ಕೆಂಗುಂಟೆಯಲ್ಲಿ ಕ್ರೀಡಾಕೂಟ ಸಂಭ್ರಮ

ರಾಜರಾಜೇಶ್ವರಿನಗರ: ಮಲ್ಲತ್ತಹಳ್ಳಿ ಸಮೀಪದ ಕೆಂಗುಂಟೆ ಕನ್ಯಾಕುಮಾರಿ ಶಾಲಾ ಮೈದಾನದಲ್ಲಿ ಎಲ್ಲ ವಯಸ್ಸಿನವರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಪುರುಷರ ವಿಭಾಗದಲ್ಲಿ ಥ್ರೋ ಬಾಲ್, ಮ್ಯೂಸಿಕಲ್ ಚೇರ್, ಶಾಟ್ಪಟ್, ಗೋಣಿಚೀಲದ ಓಟ, ಬಕೆಟ್ಗೆ ಬಾಲ್ ಹಾಕುವುದು, ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಶಾಟ್ಪಟ್, ಲೆಮನ್ ಅಂಡ್ ಸ್ಪೂನ್, ಕೆರೆ ದಡ, ಮ್ಯೂಸಿಕಲ್ ಚೇರ್ ಹಮ್ಮಿಕೊಳ್ಳಲಾಗಿತ್ತು. ಕಿರಿಯ, ಹಿರಿಯ ಸೇರಿ 560, ವಿವಿಧ ಶಾಲಾ-ಕಾಲೇಜುಗಳ 210 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್ನ ಕಾಂಗ್ರೆಸ್ ಅಧ್ಯಕ್ಷ ಡಾ.ಎಚ್. ತುಕಾರಾಂ ಬಹುಮಾನ ವಿತರಿಸಿದರು.
ಕನ್ಯಾಕುಮಾರಿ ಶಾಲೆಯ ಮುಖ್ಯಸ್ಥರಾದ ಸಿ.ಪಿ.ಸುವರ್ಣ ತುಕಾರಾಂ, ಕಾಂಗ್ರೆಸ್ ನಾಯಕಿ ಕಾವ್ಯಾ ರಘುಗೌಡ, ಕಾರ್ಮಿಕ ವಿಭಾಗದ ಅಧ್ಯಕ್ಷ ಕೆಂಪರಾಜು, ಪರಿಶಿಷ್ಟ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಪರುಶುರಾಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲಿತಾ ರುದ್ರಸ್ವಾಮಿ, ಮುಖಂಡರಾದ ಭದ್ರೇಗೌಡ, ಪುಟ್ಟಮ್ಮ, ರಾಮಮೂರ್ತಿ, ಸುಹಾಸ್, ನಿರಂಜನ, ಸುಮ, ಗೀತಾಂಜಲಿ, ಚಂದ್ರಿಕಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.