ಪೊಲೀಸ್ ಹೆಡ್ ಕಾನ್ಸ್ಟೆಬಲ್ ಅನಿಲ ಮಡಿವಾಳ ಅವರು ‘ವೈರಸ್ ತಗುಲಿದರೆ ಔಷಧಿ ನಿಮಗಿಲ್ಲ, ಎಚ್ಚರಿಕೆ ಗೆಳೆಯರೇ ಎಚ್ಚರಿಕೆ’ ಎಂದು ತಾವೇ ಸಾಹಿತ್ಯ ರಚಿಸಿ ಹಾಡಿ ಗಮನಸೆಳೆದಿದ್ದಾರೆ. ಖಾಕಿಯಲ್ಲಿಯೂ ಭಾವನೆಗಳು ಮೀಡಿಯುತ್ತವೆ ಎಂದಿದ್ದಾರೆ. ಇನ್ನು ಆರೋಗ್ಯ ಇಲಾಖೆಯ ಸ್ಟಾಫ್ ನರ್ಸ್ಗಳು ಕೂಡ ಹಾಡಿಗೆ ಧ್ವನಿಯಾಗಿದ್ದಾರೆ. ‘ಹೊಂಚ ಹಾಕ್ತೈತಿ ಜೀವ ಹಿಂಡತೈತಿ, ಕೊರೊನಾ ಕೊಲ್ಲತೈತಿ, ಹೊರಗಡೆ ಬರಬೇಡ’ ಎಂದು ಹಾಡಿರುವ ನಿಂಗಪ್ಪ ಹೊಸೂರ, ಇರ್ಷಾದ್ ಪೀರಜಾದೆ ಅವರು ಕೊರೊನಾದಿಂದ ರಕ್ಷಿಸಿಕೊಳ್ಳಲು ಪಾಲಿಸಬೇಕಾದ ನಿಯಮಗಳನ್ನು ಸೊಗಸಾಗಿ ನಿರೂಪಿಸಿದ್ದಾರೆ.