ಬೆಂಗಳೂರು: ಕರ್ನಾಟಕದ ಅನೂಪ್ ಕೇಶವಮೂರ್ತಿ ಎಐಟಿಎ ಚಾಂಪಿಯನ್ಷಿಪ್ ಸಿರೀಸ್ ಟೆನಿಸ್ ಟೂರ್ನಿಯ (14 ವರ್ಷದೊಳಗಿನವರು) ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅನೂಪ್, ಮಹಾರಾಷ್ಟ್ರದ ಜಶ್ ಆಶಿಶ್ ಶಾ ಅವರನ್ನು 6–2, 6–3 ಸೆಟ್ಗಳಿಂದ ಮಣಿಸಿದರು. 70 ನಿಮಿಷಗಳಲ್ಲಿ ಹಣಾಹಣಿ ಮುಕ್ತಾಯವಾಯಿತು.