<p><strong>ಬೆಂಗಳೂರು:</strong> ‘ಓದು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ದೃಶ್ಯ ಮಾಧ್ಯಮದ ಮೂಲಕ ಗಾಂಧೀಜಿಯವರ ಚಿಂತನೆಗಳನ್ನು ಜನರಿಗೆ ತಲುಪಿಸಬೇಕಾದ ಅಗತ್ಯವಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಅಭಿಪ್ರಾಯಪಟ್ಟರು.</p>.<p>ಭಾರತೀಯ ವಿದ್ಯಾಭವನ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ನಗರದಲ್ಲಿಆಯೋಜಿಸಿರುವ ಮೂರು ದಿನಗಳ ‘ಮಹಾತ್ಮ ಗಾಂಧಿ–150’ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಗಾಂಧೀಜಿಯವರಿಗೆ ವೈಯಕ್ತಿವಾಗಿ ಚಲನಚಿತ್ರಗಳಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಚಲನಚಿತ್ರ, ಯಂತ್ರ ಸಂಸ್ಕೃತಿಯ ಪ್ರತಿನಿಧಿ ಹಾಗೂ ಅದೊಂದು ವ್ಯವಹಾರ ಎನ್ನುವ ಚಿಕ್ಕ ನಿರ್ಲಕ್ಷ್ಯ ಇತ್ತು. ವಿಪರ್ಯಾಸವೆಂದರೆ ಅವರು ಇಷ್ಟಪಡದ ಮಾಧ್ಯಮದ ಮೂಲಕವೇ ಜಗತ್ತಿನ ಯುವಜನತೆಯನ್ನು ತಲುಪಿದ್ದಾರೆ’ ಎಂದರು.</p>.<p>‘ಗಾಂಧೀಜಿಯವರ ಕುರಿತಾದ ಸಿನಿಮಾಗಳು ಪ್ರತಿ ಬಾರಿಯೂ ಹೊಸ ಹೊಳಹು ಹಾಗೂ ಅರ್ಥವನ್ನು ಕೊಡುತ್ತವೆ. ಕೆಲವೊಂದು ವಿಷಯದಲ್ಲಿ ಅವರನ್ನು ಒಪ್ಪದಿದ್ದರೂ, ಅವರ ಎದುರು ಮಂಡಿಯೂರಿ ಪ್ರಾರ್ಥಿಸುವಂತೆ ಮಾಡುತ್ತವೆ’ ಎಂದು ಹೇಳಿದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ,‘ಯುದ್ಧ ಬಯಸುವುದನ್ನೇ ರಾಷ್ಟ್ರಪ್ರೇಮ ಎಂದುಕೊಂಡಿರುವ ಪ್ರಸ್ತುತ ದಿನಮಾನಗಳಲ್ಲಿ ಗಾಂಧೀಜಿಯವರ ವಿಚಾರಧಾರೆಗಳು ತುಂಬಾ ಮುಖ್ಯವಾಗುತ್ತವೆ’ ಎಂದು ಹೇಳಿದರು.</p>.<p>‘ಗಾಂಧಿಯನ್ನು ವ್ಯಕ್ತಿಯಾಗಿ ನೋಡಬಾರದು ಒಂದು ತತ್ವವಾಗಿ ನೋಡಬೇಕು. ಅವರು ನಂಬಿದ ಬಹುತ್ವದ ಮೌಲ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಂಡು ಹೋಗಬೇಕು’ ಎಂದರು.</p>.<p>ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಾತನಾಡಿ,‘ಗಾಂಧಿ ಒಬ್ಬ ಶ್ರೇಷ್ಠ ಬರಹಗಾರರಾಗಿದ್ದರು. ಅವರ ಬರಹಗಳನ್ನು 100 ಸಂಪುಟದಲ್ಲಿ ಸಂಪಾದಿಸಲಾಗಿದೆ’ ಎಂದು ತಿಳಿಸಿದರು.ರಿಚರ್ಡ್ ಅಟೆನ್ಬರೊ ನಿರ್ದೇಶನದ ‘ಗಾಂಧಿ’ ಚಿತ್ರ ಪ್ರದರ್ಶನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಓದು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ದೃಶ್ಯ ಮಾಧ್ಯಮದ ಮೂಲಕ ಗಾಂಧೀಜಿಯವರ ಚಿಂತನೆಗಳನ್ನು ಜನರಿಗೆ ತಲುಪಿಸಬೇಕಾದ ಅಗತ್ಯವಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಅಭಿಪ್ರಾಯಪಟ್ಟರು.</p>.<p>ಭಾರತೀಯ ವಿದ್ಯಾಭವನ, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ನಗರದಲ್ಲಿಆಯೋಜಿಸಿರುವ ಮೂರು ದಿನಗಳ ‘ಮಹಾತ್ಮ ಗಾಂಧಿ–150’ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಗಾಂಧೀಜಿಯವರಿಗೆ ವೈಯಕ್ತಿವಾಗಿ ಚಲನಚಿತ್ರಗಳಲ್ಲಿ ಅಷ್ಟು ಆಸಕ್ತಿ ಇರಲಿಲ್ಲ. ಚಲನಚಿತ್ರ, ಯಂತ್ರ ಸಂಸ್ಕೃತಿಯ ಪ್ರತಿನಿಧಿ ಹಾಗೂ ಅದೊಂದು ವ್ಯವಹಾರ ಎನ್ನುವ ಚಿಕ್ಕ ನಿರ್ಲಕ್ಷ್ಯ ಇತ್ತು. ವಿಪರ್ಯಾಸವೆಂದರೆ ಅವರು ಇಷ್ಟಪಡದ ಮಾಧ್ಯಮದ ಮೂಲಕವೇ ಜಗತ್ತಿನ ಯುವಜನತೆಯನ್ನು ತಲುಪಿದ್ದಾರೆ’ ಎಂದರು.</p>.<p>‘ಗಾಂಧೀಜಿಯವರ ಕುರಿತಾದ ಸಿನಿಮಾಗಳು ಪ್ರತಿ ಬಾರಿಯೂ ಹೊಸ ಹೊಳಹು ಹಾಗೂ ಅರ್ಥವನ್ನು ಕೊಡುತ್ತವೆ. ಕೆಲವೊಂದು ವಿಷಯದಲ್ಲಿ ಅವರನ್ನು ಒಪ್ಪದಿದ್ದರೂ, ಅವರ ಎದುರು ಮಂಡಿಯೂರಿ ಪ್ರಾರ್ಥಿಸುವಂತೆ ಮಾಡುತ್ತವೆ’ ಎಂದು ಹೇಳಿದರು.</p>.<p>ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ,‘ಯುದ್ಧ ಬಯಸುವುದನ್ನೇ ರಾಷ್ಟ್ರಪ್ರೇಮ ಎಂದುಕೊಂಡಿರುವ ಪ್ರಸ್ತುತ ದಿನಮಾನಗಳಲ್ಲಿ ಗಾಂಧೀಜಿಯವರ ವಿಚಾರಧಾರೆಗಳು ತುಂಬಾ ಮುಖ್ಯವಾಗುತ್ತವೆ’ ಎಂದು ಹೇಳಿದರು.</p>.<p>‘ಗಾಂಧಿಯನ್ನು ವ್ಯಕ್ತಿಯಾಗಿ ನೋಡಬಾರದು ಒಂದು ತತ್ವವಾಗಿ ನೋಡಬೇಕು. ಅವರು ನಂಬಿದ ಬಹುತ್ವದ ಮೌಲ್ಯವನ್ನು ಪ್ರತಿಯೊಬ್ಬರು ಕಾಪಾಡಿಕೊಂಡು ಹೋಗಬೇಕು’ ಎಂದರು.</p>.<p>ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಾತನಾಡಿ,‘ಗಾಂಧಿ ಒಬ್ಬ ಶ್ರೇಷ್ಠ ಬರಹಗಾರರಾಗಿದ್ದರು. ಅವರ ಬರಹಗಳನ್ನು 100 ಸಂಪುಟದಲ್ಲಿ ಸಂಪಾದಿಸಲಾಗಿದೆ’ ಎಂದು ತಿಳಿಸಿದರು.ರಿಚರ್ಡ್ ಅಟೆನ್ಬರೊ ನಿರ್ದೇಶನದ ‘ಗಾಂಧಿ’ ಚಿತ್ರ ಪ್ರದರ್ಶನಗೊಂಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>