‘ಜೀವನದ ಕಷ್ಟದ ಪರಿಸ್ಥಿತಿಗಳ ನಡುವೆಯೂ ಹೋರಾಟದ ಮನೋಭಾವ ಉಳಿಸಿಕೊಂಡಿದ್ದೀರಿ. ನಿಮ್ಮ ಪರಿಶ್ರಮ ಮತ್ತು ಶಕ್ತಿಯ ಕಾರಣದಿಂದ ಈ ಹಂತ ತಲುಪಿದ್ದೀರಿ. ಬಹುದೊಡ್ಡ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟಿದ್ದೀರಿ. ನೀವೆಲ್ಲರೂ ಜಯಶಾಲಿಗಳು. ಒತ್ತಡಕ್ಕೆ ಒಳಗಾಗಬೇಡಿ. ನಿಮಗೆ ಸಾಧ್ಯವಾದಷ್ಟು ಉತ್ತಮ ಸಾಮರ್ಥ್ಯ ತೋರುತ್ತೀರಿ ಎಂಬ ವಿಶ್ವಾಸವಿದ್ದು, ಪದಕಗಳು ಒಲಿಯಲಿವೆ’ ಎಂದು ಮೋದಿ ನುಡಿದರು.