ಬೆಂಗಳೂರು: ಮೂವರು ಪ್ರಾದೇಶಿಕ ಆಯುಕ್ತರು ಹಾಗೂ ಒಬ್ಬರು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಾದೇಶಿಕ ಆಯುಕ್ತರು ಈವರೆಗೆ ನಿರ್ವಹಿಸುತ್ತಿದ್ದ ಹುದ್ದೆಯ ಹೆಚ್ಚುವರಿ ಹೊಣೆಯನ್ನೂ ಅವರಿಗೆ ವಹಿಸಲಾಗಿದೆ.
ಯಾರು ವರ್ಗಾವಣೆ: ಟಿ.ಕೆ. ಅನಿಲ್ಕುಮಾರ್–ಪ್ರಾದೇಶಿಕ ಆಯುಕ್ತ, ಮೈಸೂರು. ಸುಬೋಧ್ ಯಾದವ್–ಪ್ರಾದೇಶಿಕ ಆಯುಕ್ತ, ಕಲಬುರ್ಗಿ. ಶಿವಯೋಗಿ ಕಳಸದ–ಪ್ರಾದೇಶಿಕ ಆಯುಕ್ತ, ಬೆಂಗಳೂರು. ಪ್ರಿಯಾಂಕಾ ಮೇರಿ ಫ್ರಾನ್ಸಿಸ್– ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ. ಹೆಪ್ಸಿಬಾ ರಾಣಿ ಕೊರ್ಲಪಾಟಿ–ಜಿಲ್ಲಾಧಿಕಾರಿ, ಉಡುಪಿ.