ಅಹಮದಾಬಾದ್: 'ದಯವಿಟ್ಟು ಇನ್ನೂ ಟಿಕೆಟ್ ಕೇಳಬೇಡಿ' - ಭಾರತ ಮತ್ತು ಪಾಕಿಸ್ತಾನ ನಡುವೆ ಏಕದಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರ ಸೂರ್ಯಕುಮಾರ್ ಕುಮಾರ್ ಬೇಡಿಕೊಂಡಿದ್ದು ಹೀಗೆ...
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ಇಂದು ಮಧ್ಯಾಹ್ನ ನಡೆಯಲಿದೆ.
ಸಹಜವಾಗಿಯೇ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದ್ದು, ಟಿಕೆಟ್ ಬೇಡಿಕೆಯೂ ಹೆಚ್ಚಿದೆ. ಅಧಿಕೃತ ಮೂಲಗಳ ಪ್ರಕಾರ ಟಿಕೆಟ್ ಎಲ್ಲವೂ ಸೋಲ್ಡ್ ಔಟ್ ಆಗಿದೆ.
ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಟಿಕೆಟ್ಗಾಗಿ ಆಟಗಾರರನ್ನು ಬೇಡಿಕೊಳ್ಳುವಂತಾಗಿದೆ. ಇದರಿಂದಾಗಿ ಬೇಸತ್ತಿರುವ ಸೂರ್ಯಕುಮಾರ್, ಕೊನೆಗೆ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ದಯವಿಟ್ಟು ಇನ್ನೂ ಟಿಕೆಟ್ ಕೇಳಬೇಡಿ ಎಂದು ವಿನಂತಿಸಿದ್ದಾರೆ.
ಎಲ್ಲರ ಮನೆಯಲ್ಲೂ ಒಳ್ಳೆ ಒಳ್ಳೆಯ ಟಿ.ವಿಗಳಿವೆ. ಮನೆಯಲ್ಲೇ ಎಸಿ ರೂಮ್ನಲ್ಲೇ ಕುಳಿತುಕೊಂಡು ಪಂದ್ಯ ಆನಂದಿಸುವಂತೆ ಸಲಹೆ ನೀಡಿದ್ದಾರೆ.