ರಾಷ್ಟ್ರದಾದ್ಯಂತ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಈಗ ರದ್ದು ಮಾಡಲಾಗಿದೆ. ಆದರೆ ಟೋಕಿಯೊದಲ್ಲಿ ಕೋವಿಡ್ ಬಾಧಿತರು ಪತ್ತೆಯಾಗುತ್ತಿರುವುದು ಆತಂಕ ತಂದೊಡ್ಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಯೋಜನೆ ಜಾರಿಗೊಳಿಸುವುದಕ್ಕೂ ಮೊದಲು ಕ್ರೀಡಾಕೂಟ ನಡೆಯಲಿದೆಯೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಆಯೋಜಕ ಸಮಿತಿಯ ಸದಸ್ಯ ತೊಷಿಯಾಕಿ ಎಂಡೊ ಶುಕ್ರವಾರ ಹೇಳಿದ್ದಾರೆ.