<p><strong>ಬೆಂಗಳೂರು:</strong> ತುರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಎರಡು ಜಿಂಕೆಗಳು ಮೃತಪಟ್ಟ ಘಟನೆಯ ಕಹಿ ನೆನಪು ಮಾಸುವ ಮುನ್ನವೇ, ವನ್ಯಜೀವಿ ಮೇಲೆ ನಾಯಿಗಳ ದಾಳಿ ಮತ್ತೆ ಮರುಕಳಿಸಿದೆ.</p>.<p>ಬೀದಿನಾಯಿಗಳ ಗುಂಪೊಂದು ಜಿಂಕೆ ಮರಿಯೊಂದನ್ನು ಭಾನುವಾರ ಕಾಡಿನಿಂದ ನಾಡಿಗೆ ಅಟ್ಟಿಸಿಕೊಂಡು ಬಂದಿದ್ದು ಸ್ಥಳೀಯರು ಅದನ್ನು ರಕ್ಷಿಸಿದ್ದಾರೆ. ಜಿಂಕೆಮರಿಗೆ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗಿದೆ.</p>.<p>‘ಮೂರು ಬೀದಿನಾಯಿಗಳು ಸೇರಿ ಜಿಂಕೆ ಮರಿಯೊಂದನ್ನು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬನಶಂಕರಿ 6ನೇ ಹಂತದ ಸೋಂಪುರ ಪ್ರದೇಶಕ್ಕೆ ಅಟ್ಟಿಸಿಕೊಂಡು ಬಂದಿದ್ದವು. ಸ್ಥಳೀಯರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದರು. ಮೊದಲು ನಾಯಿಗಳ ಬಾಯಿಯಿಂದ ಜಿಂಕೆ ಮರಿಯನ್ನು ರಕ್ಷಿಸುವಂತೆ ಸಲಹೆ ನೀಡಿದೆ. ನಾನು ಸ್ಥಳಕ್ಕೆ ಧಾವಿಸಿದಾಗ ಜಿಂಕೆ ಮರಿ ಗಾಬರಿಗೊಂಡಿತ್ತು. ಸುಮಾರು 5 ತಿಂಗಳ ಗಂಡು ಮರಿ ಅದು. ಅದಕ್ಕೆ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಅರಣ್ಯ ರಕ್ಷಕ ಸಿಬ್ಬಂದಿ ಸಹಾಯದಿಂದ ತುರಹಳ್ಳಿ ಮೀಸಲು ಅರಣದೊಳಗೆ ಬಿಟ್ಟುಬಂದೆವು’ ಎಂದು ವೈಲ್ಡ್ಲೈಫ್ ವಾರ್ಡನ್ ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ನಗರೀಕರಣ ತಂದ ತಲೆನೋವು: ತುರಹಳ್ಳಿಯಲ್ಲಿ ಕಿರು ಮೀಸಲು ಅರಣ್ಯ ಹಾಗೂ ರಾಜ್ಯ ಮೀಸಲು ಅರಣ್ಯ ಸೇರಿ ಸುಮಾರು 1,100 ಎಕರೆಗಳಷ್ಟು ವಿಸ್ತೀರ್ಣದ ಸಂರಕ್ಷಿತ ಕಾಡು ಇದೆ. ಇಲ್ಲಿ ಸುಮಾರು 150ಕ್ಕೂ ಅಧಿಕ ಜಿಂಕೆಗಳಿವೆ. ಈ ಕಾಡಿನ ಸುತ್ತಮುತ್ತಲಿನ ಪ್ರದೇಶ ತ್ವರಿತಗತಿಯಲ್ಲಿ ನಗರೀಕರಣಗೊಳ್ಳುತ್ತಿರುವುದು ವನ್ಯಜೀವಿಗಳ ಪಾಲಿಗೆ ಆತಂಕ ತಂದೊಡ್ಡಿದೆ.</p>.<p>ಮೂರು ತಿಂಗಳಿನಿಂದೀಚೆಗೆ ಇಲ್ಲಿನ ಎರಡು ಜಿಂಕೆಗಳು ಬೀದಿನಾಯಿಗಳ ದಾಳಿಗೆ ಬಲಿಯಾಗಿವೆ. ತಿಂಗಳ ಹಿಂದೆ ಒಂದು 3 ವರ್ಷದ ಗಂಡು ಜಿಂಕೆಯನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದ್ದವು. ಆವರಣ ಗೋಡೆಯೊಂದನ್ನು ಜಿಗಿಯುವಾಗ ಆ ಜಿಂಕೆಯ ಕಾಲು ಮುರಿದಿತ್ತು. ಬಳಿಕ ಅದು ಕೊನೆಯುಸಿರೆಳೆದಿತ್ತು.</p>.<p>‘ತುರಹಳ್ಳಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗುತ್ತಿರುವುದು ನಿಜ. ಬೀದಿನಾಯಿಗಳು ಕಾಡಿನೊಳಗೆ ನುಗ್ಗದಂತೆ ತಡೆಯುವ ವಿಚಾರದಲ್ಲಿ ನಿಸ್ಸಹಾಯಕರು. ನಾಯಿಗಳನ್ನು ಸ್ಥಳಾಂತರಿಸಲು ಅವಕಾಶ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತುರಹಳ್ಳಿ ಅರಣ್ಯ ಪ್ರದೇಶವು ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ.ಹಾಗಾಗಿ ಬೀದಿನಾಯಿಗಳ ಸಮಸ್ಯೆಗೆ ಬಿಬಿಎಂಪಿಯವರೇ ಪರಿಹಾರ ಕಂಡುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<p>ಸಂರಕ್ಷಿತ ಅರಣ್ಯದ ಸೆರಗಿನಲ್ಲೇ ಬನಶಂಕರಿ 6ನೇ ಹಂತದ ಬಡಾವಣೆ ನಿರ್ಮಾಣವಾಗಿದ್ದು ಇಲ್ಲಿನ ಕಾಡುಪ್ರಾಣಿಗಳ ಪಾಲಿಕೆ ಆತಂಕ ತಂದೊಡ್ಡಿದೆ. ನೈಸ್ ರಸ್ತೆಯೂ ಸೇರಿದಂತೆ ಒಟ್ಟು ಮೂರು ರಸ್ತೆಗಳು ತುರಹಳ್ಳಿ ಅರಣ್ಯವನ್ನು ಛಿದ್ರಗೊಳಿಸಿವೆ.</p>.<p>‘ಇಲ್ಲಿನ ರಸ್ತೆಗಳಲ್ಲಿ ಸದಾ ವಾಹನ ಸಂಚಾರ ಇರುವುದರಿಂದ ಕಾಡುಪ್ರಾಣಿಗಳು ರಸ್ತೆ ದಾಟಲು ಭಯಪಡುತ್ತವೆ. ಈ ಹಿಂದೆ, ಇಲ್ಲಿನ ಕಾಡುಪ್ರಾಣಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರದೇಶ ಹಾಗೂ ಸಾವನದುರ್ಗ ಕಾಡು ಪ್ರದೇಶಗಳಿಗೆ ನಿರಾತಂಕವಾಗಿ ಓಡಾಡಲು ಅವಕಾಶ ಇತ್ತು. ಈಗ ಅವುಗಳ ಚಟುವಟಿಕೆ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರಸನ್ನ ಕುಮಾರ್.</p>.<p>‘ಕಾಡು ಪ್ರಾಣಿಗಳ ವಲಸೆಗೆ ಅವಕಾಶ ಇಲ್ಲದಿರುವುದು ಸಂತಾನೋತ್ಪಾದನಾ ಚಟುವಟಿಕೆ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದರು.</p>.<p>***</p>.<p>ಒಮ್ಮೆ ಕಾಡುಪ್ರಾಣಿಗಳ ಮಾಂಸದ ರುಚಿ ಸಿಕ್ಕರೆ ಸಾಕು ಬೀದಿನಾಯಿಗಳು ಮತ್ತೆ ಮತ್ತೆ ಅದಕ್ಕೆ ಹಾತೊರೆಯುತ್ತವೆ. ತುರಹಳ್ಳಿ ಆಸುಪಾಸಿನಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಬಿಬಿಎಂಪಿ ಕ್ರಮಕೈಗೊಳ್ಳಬೇಕು<br /><strong>–ಪ್ರಸನ್ನ ಕುಮಾರ್, ವೈಲ್ಡ್ಲೈಫ್ ವಾರ್ಡನ್</strong></p>.<p>ತುರಹಳ್ಳಿ ಸಂರಕ್ಷಿತ ಅರಣ್ಯವು ನಗರದ ಸೆರಗಿನಲ್ಲೇ ಇರುವುದರಿಂದ ವನ್ಯಜೀವಿಗಳ ಸಂರಕ್ಷಣೆ ಕಠಿಣ ಸವಾಲು. ಆದರೂ ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ<br /><strong>-ಪ್ರಾಣೇಶ ದೇಶಪಾಂಡೆ, ವಲಯ ಅರಣ್ಯ ಅಧಿಕಾರಿ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತುರಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಎರಡು ಜಿಂಕೆಗಳು ಮೃತಪಟ್ಟ ಘಟನೆಯ ಕಹಿ ನೆನಪು ಮಾಸುವ ಮುನ್ನವೇ, ವನ್ಯಜೀವಿ ಮೇಲೆ ನಾಯಿಗಳ ದಾಳಿ ಮತ್ತೆ ಮರುಕಳಿಸಿದೆ.</p>.<p>ಬೀದಿನಾಯಿಗಳ ಗುಂಪೊಂದು ಜಿಂಕೆ ಮರಿಯೊಂದನ್ನು ಭಾನುವಾರ ಕಾಡಿನಿಂದ ನಾಡಿಗೆ ಅಟ್ಟಿಸಿಕೊಂಡು ಬಂದಿದ್ದು ಸ್ಥಳೀಯರು ಅದನ್ನು ರಕ್ಷಿಸಿದ್ದಾರೆ. ಜಿಂಕೆಮರಿಗೆ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗಿದೆ.</p>.<p>‘ಮೂರು ಬೀದಿನಾಯಿಗಳು ಸೇರಿ ಜಿಂಕೆ ಮರಿಯೊಂದನ್ನು ಬೆಳಿಗ್ಗೆ 7 ಗಂಟೆ ಸುಮಾರಿಗೆ ಬನಶಂಕರಿ 6ನೇ ಹಂತದ ಸೋಂಪುರ ಪ್ರದೇಶಕ್ಕೆ ಅಟ್ಟಿಸಿಕೊಂಡು ಬಂದಿದ್ದವು. ಸ್ಥಳೀಯರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದರು. ಮೊದಲು ನಾಯಿಗಳ ಬಾಯಿಯಿಂದ ಜಿಂಕೆ ಮರಿಯನ್ನು ರಕ್ಷಿಸುವಂತೆ ಸಲಹೆ ನೀಡಿದೆ. ನಾನು ಸ್ಥಳಕ್ಕೆ ಧಾವಿಸಿದಾಗ ಜಿಂಕೆ ಮರಿ ಗಾಬರಿಗೊಂಡಿತ್ತು. ಸುಮಾರು 5 ತಿಂಗಳ ಗಂಡು ಮರಿ ಅದು. ಅದಕ್ಕೆ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಅರಣ್ಯ ರಕ್ಷಕ ಸಿಬ್ಬಂದಿ ಸಹಾಯದಿಂದ ತುರಹಳ್ಳಿ ಮೀಸಲು ಅರಣದೊಳಗೆ ಬಿಟ್ಟುಬಂದೆವು’ ಎಂದು ವೈಲ್ಡ್ಲೈಫ್ ವಾರ್ಡನ್ ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ನಗರೀಕರಣ ತಂದ ತಲೆನೋವು: ತುರಹಳ್ಳಿಯಲ್ಲಿ ಕಿರು ಮೀಸಲು ಅರಣ್ಯ ಹಾಗೂ ರಾಜ್ಯ ಮೀಸಲು ಅರಣ್ಯ ಸೇರಿ ಸುಮಾರು 1,100 ಎಕರೆಗಳಷ್ಟು ವಿಸ್ತೀರ್ಣದ ಸಂರಕ್ಷಿತ ಕಾಡು ಇದೆ. ಇಲ್ಲಿ ಸುಮಾರು 150ಕ್ಕೂ ಅಧಿಕ ಜಿಂಕೆಗಳಿವೆ. ಈ ಕಾಡಿನ ಸುತ್ತಮುತ್ತಲಿನ ಪ್ರದೇಶ ತ್ವರಿತಗತಿಯಲ್ಲಿ ನಗರೀಕರಣಗೊಳ್ಳುತ್ತಿರುವುದು ವನ್ಯಜೀವಿಗಳ ಪಾಲಿಗೆ ಆತಂಕ ತಂದೊಡ್ಡಿದೆ.</p>.<p>ಮೂರು ತಿಂಗಳಿನಿಂದೀಚೆಗೆ ಇಲ್ಲಿನ ಎರಡು ಜಿಂಕೆಗಳು ಬೀದಿನಾಯಿಗಳ ದಾಳಿಗೆ ಬಲಿಯಾಗಿವೆ. ತಿಂಗಳ ಹಿಂದೆ ಒಂದು 3 ವರ್ಷದ ಗಂಡು ಜಿಂಕೆಯನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದ್ದವು. ಆವರಣ ಗೋಡೆಯೊಂದನ್ನು ಜಿಗಿಯುವಾಗ ಆ ಜಿಂಕೆಯ ಕಾಲು ಮುರಿದಿತ್ತು. ಬಳಿಕ ಅದು ಕೊನೆಯುಸಿರೆಳೆದಿತ್ತು.</p>.<p>‘ತುರಹಳ್ಳಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗುತ್ತಿರುವುದು ನಿಜ. ಬೀದಿನಾಯಿಗಳು ಕಾಡಿನೊಳಗೆ ನುಗ್ಗದಂತೆ ತಡೆಯುವ ವಿಚಾರದಲ್ಲಿ ನಿಸ್ಸಹಾಯಕರು. ನಾಯಿಗಳನ್ನು ಸ್ಥಳಾಂತರಿಸಲು ಅವಕಾಶ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತುರಹಳ್ಳಿ ಅರಣ್ಯ ಪ್ರದೇಶವು ಪಾಲಿಕೆ ವ್ಯಾಪ್ತಿಯಲ್ಲಿ ಬರುತ್ತದೆ.ಹಾಗಾಗಿ ಬೀದಿನಾಯಿಗಳ ಸಮಸ್ಯೆಗೆ ಬಿಬಿಎಂಪಿಯವರೇ ಪರಿಹಾರ ಕಂಡುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.</p>.<p>ಸಂರಕ್ಷಿತ ಅರಣ್ಯದ ಸೆರಗಿನಲ್ಲೇ ಬನಶಂಕರಿ 6ನೇ ಹಂತದ ಬಡಾವಣೆ ನಿರ್ಮಾಣವಾಗಿದ್ದು ಇಲ್ಲಿನ ಕಾಡುಪ್ರಾಣಿಗಳ ಪಾಲಿಕೆ ಆತಂಕ ತಂದೊಡ್ಡಿದೆ. ನೈಸ್ ರಸ್ತೆಯೂ ಸೇರಿದಂತೆ ಒಟ್ಟು ಮೂರು ರಸ್ತೆಗಳು ತುರಹಳ್ಳಿ ಅರಣ್ಯವನ್ನು ಛಿದ್ರಗೊಳಿಸಿವೆ.</p>.<p>‘ಇಲ್ಲಿನ ರಸ್ತೆಗಳಲ್ಲಿ ಸದಾ ವಾಹನ ಸಂಚಾರ ಇರುವುದರಿಂದ ಕಾಡುಪ್ರಾಣಿಗಳು ರಸ್ತೆ ದಾಟಲು ಭಯಪಡುತ್ತವೆ. ಈ ಹಿಂದೆ, ಇಲ್ಲಿನ ಕಾಡುಪ್ರಾಣಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರದೇಶ ಹಾಗೂ ಸಾವನದುರ್ಗ ಕಾಡು ಪ್ರದೇಶಗಳಿಗೆ ನಿರಾತಂಕವಾಗಿ ಓಡಾಡಲು ಅವಕಾಶ ಇತ್ತು. ಈಗ ಅವುಗಳ ಚಟುವಟಿಕೆ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರಸನ್ನ ಕುಮಾರ್.</p>.<p>‘ಕಾಡು ಪ್ರಾಣಿಗಳ ವಲಸೆಗೆ ಅವಕಾಶ ಇಲ್ಲದಿರುವುದು ಸಂತಾನೋತ್ಪಾದನಾ ಚಟುವಟಿಕೆ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದರು.</p>.<p>***</p>.<p>ಒಮ್ಮೆ ಕಾಡುಪ್ರಾಣಿಗಳ ಮಾಂಸದ ರುಚಿ ಸಿಕ್ಕರೆ ಸಾಕು ಬೀದಿನಾಯಿಗಳು ಮತ್ತೆ ಮತ್ತೆ ಅದಕ್ಕೆ ಹಾತೊರೆಯುತ್ತವೆ. ತುರಹಳ್ಳಿ ಆಸುಪಾಸಿನಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣಕ್ಕೆ ಬಿಬಿಎಂಪಿ ಕ್ರಮಕೈಗೊಳ್ಳಬೇಕು<br /><strong>–ಪ್ರಸನ್ನ ಕುಮಾರ್, ವೈಲ್ಡ್ಲೈಫ್ ವಾರ್ಡನ್</strong></p>.<p>ತುರಹಳ್ಳಿ ಸಂರಕ್ಷಿತ ಅರಣ್ಯವು ನಗರದ ಸೆರಗಿನಲ್ಲೇ ಇರುವುದರಿಂದ ವನ್ಯಜೀವಿಗಳ ಸಂರಕ್ಷಣೆ ಕಠಿಣ ಸವಾಲು. ಆದರೂ ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ<br /><strong>-ಪ್ರಾಣೇಶ ದೇಶಪಾಂಡೆ, ವಲಯ ಅರಣ್ಯ ಅಧಿಕಾರಿ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>