<p><strong>ಕಾಸರಗೋಡು</strong>: ಶ್ರೀಲಂಕಾ ಬಾಂಬ್ ಸ್ಫೋಟದ ಬಳಿಕ ಕಾಸರಗೋಡಿನಿಂದ ಎನ್ಐಎ ಕಸ್ಟಡಿಗೆ ಪಡೆದ ಇಬ್ಬರು, ಐಎಸ್ ಜತೆ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ದೊರೆತಿದ್ದು, ಇಬ್ಬರನ್ನೂ ಆರೋಪಿಗಳೆಂದು ಘೋಷಿಸಲಾಗಿದೆ. ಐಎಸ್ ಸಂಘಟನೆ ಜತೆ ಸಂಬಂಧ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>.<p>ಕಾಸರಗೋಡು ಕೂಡ್ಲು ಕಾಳ್ಯಂಗಾಡು ನಿವಾಸಿ ಅಹಮ್ಮದ್ ಅರಾಫತ್ (23) ಹಾಗೂ ವಿದ್ಯಾನಗರ ನಾಯಮ್ಮಾರಮೂಲೆ ಅಬೂಬಕ್ಕರ್ ಸಿದ್ದಿಕ್ (28) ಬಂಧಿತ ಆರೋಪಿಗಳು. ಶ್ರೀಲಂಕಾ ಸ್ಫೋಟದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಕೊಚ್ಚಿಯ ಎನ್ಐಎ ದಳ ಕಸ್ಟಡಿಗೆ ಪಡೆದಿತ್ತು.</p>.<p>ಶ್ರೀಲಂಕಾದಲ್ಲಿ ಆತ್ಮಾಹುತಿ ಸ್ಫೋಟ ನಡೆಸಿದ ತೌಹೀತ್ ಜಮಾಯತ್ನ ನಾಯಕ ಸಫ್ರಾನ್ ಹಾಶೀಂನ ಅಭಿಮಾನಿಗಳಾಗಿದ್ದು, ಹಾಶೀಂನ ಭಾಷಣದಿಂದ ಸ್ಫೂರ್ತಿ ಪಡೆದಿದ್ದರು ಎನ್ನಲಾಗಿದೆ. ಇವರಿಬ್ಬರ ಜತೆಗೆ ಕೊಲ್ಲಂ ನಿವಾಸಿ ಮೊಹಮ್ಮದ್ ಫೈಜಲ್ ಎಂಬಾತನನ್ನೂ ಐಎಸ್ ಸಂಬಂಧದ ಆಧಾರದಲ್ಲಿ ಆರೋಪಿ ಎಂದು ಘೋಷಿಸಲಾಗಿದೆ. ಈ ಬಗ್ಗೆ ಎನ್ಐಎ ತಂಡ, ಕೊಚ್ಚಿ ವಿಶೇಷ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದೆ.</p>.<p>ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲ್ಘಾಟ್ನ ರಿಯಾಜ್ ಅಬೂಬಕ್ಕರ್ ಮೇಲೆಯೂ ಆರೋಪ ಹೊರಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಕಸ್ಟಡಿಗೆ ಪಡೆದಿದೆ. ಜಹ್ರಾನ್ ಹಾಶೀಮ್ ಜತೆ ರಿಯಾಜ್ ವಿಚಾರ ವಿನಿಮಯ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.</p>.<p>ಕಾಸರಗೋಡಿನಿಂದ 2016 ರಲ್ಲಿ 20 ಮಂದಿ ಸಿರಿಯಾದ ಐಎಸ್ ಕೇಂದ್ರಕ್ಕೆ ಹೋಗಿದ್ದು, ಅದರ ಸೂತ್ರಧಾರನಾದ ತ್ರಿಕರಿಪುರದ ರಾಶೀದ್ ಜತೆ, ಕಾಸರಗೋಡಿನ ಇಬ್ಬರ ಸಹಿತ ನಾಲ್ವರು ಆರೋಪಿಗಳು ನಿಕಟ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇರೆಗೆ ಇವರನ್ನು ಬಂಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು</strong>: ಶ್ರೀಲಂಕಾ ಬಾಂಬ್ ಸ್ಫೋಟದ ಬಳಿಕ ಕಾಸರಗೋಡಿನಿಂದ ಎನ್ಐಎ ಕಸ್ಟಡಿಗೆ ಪಡೆದ ಇಬ್ಬರು, ಐಎಸ್ ಜತೆ ಸಂಬಂಧ ಹೊಂದಿರುವ ಬಗ್ಗೆ ಮಾಹಿತಿ ದೊರೆತಿದ್ದು, ಇಬ್ಬರನ್ನೂ ಆರೋಪಿಗಳೆಂದು ಘೋಷಿಸಲಾಗಿದೆ. ಐಎಸ್ ಸಂಘಟನೆ ಜತೆ ಸಂಬಂಧ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>.<p>ಕಾಸರಗೋಡು ಕೂಡ್ಲು ಕಾಳ್ಯಂಗಾಡು ನಿವಾಸಿ ಅಹಮ್ಮದ್ ಅರಾಫತ್ (23) ಹಾಗೂ ವಿದ್ಯಾನಗರ ನಾಯಮ್ಮಾರಮೂಲೆ ಅಬೂಬಕ್ಕರ್ ಸಿದ್ದಿಕ್ (28) ಬಂಧಿತ ಆರೋಪಿಗಳು. ಶ್ರೀಲಂಕಾ ಸ್ಫೋಟದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ಕೊಚ್ಚಿಯ ಎನ್ಐಎ ದಳ ಕಸ್ಟಡಿಗೆ ಪಡೆದಿತ್ತು.</p>.<p>ಶ್ರೀಲಂಕಾದಲ್ಲಿ ಆತ್ಮಾಹುತಿ ಸ್ಫೋಟ ನಡೆಸಿದ ತೌಹೀತ್ ಜಮಾಯತ್ನ ನಾಯಕ ಸಫ್ರಾನ್ ಹಾಶೀಂನ ಅಭಿಮಾನಿಗಳಾಗಿದ್ದು, ಹಾಶೀಂನ ಭಾಷಣದಿಂದ ಸ್ಫೂರ್ತಿ ಪಡೆದಿದ್ದರು ಎನ್ನಲಾಗಿದೆ. ಇವರಿಬ್ಬರ ಜತೆಗೆ ಕೊಲ್ಲಂ ನಿವಾಸಿ ಮೊಹಮ್ಮದ್ ಫೈಜಲ್ ಎಂಬಾತನನ್ನೂ ಐಎಸ್ ಸಂಬಂಧದ ಆಧಾರದಲ್ಲಿ ಆರೋಪಿ ಎಂದು ಘೋಷಿಸಲಾಗಿದೆ. ಈ ಬಗ್ಗೆ ಎನ್ಐಎ ತಂಡ, ಕೊಚ್ಚಿ ವಿಶೇಷ ನ್ಯಾಯಾಲಯದಲ್ಲಿ ವರದಿ ಸಲ್ಲಿಸಿದೆ.</p>.<p>ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲ್ಘಾಟ್ನ ರಿಯಾಜ್ ಅಬೂಬಕ್ಕರ್ ಮೇಲೆಯೂ ಆರೋಪ ಹೊರಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆತನನ್ನು ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಕಸ್ಟಡಿಗೆ ಪಡೆದಿದೆ. ಜಹ್ರಾನ್ ಹಾಶೀಮ್ ಜತೆ ರಿಯಾಜ್ ವಿಚಾರ ವಿನಿಮಯ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.</p>.<p>ಕಾಸರಗೋಡಿನಿಂದ 2016 ರಲ್ಲಿ 20 ಮಂದಿ ಸಿರಿಯಾದ ಐಎಸ್ ಕೇಂದ್ರಕ್ಕೆ ಹೋಗಿದ್ದು, ಅದರ ಸೂತ್ರಧಾರನಾದ ತ್ರಿಕರಿಪುರದ ರಾಶೀದ್ ಜತೆ, ಕಾಸರಗೋಡಿನ ಇಬ್ಬರ ಸಹಿತ ನಾಲ್ವರು ಆರೋಪಿಗಳು ನಿಕಟ ಸಂಪರ್ಕ ಹೊಂದಿದ್ದರು ಎಂಬ ಆರೋಪದ ಮೇರೆಗೆ ಇವರನ್ನು ಬಂಧಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>