<p><strong>ಬೆಂಗಳೂರು</strong>: ಅಮೋಘ ಆಟವಾಡಿದ ಅರ್ಜುನ್ ಮಣಿಕಂಠನ್ ಕೆಎಸ್ಎಲ್ಟಿಎ–ಎಐಟಿಎ 12 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಮಂಗಳವಾರ ನಡೆದ ಬಾಲಕರ ವಿಭಾಗದ ಎಂಟರಘಟ್ಟದ ಹಣಾಹಣಿಯಲ್ಲಿ ಅವರು 8-2ರಿಂದ ಆರುಷ್ ಮಾಳನ್ನವರ ಸವಾಲು ಮೀರಿದರು.</p>.<p>16ರ ಘಟ್ಟದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ ರುಹಾನ್ ಕೊಮಂದೂರ್ ಅವರಿಗೆ ಸೋಲುಣಿಸಿದ್ದ ಆರುಷ್ಗೆ ಕ್ವಾರ್ಟರ್ಫೈನಲ್ನಲ್ಲಿ ಅದೇ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ.</p>.<p>ಬಾಲಕಿಯರ ವಿಭಾಗದ ಪ್ರೀಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ರೀತ್ ಜಾವರ್ 8–3ರಿಂದ ಎರಡನೇ ಶ್ರೇಯಾಂಕದ ತೀರ್ಥಾ ಎ.ಎನ್. ಅವರನ್ನು ಮಣಿಸಿದ್ದರು. ಆದರೆ ರೀತ್ ಎಂಟರಘಟ್ಟದಲ್ಲಿ ತಮಿಳುನಾಡಿನ ಸನ್ಮಿತಾ ಹರಿಣಿ ಎದುರು 2–8ರಿಂದ ಎಡವಿದರು.</p>.<p>ಬಾಲಕರ ವಿಭಾಗದ ಇನ್ನುಳಿದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಕೀರ್ತನ್ ವಿಶ್ವಾಸ್ 8–4ರಿಂದ ಅನಿರುದ್ಧ ಪಳನಿಸ್ವಾಮಿ ಎದುರು, ಯಶಸ್ ರಾಜ್ 8–1ರಿಂದ ಮೊಹಮ್ಮದ್ ಅರ್ಹಾನ್ ವಿರುದ್ಧ ಜಯ ಸಾಧಿಸಿದರು. ಮಹೇಶ ಬಿಲ್ಲಾಪುರಿಯಾ 5–8ರಿಂದ ತಮಿಳುನಾಡಿನ ರಾಜೇಶ್ ಕಣ್ಣನ್ ಎದುರು ಸೋತರು.</p>.<p>ಬಾಲಕಿಯರ ವಿಭಾಗದ ಇನ್ನುಳಿದ ಪ್ರೀಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಅಹಿದಾ ಸಿಂಗ್ 8–4ರಿಂದ ಮಾನ್ವಿತಾ ರಾಜೇಂದ್ರ ಎದುರು, ರಿತೇಶಾ ಚೌಧರಿ 8–3ರಿಂದ ಅನ್ವೇಶಾ ಧರ್ ವಿರುದ್ಧ, ವಸುಂಧರಾ ಬಾಲಾಜಿ 8–6ರಿಂದ ದಿಶಾ ಕುಮಾರ್ ಎದುರು ಜಯ ಸಾಧಿಸಿದರು.</p>.<p>ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಬುಧವಾರ ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅಮೋಘ ಆಟವಾಡಿದ ಅರ್ಜುನ್ ಮಣಿಕಂಠನ್ ಕೆಎಸ್ಎಲ್ಟಿಎ–ಎಐಟಿಎ 12 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಮಂಗಳವಾರ ನಡೆದ ಬಾಲಕರ ವಿಭಾಗದ ಎಂಟರಘಟ್ಟದ ಹಣಾಹಣಿಯಲ್ಲಿ ಅವರು 8-2ರಿಂದ ಆರುಷ್ ಮಾಳನ್ನವರ ಸವಾಲು ಮೀರಿದರು.</p>.<p>16ರ ಘಟ್ಟದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ ರುಹಾನ್ ಕೊಮಂದೂರ್ ಅವರಿಗೆ ಸೋಲುಣಿಸಿದ್ದ ಆರುಷ್ಗೆ ಕ್ವಾರ್ಟರ್ಫೈನಲ್ನಲ್ಲಿ ಅದೇ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ.</p>.<p>ಬಾಲಕಿಯರ ವಿಭಾಗದ ಪ್ರೀಕ್ವಾರ್ಟರ್ಫೈನಲ್ ಹಣಾಹಣಿಯಲ್ಲಿ ರೀತ್ ಜಾವರ್ 8–3ರಿಂದ ಎರಡನೇ ಶ್ರೇಯಾಂಕದ ತೀರ್ಥಾ ಎ.ಎನ್. ಅವರನ್ನು ಮಣಿಸಿದ್ದರು. ಆದರೆ ರೀತ್ ಎಂಟರಘಟ್ಟದಲ್ಲಿ ತಮಿಳುನಾಡಿನ ಸನ್ಮಿತಾ ಹರಿಣಿ ಎದುರು 2–8ರಿಂದ ಎಡವಿದರು.</p>.<p>ಬಾಲಕರ ವಿಭಾಗದ ಇನ್ನುಳಿದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಕೀರ್ತನ್ ವಿಶ್ವಾಸ್ 8–4ರಿಂದ ಅನಿರುದ್ಧ ಪಳನಿಸ್ವಾಮಿ ಎದುರು, ಯಶಸ್ ರಾಜ್ 8–1ರಿಂದ ಮೊಹಮ್ಮದ್ ಅರ್ಹಾನ್ ವಿರುದ್ಧ ಜಯ ಸಾಧಿಸಿದರು. ಮಹೇಶ ಬಿಲ್ಲಾಪುರಿಯಾ 5–8ರಿಂದ ತಮಿಳುನಾಡಿನ ರಾಜೇಶ್ ಕಣ್ಣನ್ ಎದುರು ಸೋತರು.</p>.<p>ಬಾಲಕಿಯರ ವಿಭಾಗದ ಇನ್ನುಳಿದ ಪ್ರೀಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಅಹಿದಾ ಸಿಂಗ್ 8–4ರಿಂದ ಮಾನ್ವಿತಾ ರಾಜೇಂದ್ರ ಎದುರು, ರಿತೇಶಾ ಚೌಧರಿ 8–3ರಿಂದ ಅನ್ವೇಶಾ ಧರ್ ವಿರುದ್ಧ, ವಸುಂಧರಾ ಬಾಲಾಜಿ 8–6ರಿಂದ ದಿಶಾ ಕುಮಾರ್ ಎದುರು ಜಯ ಸಾಧಿಸಿದರು.</p>.<p>ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಬುಧವಾರ ನಡೆಯಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>