‘ಜಿಎಸ್ಎಸ್ ಕುರಿತು ನಾಡಿನಾದ್ಯಂತ ಪ್ರಚಾರೋಪನ್ಯಾಸಗಳನ್ನು ಮಾಡುವುದಷ್ಟೆ ಅಲ್ಲದೇ, ಜಾಲತಾಣ ಆರಂಭಿಸಿ, ಲೇಖನಗಳನ್ನು ಬಿತ್ತರಿಸಲಿದ್ದೇವೆ’ ಎಂದು ಅವರು ಹೇಳಿದರು.‘ವೈಜ್ಞಾನಿಕ ದೃಷ್ಟಿಕೋನ, ವೈಚಾರಿಕತೆಯ ಎಚ್ಚರದಿಂದ ಪರಂಪರೆಯನ್ನು ಬೆಳೆಸಿದ ಕೀರ್ತಿ ಅವರದ್ದು.ಅವರ ಕಾವ್ಯಗಳ ನಿಲುವು ಬದುಕಿನ ನಿಲುವೂ ಆಗಿತ್ತು. ಶ್ರದ್ಧೆ, ಶ್ರಮ, ಗುಣಗ್ರಾಹಿತ್ವದ ಶಿಷ್ಯರನ್ನೇ ಬೆಳೆಸಿದವರು. ವಿಚಾರ, ವಾಗ್ವಾದಗಳಿಗೆ ಮುಕ್ತ ಅವಕಾಶ ನೀಡಿದವರು.ಅವರ ಆಶಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿವೆ. ಅವರ ಹೆಸರಿನಲ್ಲಿ ಕಾವ್ಯ ಮೀಮಾಂಸೆ, ವಿಮರ್ಶೆಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ನೀಡುವ ಉದ್ದೇಶವೂ ಇದೆ’ ಎಂದು ಅವರು ತಿಳಿಸಿದರು.