ ತಂಡವನ್ನು ಸೋಲಿಸಿತು.

ಇನ್ನುಳಿದ ಪಂದ್ಯಗಳಲ್ಲಿ ವಿವೇಕ್ ಎಸ್‌ಸಿ 85–37ರಿಂದ ವೈಸಿಎಸ್‌ಸಿ ಮೈಸೂರು ಎದುರು, ರಾಜ್‌ಕುಮಾರ್ ಬಿಸಿ 67–25ರಿಂದ ಸ್ಟಾರ್‌ ಚಾಲೆಂಜರ್ಸ್ ಮೈಸೂರು ಎದುರು, ಪಿಪಿಸಿ 42–26ರಿಂದ ಮರ್ಚಂಟ್ಸ್ ಎಸ್‌ಸಿ ದಾವಣಗೆರೆ ವಿರುದ್ಧ, ಹಲಸೂರು ಎಸ್‌ಯು ತಂಡವು 82–80ರಿಂದ ಮಲ್ಲಸಜ್ಜನ ಬಿಸಿ ಧಾರವಾಡ ವಿರುದ್ಧ, ಬಿಸಿ.ಬಿಸಿ ತಂಡವು 100–56ರಿಂದ ಪಿನಾಕಿನಿ ಗೌರಿಬಿದನೂರು ಎದುರು ಜಯ ಸಾಧಿಸಿದವು.

ಹೊಯ್ಸಳ ಬಿಸಿ. ಹಾಸನ 67–27ರಿಂದ ನ್ಯಾಷನಲ್ಸ್ ಬಿಸಿ ಮೈಸೂರು ಎದುರು, ಕೆ.ಎಸ್‌. ಹೆಗ್ಡೆ ನಿಟ್ಟೆ ತಂಡವು 46–30ರಿಂದ ಆಲ್ ಸ್ಟಾರ್ ಬಿಸಿ ಮೈಸೂರು ಎದುರು, ವಿಜಯನಗರ ಎಸ್‌ಸಿ ಹೊಸಪೇಟೆ 59–30ರಿಂದ ಒರಾಯನ್ಸ್ ಎಸ್‌ಸಿ ವಿರುದ್ಧ, ವಿಮಾನಪುರ ಎಸ್‌ಸಿ 73–20ರಿಂದ ವೈಸಿಬಿಸಿ ಬಳ್ಳಾರಿ ಎದುರು, ಗ್ರೀನ್ಸ್ ಬಿಸಿ ದಾವಣಗೆರೆ 68–47ರಿಂದ ಅಪ್ಪಯ್ಯ ಬಿಸಿ ವಿರುದ್ಧ, ಬಿಸಿವೈಎ 67–41ರಿಂದ ಸ್ಪಾರ್ಟನ್ ಬಿಸಿ ನಂಜನಗೂಡು ಎದುರು, ಬೆಂಗಳೂರು ಸ್ಪೋರ್ಟಿಂಗ್‌ 82–58ರಿಂದ ವೈಎಫ್‌ಬಿಸಿ ಕೋಲಾರ ಎದುರು, ಒಮೆಗಾ ಬಿಸಿ ಹಾಸನ 38–29ರಿಂದ ಎಂಸಿಎಚ್‌ಎಸ್‌ ವಿರುದ್ಧ ಜಯ ಗಳಿಸಿ ಮುನ್ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT