<p><strong>ಬೆಂಗಳೂರು:</strong> ಆರಂಭಿಕ ಬ್ಯಾಟ್ಸ್ಮನ್ ಭರತ್ ಚಿಪ್ಲಿ ಮಾರ್ಚ್ 23ರಿಂದ 27ರವರೆಗೆ ಮುಂಬೈನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.</p>.<p>ಚಿಪ್ಲಿ ಇತ್ತೀಚೆಗೆ ನಡೆದ ವಿಜಯ ಹಜಾರೆ ಟ್ರೋಫಿ ಅಖಿಲ ಭಾರತ ಏಕದಿನ ಟೂರ್ನಿಯಲ್ಲಿ ಆಡಿದ ತಂಡದಲ್ಲಿ ಇರಲಿಲ್ಲ. ನಾಯಕ ರಾಬಿನ್ ಉತ್ತಪ್ಪ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಟೂರ್ನಿಗೆ ಮಂಗಳವಾರ ಜೆ.ಅಭಿರಾಮ್ ಸಾರಥ್ಯದ ರಾಜ್ಯ ಆಯ್ಕೆ ಸಮಿತಿಯು 15 ಆಟಗಾರರ ತಂಡ ಪ್ರಕಟಿಸಿತು.</p>.<p>ತಂಡದಲ್ಲಿ ಆಲ್ರೌಂಡರ್ಗಳಿಗೆ ಮಹತ್ವ ನೀಡಲಾಗಿದೆ. ಅನಿರುದ್ಧ ಜೋಶಿ, ಕೆ.ಗೌತಮ್, ಅಬ್ರಾರ್ ಕಾಜಿ, ರಾಜೂ ಭಟ್ಕಳ್ ಹಾಗೂ ಸುನಿಲ್ ರಾಜು ತಂಡದಲ್ಲಿರುವ ಪ್ರಮುಖ ಆಲ್ರೌಂಡರ್ಗಳು. ಎನ್.ಸಿ.ಅಯ್ಯಪ್ಪ, ಅಭಿಮನ್ಯು ಮಿಥುನ್ ಹಾಗೂ ರೋನಿತ್ ಮೋರೆ ತಂಡದಲ್ಲಿರುವ ವೇಗದ ಬೌಲರ್ಗಳು.</p>.<p><strong>ತಂಡ ಇಂತಿದೆ:</strong> ರಾಬಿನ್ ಉತ್ತಪ್ಪ (ನಾಯಕ-ವಿಕೆಟ್ ಕೀಪರ್), ಭರತ್ ಚಿಪ್ಲಿ, ಮಾಯಂಕ್ ಅಗರ್ವಾಲ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಸ್ಟುವರ್ಟ್ ಬಿನ್ನಿ (ಉಪನಾಯಕ), ಸುನಿಲ್ ರಾಜು, ಅಭಿಮನ್ಯು ಮಿಥುನ್, ರಾಜೂ ಭಟ್ಕಳ್, ರೋನಿತ್ ಮೋರೆ, ಕೆ.ಪಿ.ಅಪ್ಪಣ್ಣ, ಎನ್.ಸಿ.ಅಯ್ಯಪ್ಪ, ಅಬ್ರಾರ್ ಕಾಜಿ, ಅನಿರುದ್ಧ ಜೋಶಿ ಹಾಗೂ ಕೆ.ಗೌತಮ್. ಕೋಚ್: ಕೆ.ಜೆಸ್ವಂತ್, ಮ್ಯಾನೇಜರ್: ಆರ್.ಸುಧಾಕರ್ ರಾವ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆರಂಭಿಕ ಬ್ಯಾಟ್ಸ್ಮನ್ ಭರತ್ ಚಿಪ್ಲಿ ಮಾರ್ಚ್ 23ರಿಂದ 27ರವರೆಗೆ ಮುಂಬೈನಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.</p>.<p>ಚಿಪ್ಲಿ ಇತ್ತೀಚೆಗೆ ನಡೆದ ವಿಜಯ ಹಜಾರೆ ಟ್ರೋಫಿ ಅಖಿಲ ಭಾರತ ಏಕದಿನ ಟೂರ್ನಿಯಲ್ಲಿ ಆಡಿದ ತಂಡದಲ್ಲಿ ಇರಲಿಲ್ಲ. ನಾಯಕ ರಾಬಿನ್ ಉತ್ತಪ್ಪ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಟೂರ್ನಿಗೆ ಮಂಗಳವಾರ ಜೆ.ಅಭಿರಾಮ್ ಸಾರಥ್ಯದ ರಾಜ್ಯ ಆಯ್ಕೆ ಸಮಿತಿಯು 15 ಆಟಗಾರರ ತಂಡ ಪ್ರಕಟಿಸಿತು.</p>.<p>ತಂಡದಲ್ಲಿ ಆಲ್ರೌಂಡರ್ಗಳಿಗೆ ಮಹತ್ವ ನೀಡಲಾಗಿದೆ. ಅನಿರುದ್ಧ ಜೋಶಿ, ಕೆ.ಗೌತಮ್, ಅಬ್ರಾರ್ ಕಾಜಿ, ರಾಜೂ ಭಟ್ಕಳ್ ಹಾಗೂ ಸುನಿಲ್ ರಾಜು ತಂಡದಲ್ಲಿರುವ ಪ್ರಮುಖ ಆಲ್ರೌಂಡರ್ಗಳು. ಎನ್.ಸಿ.ಅಯ್ಯಪ್ಪ, ಅಭಿಮನ್ಯು ಮಿಥುನ್ ಹಾಗೂ ರೋನಿತ್ ಮೋರೆ ತಂಡದಲ್ಲಿರುವ ವೇಗದ ಬೌಲರ್ಗಳು.</p>.<p><strong>ತಂಡ ಇಂತಿದೆ:</strong> ರಾಬಿನ್ ಉತ್ತಪ್ಪ (ನಾಯಕ-ವಿಕೆಟ್ ಕೀಪರ್), ಭರತ್ ಚಿಪ್ಲಿ, ಮಾಯಂಕ್ ಅಗರ್ವಾಲ್, ಗಣೇಶ್ ಸತೀಶ್, ಮನೀಷ್ ಪಾಂಡೆ, ಸ್ಟುವರ್ಟ್ ಬಿನ್ನಿ (ಉಪನಾಯಕ), ಸುನಿಲ್ ರಾಜು, ಅಭಿಮನ್ಯು ಮಿಥುನ್, ರಾಜೂ ಭಟ್ಕಳ್, ರೋನಿತ್ ಮೋರೆ, ಕೆ.ಪಿ.ಅಪ್ಪಣ್ಣ, ಎನ್.ಸಿ.ಅಯ್ಯಪ್ಪ, ಅಬ್ರಾರ್ ಕಾಜಿ, ಅನಿರುದ್ಧ ಜೋಶಿ ಹಾಗೂ ಕೆ.ಗೌತಮ್. ಕೋಚ್: ಕೆ.ಜೆಸ್ವಂತ್, ಮ್ಯಾನೇಜರ್: ಆರ್.ಸುಧಾಕರ್ ರಾವ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>