ಸಕಾಲ ಯೋಜನೆಯ ಪ್ರಗತಿ ಪರಿಶೀಲನೆ ವೇಳೆ ರವಿ ಕುಮಾರ್ ಅವರು 494 ಕಡತಗಳನ್ನು 2018ರಿಂದಲೂ ಬಾಕಿ ಇರಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಈ ಪೈಕಿ 477 ಕಡತಗಳು ಖಾತಾ ವರ್ಗಾವಣೆಗೆ ಸಂಬಂಧಿಸಿದವು. ಇನ್ನುಳಿದ ಒಂಬತ್ತು ಕಡತಗಳು ಖಾತಾ ನೋಂದಣಿಗೆ, ಏಳು ಕಡತಗಳು ಖಾತಾ ವಿಭಜನೆಗೆ ಹಾಗೂ ಒಂದು ಕಡತ ಖಾತಾ ಜೋಡಣೆ ಕುರಿತಾದವು. ಕಡತ ವಿಲೇವಾರಿ ಮಾಡಲು ಲಂಚ ಕೇಳುತ್ತಾರೆ ಎಂಬ ಆರೋಪ ರವಿಕುಮಾರ್ ಮೇಲಿದೆ.