<p><strong>ನವದೆಹಲಿ:</strong> ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಆಯೋಜನೆಯ ಹಿಂದೆ ದುಡ್ಡಿನ ಕಾಳಜಿ ಇತ್ತು. ಆಟಗಾರರ ಹಿತಾಸಕ್ತಿಯನ್ನು ಕಡೆಗಣಿಸಲಾಗಿತ್ತು ಎಂದು ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಕಿಡಿಕಾರಿದ್ದಾರೆ.</p>.<p>ಕೊರೊನಾ ವೈರಸ್ ಸೋಂಕಿನ ಭೀತಿ ಇದ್ದರೂ ಟೂರ್ನಿಯನ್ನು ನಡೆಸಿದ್ದರ ಬಗ್ಗೆ ಅವರು ಆಕ್ಷೇಪ ಎತ್ತಿದ್ದಾರೆ.</p>.<p>‘ಟೂರ್ನಿಯನ್ನು ಆಯೋಜಿಸಲು ಯಾವ ಅನಿವಾರ್ಯತೆಯೂ ಇರಲಿಲ್ಲ. ಹಣ ವ್ಯರ್ಥವಾಗದಂತೆ ನೋಡಿಕೊಳ್ಳಲು ಮತ್ತು ಗಳಿಸಲು ಮಾತ್ರ ಟೂರ್ನಿ ನಡೆಸಲಾಯಿತು. ಆದರೆ, ಆಟಗಾರರ ಜೀವದ ಬಗ್ಗೆ ಯೋಚಿಸಿದ್ದರೆ ಟೂರ್ನಿಯನ್ನು ರದ್ದು ಮಾಡುತ್ತಿದ್ದರು’ ಎಂದು ಸೈನಾ ಟ್ವೀಟ್ ಮಾಡಿದ್ದಾರೆ.</p>.<p>ಈ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತದ ಆಟಗಾರ ಮತ್ತು ಸೈನಾ ಅವರ ಪತಿ ಪರುಪಳ್ಳಿ ಕಶ್ಯಪ್, ‘ಭಾಗವಹಿಸಿದ್ದ ಬಹಳಷ್ಟು ಆಟಗಾರರು ಒತ್ತಡದಲ್ಲಿದ್ದರು’ ಎಂದಿದ್ದಾರೆ.</p>.<p>ವಿದೇಶಿ ಕೋಚ್ಗಳಿಗೆ ಉತ್ತರದಾಯಿತ್ವ ಇರಲಿ: ವಿಮಲ್</p>.<p>ಭಾರತದ ಬ್ಯಾಡ್ಮಿಂಟನ್ ಪಟುಗಳಿಗೆ ತರಬೇತಿ ನೀಡಲು ಬರುವ ವಿದೇಶಿ ಕೋಚ್ಗಳಿಗೆ ಉತ್ತರದಾಯಿತ್ವ ಮತ್ತು ಬದ್ಧತೆ ಇರಬೇಕು ಎಂದು ಹಿರಿಯ ಕೋಚ್ ವಿಮಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಈಚೆಗೆ ಡಬಲ್ಸ್ ಕೋಚ್, ಇಂಡೊನೇಷ್ಯಾದ ಫ್ಲೆಂಡಿ ಲಿಂಪೆಲ್ ಅವರು ತಮ್ಮ ಒಪ್ಪಂದ ಮುಗಿಯುವ ಮುನ್ನವೇ ಕೆಲಸ ಬಿಟ್ಟು ಹೋಗಿದ್ದರು.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ವಿಮಲ್, ‘ಇದು ಒಲಿಂಪಿಕ್ ಕೂಟ ನಡೆಯುವ ವರ್ಷ. ಆಟಗಾರರ ಜೀವಮಾನದ ಶ್ರಮ ಈ ದಿನಕ್ಕಾಗಿಯೇ ವಿನಿಯೋಗವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತಂಡವನ್ನು ಬಿಟ್ಟು ನಿರ್ಗಮಿಸುವುದು ವೃತ್ತಿಪರತೆ ಅಲ್ಲ. ಫ್ಲೆಂಡಿ ನಡವಳಿಕೆಯಿಂದ ಬೇಸರವಾಗಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಆಯೋಜನೆಯ ಹಿಂದೆ ದುಡ್ಡಿನ ಕಾಳಜಿ ಇತ್ತು. ಆಟಗಾರರ ಹಿತಾಸಕ್ತಿಯನ್ನು ಕಡೆಗಣಿಸಲಾಗಿತ್ತು ಎಂದು ಭಾರತದ ಆಟಗಾರ್ತಿ ಸೈನಾ ನೆಹ್ವಾಲ್ ಕಿಡಿಕಾರಿದ್ದಾರೆ.</p>.<p>ಕೊರೊನಾ ವೈರಸ್ ಸೋಂಕಿನ ಭೀತಿ ಇದ್ದರೂ ಟೂರ್ನಿಯನ್ನು ನಡೆಸಿದ್ದರ ಬಗ್ಗೆ ಅವರು ಆಕ್ಷೇಪ ಎತ್ತಿದ್ದಾರೆ.</p>.<p>‘ಟೂರ್ನಿಯನ್ನು ಆಯೋಜಿಸಲು ಯಾವ ಅನಿವಾರ್ಯತೆಯೂ ಇರಲಿಲ್ಲ. ಹಣ ವ್ಯರ್ಥವಾಗದಂತೆ ನೋಡಿಕೊಳ್ಳಲು ಮತ್ತು ಗಳಿಸಲು ಮಾತ್ರ ಟೂರ್ನಿ ನಡೆಸಲಾಯಿತು. ಆದರೆ, ಆಟಗಾರರ ಜೀವದ ಬಗ್ಗೆ ಯೋಚಿಸಿದ್ದರೆ ಟೂರ್ನಿಯನ್ನು ರದ್ದು ಮಾಡುತ್ತಿದ್ದರು’ ಎಂದು ಸೈನಾ ಟ್ವೀಟ್ ಮಾಡಿದ್ದಾರೆ.</p>.<p>ಈ ಟೂರ್ನಿಯಲ್ಲಿ ಭಾಗವಹಿಸಿದ್ದ ಭಾರತದ ಆಟಗಾರ ಮತ್ತು ಸೈನಾ ಅವರ ಪತಿ ಪರುಪಳ್ಳಿ ಕಶ್ಯಪ್, ‘ಭಾಗವಹಿಸಿದ್ದ ಬಹಳಷ್ಟು ಆಟಗಾರರು ಒತ್ತಡದಲ್ಲಿದ್ದರು’ ಎಂದಿದ್ದಾರೆ.</p>.<p>ವಿದೇಶಿ ಕೋಚ್ಗಳಿಗೆ ಉತ್ತರದಾಯಿತ್ವ ಇರಲಿ: ವಿಮಲ್</p>.<p>ಭಾರತದ ಬ್ಯಾಡ್ಮಿಂಟನ್ ಪಟುಗಳಿಗೆ ತರಬೇತಿ ನೀಡಲು ಬರುವ ವಿದೇಶಿ ಕೋಚ್ಗಳಿಗೆ ಉತ್ತರದಾಯಿತ್ವ ಮತ್ತು ಬದ್ಧತೆ ಇರಬೇಕು ಎಂದು ಹಿರಿಯ ಕೋಚ್ ವಿಮಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಈಚೆಗೆ ಡಬಲ್ಸ್ ಕೋಚ್, ಇಂಡೊನೇಷ್ಯಾದ ಫ್ಲೆಂಡಿ ಲಿಂಪೆಲ್ ಅವರು ತಮ್ಮ ಒಪ್ಪಂದ ಮುಗಿಯುವ ಮುನ್ನವೇ ಕೆಲಸ ಬಿಟ್ಟು ಹೋಗಿದ್ದರು.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ವಿಮಲ್, ‘ಇದು ಒಲಿಂಪಿಕ್ ಕೂಟ ನಡೆಯುವ ವರ್ಷ. ಆಟಗಾರರ ಜೀವಮಾನದ ಶ್ರಮ ಈ ದಿನಕ್ಕಾಗಿಯೇ ವಿನಿಯೋಗವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತಂಡವನ್ನು ಬಿಟ್ಟು ನಿರ್ಗಮಿಸುವುದು ವೃತ್ತಿಪರತೆ ಅಲ್ಲ. ಫ್ಲೆಂಡಿ ನಡವಳಿಕೆಯಿಂದ ಬೇಸರವಾಗಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>