<p><strong>ಬೆಂಗಳೂರು:</strong>ಕಬ್ಬನ್ ಉದ್ಯಾನದಲ್ಲಿರುವ ಹಳೆ ಬಾವಿಗಳನ್ನು ಪುನಶ್ಚೇತನಗೊಳಿಸಿ ಯಶಸ್ಸು ಕಂಡಿರುವ ತೋಟಗಾರಿಕೆ ಇಲಾಖೆ ಈ ಬಾವಿಗಳ ನೀರಿನ ಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ 65 ಕಡೆ ಇಂಗುಬಾವಿಗಳನ್ನು ನಿರ್ಮಿಸುತ್ತಿದೆ.</p>.<p>ನಿರುಪಯುಕ್ತವಾಗಿದ್ದ ಏಳು ಬಾವಿಗಳನ್ನು ಇಲಾಖೆಎರಡು ವರ್ಷಗಳ ಹಿಂದೆ ಪುನಶ್ಚೇತನಗೊಳಿಸಿತ್ತು. ಈ ಬಾರಿ ಉದ್ಯಾನದಲ್ಲಿ ಅಲ್ಲಲ್ಲಿ 13ರಿಂದ 16 ಅಡಿಗಳಷ್ಟು ಆಳದ ಇಂಗುಬಾವಿಗಳನ್ನು ನಿರ್ಮಿಸಲಾಗುತ್ತದೆ.</p>.<p>ಬಾವಿಗಳಿಗೆ ನೀರುಪೊಟರೆಗಳ (ಅಕ್ವಿಫರ್) ಮೂಲಕವೂ ನೀರು ಪೂರೈಕೆಯಾಗುತ್ತದೆ. ಇಂಗು ಬಾವಿಗಳು ಮಳೆ ನೀರನ್ನು ಭೂಮಿಯೊಳಗೆ ಇಳಿಸುವ ಮೂಲಕ ನೀರುಪೊಟರೆಗಳ ಒರತೆಯನ್ನು ಹೆಚ್ಚಿಸುತ್ತವೆ. ಪರೋಕ್ಷವಾಗಿ ಇವು ಬಾವಿಗಳ ನೀರಿನ ಪ್ರಮಾಣ ಹೆಚ್ಚಲು ನೆರವಾಗಲಿವೆ.</p>.<p>ಇಂಡಿಯಾ ಕೇರ್ಸ್ ಫೌಂಡೇಷನ್ ವತಿಯಿಂದ ನೀರಿನ ಸುಸ್ಥಿರತೆಗಾಗಿ ಮತ್ತು ಜಲಭದ್ರತೆಗಾಗಿ ನಗರದಲ್ಲಿ ಹಮ್ಮಿಕೊಂಡಿರುವ ‘ಮಿಲಿಯನ್ ವೆಲ್ಸ್’ ಅಭಿಯಾನದಡಿ ಈ ಕಾರ್ಯಕ್ಕೆ ನೆರವು ಒದಗಿಸಲಾಗುತ್ತಿದೆ.</p>.<p>‘ಉದ್ಯಾನದಲ್ಲಿ ನೀರಿನ ನಿರ್ವಹಣೆ ವ್ಯವಸ್ಥೆ ಸಮರ್ಪಕವಾಗಿಲ್ಲ. ತೋಟಗಾರಿಕೆ ಇಲಾಖೆಯು ಉದ್ಯಾನದ ಮರಗಳಿಗೆ ನೀರುಣಿಸಲುಶುದ್ಧೀಕರಣಗೊಂಡ ನೀರನ್ನು ಬಳಸುತ್ತಿದೆ. ದಿನವೊಂದಕ್ಕೆ 1.5 ಎಂಎಲ್ಡಿಯಷ್ಟು ನೀರು ಪೂರೈಸಿದರೂ ಉದ್ಯಾನಕ್ಕೆ ಸಾಲುತ್ತಿಲ್ಲ. ಈ ಕೊರತೆ ನೀಗಿಸಲು ಇಂಗು ಬಾವಿಗಳನ್ನು ನಿರ್ಮಿಸುವ ಅಗತ್ಯವಿದೆ’ ಎಂದು ಈ ಅಭಿಯಾನದ ಭಾಗವಾಗಿರುವ ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ನ ಮುಖ್ಯಸ್ಥೆ ಶುಭಾ ರಾಮಚಂದ್ರನ್ ಹೇಳಿದರು.</p>.<p>ಫ್ರೆಂಡ್ಸ್ ಆಫ್ ಲೇಕ್ಸ್ ಸಂಸ್ಥೆಯ ಸಹಯೋಗದಲ್ಲಿ ಬಯೋಮ್ ಟ್ರಸ್ಟ್ ನಗರದ ಬಾವಿಗಳ ಪುನರುಜ್ಜೀವನಕ್ಕೆ ಶ್ರಮಿಸುತ್ತಿದೆ.</p>.<p>‘ಈ ಇಂಗು ಬಾವಿಗಳು ಭವಿಷ್ಯದಲ್ಲಿ ದಿನವೊಂದಕ್ಕೆ ಸರಾಸರಿ 80,000 ಲೀಟರ್ ನೀರು ಸಂಗ್ರಹಿಸಲಿವೆ. ಉದ್ಯಾನದ ನೀರಿನ ಬೇಡಿಕೆಯನ್ನು ಈಡೇರಿಸಲಿವೆ’ ಎಂದು ಜಲತಜ್ಞರೊಬ್ಬರು ಅಭಿಪ್ರಾಯಪಟ್ಟರು.</p>.<p class="Subhead">ಕೊಳಗಳ ಅಭಿವೃದ್ಧಿ: ಕರಗದ ಕುಂಟೆ, ತಾವರೆ ಕೊಳ ಹಾಗೂ ಒಡೆಯರ್ ಪ್ರತಿಮೆ ಹಿಂಭಾಗದ ಕೊಳಗಳು ಕಬ್ಬನ್ ಉದ್ಯಾನದಲ್ಲಿವೆ. ಈ ಮೂರು ಕೊಳಗಳ ಹೂಳು ತೆಗೆದು ಅಭಿವೃದ್ಧಿಪಡಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಉದ್ಯಾನದಲ್ಲಿ ಹೊಸದಾಗಿ ನಿರ್ಮಿಸಿರುವ ನಡಿಗೆ ಪಥಗಳು ಮಳೆ ನೀರಿನ ಹರಿವಿಗೆ ಅಡ್ಡಿಯಾಗಿವೆ. ಹಾಗಾಗಿ ಅವುಗಳ ವಿನ್ಯಾಸವನ್ನು ಬದಲಿಸಲು ಇಲಾಖೆ ನಿರ್ಧರಿಸಿದೆ.</p>.<p class="Subhead">**</p>.<p><strong>ಲಾಲ್ಬಾಗ್ನಲ್ಲೂ ಮಳೆಗಾಲಕ್ಕೆ ತಯಾರಿ</strong></p>.<p>ಮಳೆಗಾಲದಲ್ಲಿ ಜಯನಗರ ಹಾಗೂ ಅಶೋಕ ಪಿಲ್ಲರ್ ಕಡೆಯಿಂದ ನೀರು ಲಾಲ್ಬಾಗ್ ಕೆರೆಗೆ ಹರಿದು ಬರುತ್ತದೆ. ಈ ಮಳೆನೀರಿನ ಜೊತೆ ಬರುವ ಕಸ ಕಶ್ಮಲಗಳನ್ನು ಸೋಸುವುದಕ್ಕೆ ‘ಪರದೆ ಶೋಧಕ’ ಅಳವಡಿಸಲು ತೋಟಗಾರಿಕಾ ಇಲಾಖೆ ತಯಾರಿ ನಡೆಸಿದೆ.</p>.<p>ಪರದೆ ಶೋಧಕವು ನೀರನ್ನು ಮಾತ್ರ ಒಳಬಿಟ್ಟು, ತ್ಯಾಜ್ಯವನ್ನು ತಡೆಯುತ್ತದೆ. ಉದ್ಯಾನದ ಸಿಬ್ಬಂದಿ ತ್ಯಾಜ್ಯವನ್ನು ತೆರವುಗೊಳಿಸಲಿದ್ದಾರೆ.</p>.<p>ಮಳೆ ನೀರಿಗಾಗಿ ಕಾಲುವೆ:ಮಳೆ ಬಂದಾಗ ನೀರು ಎಲ್ಲೆಂದರಲ್ಲಿ ಹರಿದು ಹೋಗಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಪ್ರತ್ಯೇಕ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ. ಆ ನೀರನ್ನೇ ಸಂಗ್ರಹಿಸಿ ತೋಟದ ಗಿಡ–ಮರಗಳಿಗೆ ಉಣಿಸಲು ಬಳಸಿಕೊಳ್ಳಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಕಬ್ಬನ್ ಉದ್ಯಾನದಲ್ಲಿರುವ ಹಳೆ ಬಾವಿಗಳನ್ನು ಪುನಶ್ಚೇತನಗೊಳಿಸಿ ಯಶಸ್ಸು ಕಂಡಿರುವ ತೋಟಗಾರಿಕೆ ಇಲಾಖೆ ಈ ಬಾವಿಗಳ ನೀರಿನ ಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ 65 ಕಡೆ ಇಂಗುಬಾವಿಗಳನ್ನು ನಿರ್ಮಿಸುತ್ತಿದೆ.</p>.<p>ನಿರುಪಯುಕ್ತವಾಗಿದ್ದ ಏಳು ಬಾವಿಗಳನ್ನು ಇಲಾಖೆಎರಡು ವರ್ಷಗಳ ಹಿಂದೆ ಪುನಶ್ಚೇತನಗೊಳಿಸಿತ್ತು. ಈ ಬಾರಿ ಉದ್ಯಾನದಲ್ಲಿ ಅಲ್ಲಲ್ಲಿ 13ರಿಂದ 16 ಅಡಿಗಳಷ್ಟು ಆಳದ ಇಂಗುಬಾವಿಗಳನ್ನು ನಿರ್ಮಿಸಲಾಗುತ್ತದೆ.</p>.<p>ಬಾವಿಗಳಿಗೆ ನೀರುಪೊಟರೆಗಳ (ಅಕ್ವಿಫರ್) ಮೂಲಕವೂ ನೀರು ಪೂರೈಕೆಯಾಗುತ್ತದೆ. ಇಂಗು ಬಾವಿಗಳು ಮಳೆ ನೀರನ್ನು ಭೂಮಿಯೊಳಗೆ ಇಳಿಸುವ ಮೂಲಕ ನೀರುಪೊಟರೆಗಳ ಒರತೆಯನ್ನು ಹೆಚ್ಚಿಸುತ್ತವೆ. ಪರೋಕ್ಷವಾಗಿ ಇವು ಬಾವಿಗಳ ನೀರಿನ ಪ್ರಮಾಣ ಹೆಚ್ಚಲು ನೆರವಾಗಲಿವೆ.</p>.<p>ಇಂಡಿಯಾ ಕೇರ್ಸ್ ಫೌಂಡೇಷನ್ ವತಿಯಿಂದ ನೀರಿನ ಸುಸ್ಥಿರತೆಗಾಗಿ ಮತ್ತು ಜಲಭದ್ರತೆಗಾಗಿ ನಗರದಲ್ಲಿ ಹಮ್ಮಿಕೊಂಡಿರುವ ‘ಮಿಲಿಯನ್ ವೆಲ್ಸ್’ ಅಭಿಯಾನದಡಿ ಈ ಕಾರ್ಯಕ್ಕೆ ನೆರವು ಒದಗಿಸಲಾಗುತ್ತಿದೆ.</p>.<p>‘ಉದ್ಯಾನದಲ್ಲಿ ನೀರಿನ ನಿರ್ವಹಣೆ ವ್ಯವಸ್ಥೆ ಸಮರ್ಪಕವಾಗಿಲ್ಲ. ತೋಟಗಾರಿಕೆ ಇಲಾಖೆಯು ಉದ್ಯಾನದ ಮರಗಳಿಗೆ ನೀರುಣಿಸಲುಶುದ್ಧೀಕರಣಗೊಂಡ ನೀರನ್ನು ಬಳಸುತ್ತಿದೆ. ದಿನವೊಂದಕ್ಕೆ 1.5 ಎಂಎಲ್ಡಿಯಷ್ಟು ನೀರು ಪೂರೈಸಿದರೂ ಉದ್ಯಾನಕ್ಕೆ ಸಾಲುತ್ತಿಲ್ಲ. ಈ ಕೊರತೆ ನೀಗಿಸಲು ಇಂಗು ಬಾವಿಗಳನ್ನು ನಿರ್ಮಿಸುವ ಅಗತ್ಯವಿದೆ’ ಎಂದು ಈ ಅಭಿಯಾನದ ಭಾಗವಾಗಿರುವ ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್ನ ಮುಖ್ಯಸ್ಥೆ ಶುಭಾ ರಾಮಚಂದ್ರನ್ ಹೇಳಿದರು.</p>.<p>ಫ್ರೆಂಡ್ಸ್ ಆಫ್ ಲೇಕ್ಸ್ ಸಂಸ್ಥೆಯ ಸಹಯೋಗದಲ್ಲಿ ಬಯೋಮ್ ಟ್ರಸ್ಟ್ ನಗರದ ಬಾವಿಗಳ ಪುನರುಜ್ಜೀವನಕ್ಕೆ ಶ್ರಮಿಸುತ್ತಿದೆ.</p>.<p>‘ಈ ಇಂಗು ಬಾವಿಗಳು ಭವಿಷ್ಯದಲ್ಲಿ ದಿನವೊಂದಕ್ಕೆ ಸರಾಸರಿ 80,000 ಲೀಟರ್ ನೀರು ಸಂಗ್ರಹಿಸಲಿವೆ. ಉದ್ಯಾನದ ನೀರಿನ ಬೇಡಿಕೆಯನ್ನು ಈಡೇರಿಸಲಿವೆ’ ಎಂದು ಜಲತಜ್ಞರೊಬ್ಬರು ಅಭಿಪ್ರಾಯಪಟ್ಟರು.</p>.<p class="Subhead">ಕೊಳಗಳ ಅಭಿವೃದ್ಧಿ: ಕರಗದ ಕುಂಟೆ, ತಾವರೆ ಕೊಳ ಹಾಗೂ ಒಡೆಯರ್ ಪ್ರತಿಮೆ ಹಿಂಭಾಗದ ಕೊಳಗಳು ಕಬ್ಬನ್ ಉದ್ಯಾನದಲ್ಲಿವೆ. ಈ ಮೂರು ಕೊಳಗಳ ಹೂಳು ತೆಗೆದು ಅಭಿವೃದ್ಧಿಪಡಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ. ಉದ್ಯಾನದಲ್ಲಿ ಹೊಸದಾಗಿ ನಿರ್ಮಿಸಿರುವ ನಡಿಗೆ ಪಥಗಳು ಮಳೆ ನೀರಿನ ಹರಿವಿಗೆ ಅಡ್ಡಿಯಾಗಿವೆ. ಹಾಗಾಗಿ ಅವುಗಳ ವಿನ್ಯಾಸವನ್ನು ಬದಲಿಸಲು ಇಲಾಖೆ ನಿರ್ಧರಿಸಿದೆ.</p>.<p class="Subhead">**</p>.<p><strong>ಲಾಲ್ಬಾಗ್ನಲ್ಲೂ ಮಳೆಗಾಲಕ್ಕೆ ತಯಾರಿ</strong></p>.<p>ಮಳೆಗಾಲದಲ್ಲಿ ಜಯನಗರ ಹಾಗೂ ಅಶೋಕ ಪಿಲ್ಲರ್ ಕಡೆಯಿಂದ ನೀರು ಲಾಲ್ಬಾಗ್ ಕೆರೆಗೆ ಹರಿದು ಬರುತ್ತದೆ. ಈ ಮಳೆನೀರಿನ ಜೊತೆ ಬರುವ ಕಸ ಕಶ್ಮಲಗಳನ್ನು ಸೋಸುವುದಕ್ಕೆ ‘ಪರದೆ ಶೋಧಕ’ ಅಳವಡಿಸಲು ತೋಟಗಾರಿಕಾ ಇಲಾಖೆ ತಯಾರಿ ನಡೆಸಿದೆ.</p>.<p>ಪರದೆ ಶೋಧಕವು ನೀರನ್ನು ಮಾತ್ರ ಒಳಬಿಟ್ಟು, ತ್ಯಾಜ್ಯವನ್ನು ತಡೆಯುತ್ತದೆ. ಉದ್ಯಾನದ ಸಿಬ್ಬಂದಿ ತ್ಯಾಜ್ಯವನ್ನು ತೆರವುಗೊಳಿಸಲಿದ್ದಾರೆ.</p>.<p>ಮಳೆ ನೀರಿಗಾಗಿ ಕಾಲುವೆ:ಮಳೆ ಬಂದಾಗ ನೀರು ಎಲ್ಲೆಂದರಲ್ಲಿ ಹರಿದು ಹೋಗಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಪ್ರತ್ಯೇಕ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ. ಆ ನೀರನ್ನೇ ಸಂಗ್ರಹಿಸಿ ತೋಟದ ಗಿಡ–ಮರಗಳಿಗೆ ಉಣಿಸಲು ಬಳಸಿಕೊಳ್ಳಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>