ನವದೆಹಲಿ: ‘ತೈಲ ಸಂಸ್ಕರಣಾ ಘಟಕಗಳಿಂದ ತ್ಯಾಜ್ಯ ರೂಪದಲ್ಲಿ ಬರುವ ಪೆಟ್ಕೋಕ್, ಘನ ಇಂಗಾಲ, ಮತ್ತು ಕುಲುಮೆ ಎಣ್ಣೆಯನ್ನು, ಉದ್ದಿಮೆಗಳಲ್ಲಿ ಇಂಧನವಾಗಿ ಬಳಸುವುದರ ಮೇಲೆ ವಿಧಿಸಿರುವ ನಿರ್ಬಂಧವು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು’ ಎಂದು ರಾಷ್ಟ್ರೀಯ ಹಸಿರು ಪೀಠವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶುಕ್ರವಾರ ನಿರ್ದೇಶನ ನೀಡಿದೆ.