<p><strong>ಬೆಂಗಳೂರು:</strong>ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್ ಕಾರಿಡಾರ್ ಕುರಿತು ನಾಗರಿಕರು ಹೇಳುವುದೇನು?</p>.<p><strong>ರೈತ ಕುಟುಂಬಗಳಿಗೆ ವಿಮೆ ಮಾಡಿಸಲಿ</strong></p>.<p>ಎಲಿವೇಟೆಡ್ ಕಾರಿಡಾರ್ ಯೋಜನೆಯ ಅಗತ್ಯ ಸದ್ಯಕ್ಕಿಲ್ಲ. ಬದಲಿಗೆ ಆ ಹಣವನ್ನು ಸರ್ಕಾರ ಕೃಷಿಗೆ ಉಪಯೋಗಿಸಿ ರೈತ ಕುಟುಂಬಗಳಿಗೆ ಜೀವ ವಿಮೆ ಮಾಡಿಕೊಡಬೇಕು. ರೈತರು ಬೆಳೆದ ಬೆಳೆಗಳಿಗೆ ಗರಿಷ್ಠ ದರ ನಿಗದಿ ಮಾಡಬೇಕು. ಅಲ್ಲದೆ, ಇರುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು.</p>.<p><strong>–ಶಿವಶಂಕರ ಎಸ್.,</strong>ಮುತ್ತರಾಯನಹಳ್ಳಿ</p>.<p><strong>ಜನರಲ್ಲಿ ಅರಿವು ಮೂಡಿಸಬೇಕು</strong></p>.<p>ವಾಹನ ದಟ್ಟಣೆಯಿಂದ ಮಾಲಿನ್ಯ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಯೋಜನೆಯಿಂದ ಅದು ಕಡಿಮೆಯಾಗಲಿದೆ. ಆದ್ದರಿಂದ ಇದರಕುರಿತು ಜನರಲ್ಲಿ ಅರಿವು ಮೂಡಿಸಬೇಕು.</p>.<p><strong>–ಶೈಲಾವತಿ ದೇವಿ,</strong> ತ್ಯಾಗರಾಜ ನಗರ</p>.<p><strong>ನಾಲ್ಕು ಗಾಡಿ ಹೊಂದುವುದಕ್ಕೆ ತಡೆ ಹಾಕಿ</strong></p>.<p>ಎಲಿವೇಟೆಡ್ ಕಾರಿಡಾರ್ ನಿರ್ಮಿಸಿದರೂ ವಾಹನ ದಟ್ಟಣೆ ಕಡಿಮೆಯಾಗುವುದು ಕಷ್ಟ. ಇರುವ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.ಒಂದು ಕುಟುಂಬ ನಾಲ್ಕು ಗಾಡಿ, ಒಂದು ಕಾರು ಹೊಂದುವುದಕ್ಕೆ ತಡೆ ತನ್ನಿ. ಮರಗಳ ಮಾರಣಹೋಮವನ್ನು ತಪ್ಪಿಸಬಹುದು.</p>.<p><strong>–ನಾಗವೇಣಿ ಎಂ.</strong>, ಆರ್.ಟಿ.ನಗರ</p>.<p><strong>ಯಾರಿಗೆ ಬೇಕು ಸ್ವಾಮಿ?</strong></p>.<p>ಇರುವ ರಸ್ತೆಗಳನ್ನು ಸರಿಪಡಿಸುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಹೀಗಿರುವಾಗ ₹25 ಸಾವಿರ ಕೋಟಿ ವೆಚ್ಚದ ಎಲಿವೇಟೆಡ್ ಕಾರಿಡಾರ್ ಯಾರಿಗೆ ಬೇಕು ಸ್ವಾಮಿ?</p>.<p><strong>–ಶಿವಕುಮಾರ ಎಂ.,</strong>ಕೆ.ಪಿ. ಅಗ್ರಹಾರ</p>.<p><strong>ಟೌನ್ಶಿಪ್ ಜಾರಿಯಾದರೆ ಕಾರಿಡಾರ್ ಅಗತ್ಯವಿಲ್ಲ</strong></p>.<p>ನಗರದ ಹೊರಭಾಗದ ನಾಲ್ಕು ದಿಕ್ಕುಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೌನ್ಶಿಪ್ ಯೋಜನೆ ಸಮರ್ಪಕವಾಗಿ ಜಾರಿಯಾದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಆಗ ಎಲಿವೇಟೆಡ್ ನಿರ್ಮಾಣ ಮಾಡುವ ಅಗತ್ಯವಿಲ್ಲ.</p>.<p><strong>–ಸುರೇಶ್ ಎಂ</strong>., ಹೆಬ್ಬಾಳ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್ ಕಾರಿಡಾರ್ ಕುರಿತು ನಾಗರಿಕರು ಹೇಳುವುದೇನು?</p>.<p><strong>ರೈತ ಕುಟುಂಬಗಳಿಗೆ ವಿಮೆ ಮಾಡಿಸಲಿ</strong></p>.<p>ಎಲಿವೇಟೆಡ್ ಕಾರಿಡಾರ್ ಯೋಜನೆಯ ಅಗತ್ಯ ಸದ್ಯಕ್ಕಿಲ್ಲ. ಬದಲಿಗೆ ಆ ಹಣವನ್ನು ಸರ್ಕಾರ ಕೃಷಿಗೆ ಉಪಯೋಗಿಸಿ ರೈತ ಕುಟುಂಬಗಳಿಗೆ ಜೀವ ವಿಮೆ ಮಾಡಿಕೊಡಬೇಕು. ರೈತರು ಬೆಳೆದ ಬೆಳೆಗಳಿಗೆ ಗರಿಷ್ಠ ದರ ನಿಗದಿ ಮಾಡಬೇಕು. ಅಲ್ಲದೆ, ಇರುವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು.</p>.<p><strong>–ಶಿವಶಂಕರ ಎಸ್.,</strong>ಮುತ್ತರಾಯನಹಳ್ಳಿ</p>.<p><strong>ಜನರಲ್ಲಿ ಅರಿವು ಮೂಡಿಸಬೇಕು</strong></p>.<p>ವಾಹನ ದಟ್ಟಣೆಯಿಂದ ಮಾಲಿನ್ಯ ಹೆಚ್ಚಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಯೋಜನೆಯಿಂದ ಅದು ಕಡಿಮೆಯಾಗಲಿದೆ. ಆದ್ದರಿಂದ ಇದರಕುರಿತು ಜನರಲ್ಲಿ ಅರಿವು ಮೂಡಿಸಬೇಕು.</p>.<p><strong>–ಶೈಲಾವತಿ ದೇವಿ,</strong> ತ್ಯಾಗರಾಜ ನಗರ</p>.<p><strong>ನಾಲ್ಕು ಗಾಡಿ ಹೊಂದುವುದಕ್ಕೆ ತಡೆ ಹಾಕಿ</strong></p>.<p>ಎಲಿವೇಟೆಡ್ ಕಾರಿಡಾರ್ ನಿರ್ಮಿಸಿದರೂ ವಾಹನ ದಟ್ಟಣೆ ಕಡಿಮೆಯಾಗುವುದು ಕಷ್ಟ. ಇರುವ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.ಒಂದು ಕುಟುಂಬ ನಾಲ್ಕು ಗಾಡಿ, ಒಂದು ಕಾರು ಹೊಂದುವುದಕ್ಕೆ ತಡೆ ತನ್ನಿ. ಮರಗಳ ಮಾರಣಹೋಮವನ್ನು ತಪ್ಪಿಸಬಹುದು.</p>.<p><strong>–ನಾಗವೇಣಿ ಎಂ.</strong>, ಆರ್.ಟಿ.ನಗರ</p>.<p><strong>ಯಾರಿಗೆ ಬೇಕು ಸ್ವಾಮಿ?</strong></p>.<p>ಇರುವ ರಸ್ತೆಗಳನ್ನು ಸರಿಪಡಿಸುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಹೀಗಿರುವಾಗ ₹25 ಸಾವಿರ ಕೋಟಿ ವೆಚ್ಚದ ಎಲಿವೇಟೆಡ್ ಕಾರಿಡಾರ್ ಯಾರಿಗೆ ಬೇಕು ಸ್ವಾಮಿ?</p>.<p><strong>–ಶಿವಕುಮಾರ ಎಂ.,</strong>ಕೆ.ಪಿ. ಅಗ್ರಹಾರ</p>.<p><strong>ಟೌನ್ಶಿಪ್ ಜಾರಿಯಾದರೆ ಕಾರಿಡಾರ್ ಅಗತ್ಯವಿಲ್ಲ</strong></p>.<p>ನಗರದ ಹೊರಭಾಗದ ನಾಲ್ಕು ದಿಕ್ಕುಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೌನ್ಶಿಪ್ ಯೋಜನೆ ಸಮರ್ಪಕವಾಗಿ ಜಾರಿಯಾದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಆಗ ಎಲಿವೇಟೆಡ್ ನಿರ್ಮಾಣ ಮಾಡುವ ಅಗತ್ಯವಿಲ್ಲ.</p>.<p><strong>–ಸುರೇಶ್ ಎಂ</strong>., ಹೆಬ್ಬಾಳ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>